ಇವಳ ತ೦ಗಿ
ಅವಳ ಪ್ರೀತಿಸಿದವನಿಗೆ
ತಿಳಿಯಿತು ಅ೦ದು
ಇವಳ ತ೦ಗಿ ಇನ್ನೂ
ಚೆನ್ನಗಿದ್ದಾಳಲ್ಲಾ ಎ೦ದು ... ..... ಬುದ್ದಿಯೇ ಬರಲಿಲ್ಲ
ಹೀಗೆ ಒಂದು ಹುಡುಗ ಹುಡುಗಿ;
ಅವಳೆಂದಳು,
'ನನ್ನ ಅಪ್ಪಿಕೊಬೇಡ'ಆತ ಅಪ್ಪಿಕೊಳಲಿಲ್ಲ,
ಆಕೆ ಅಂದಳು,
'ನನಗೆ ಮುತ್ತು ಕೊಡಬೇಡ'ಆತ ಮುತ್ತು ಕೊಡಲಿಲ್ಲ,
ಆಕೆ ಎದ್ದು ಹೋದಳು,,ಪಾಪ ಅವನಿಗೆ ಬುದ್ದಿಯೇ ಬರಲಿಲ್ಲ...........
ಸೈಡಿಗ್ ಬನ್ರಿ
ಬಾ ಎಂದು ಹಂಬಲಿಸಿದವಳು,
ಬಾಗಿಲಲ್ಲಿ ನಿಂತಿಹಳು,
ಓಡಿ ಬಂದ ಪತಿಯ ಕಂಡು,
ಗುಡುಗಿದಳು ಸತಿ ದೇವಿ
,"ಸೈಡಿಗ್ ಬನ್ರಿ"
ಹಾಲಿನವನು ಬರುವನೆಂದು.............
ನೀ....ಬರುವವರೆಗೆ.......
ನನ್ನ ನೀನು ಬಿಟ್ಟು
ಹೋಗುವ ಮುನ್ನ
ಒಮ್ಮೆ ತಿರುಗಿ ನೋಡಿ
ಬಿಡು ಚಂದ್ರನ ಮುಗುಳು
ನಗೆಯನ್ನೊಮ್ಮೆ ಕವಟುಗ
ಲೊಳಗೆ ಭದ್ರವಾಗಿ ಇಟ್ಟು ಕೊಳ್ತೇನೆ
ಎಲ್ಲ ಕಳೆದು ಮತ್ತೆ ನೀ....ಬರುವವರೆಗೆ....... ...
ಪ್ರೀತಿಯ ಸಾವು,,,
ಜಗತ್ತಿನಲ್ಲಿ ಅತಿ ಭೀಕರವಾದ ಸಾವು
ನಮ್ಮ ಸಾವಲ್ಲ..
ನಮ್ಮ ಆಪ್ತರದ್ದು ಅಲ್ಲ..
ಮನಸ್ಸುಗಳ ನಡುವಿನ ಪ್ರೀತಿಯ ಸಾವು,,,
ನಂಬಿಕೆಯ ಸಾವು...
ಕೊನೆವರೆಗೂ ಭೂತವಾಗಿ
ಕಾಡುತ್ತಲೇ ಇರುತ್ತದೆ....
ಕೊಲ್ಲುವ ಮುನ್ನ ಒಮ್ಮೆ ಯೋಚಿಸಿ,,, ....
ಅರ್ಥವಾಗುತ್ತಿಲ್ಲ
ಕಂಡೆ ಅವಳನ್ನು ಅದೊಂದು ದಿನ..
ಬೆಳೆಸಿದೆ ಅವಳೊಡನೆ ಗಾಢವಾದ ಸ್ನೇಹನ..
ಅನಿಸುತಿದೆ ನನಗೆ ತುಂಬಾ ಹತ್ತಿರ ಅವಳ ಮನ...
ಅರ್ಥವಾಗುತ್ತಿಲ್ಲ ನನಗೆ ಇದು ಸ್ನೇಹನ ಪ್ರೀತಿನಾ?.......
ಕವಿತೆ
ಎಸ್ಟು ಬರೆದರೂ
ಮೂಡಲಿಲ್ಲ ಕವಿತೆ
ಏಕೆ೦ದು ಕೇಳಿದರೆ
ಕಲ್ಪನೆಯ ಕೊರತೆ .......
ಹೃದಯಕ್ಕೆ ಮೋಸ
ಮುಖದಲ್ಲಿ ಸಾವಿರ ಭಾವನೆಗಳನ್ನ
ವ್ಯಕ್ತಪಡಿಸಬಹುದು,,
ಆದರೆ ಅದರಲ್ಲಿ ಹೃದಯದ ನೋವುಗಳನ್ನ
ತೋರಿಸದೇ ಮುಚ್ಚಿಹಾಕಬಹುದು..
ಜಗತ್ತಿಗೆಲ್ಲ ನೀವು ನೋವು
ಮುಚ್ಚಿಟ್ಟು ನಗು ಮುಖ ತೋರಿಸಬಹುದು....
ಆದರೆ...
ನಿಮಗೆ ನೆನಪಿರಲಿ...
ನಿಮ್ಮ ಮುಖದಿಂದ ನಿಮ್ಮ
ಹೃದಯಕ್ಕೆ ಮೋಸ ಮಾಡ್ತಾ ಇದ್ದೀರಾ ಅನ್ನೋದು........
ನೆನಪಾಗಿ ಉಳಿದವರು ...
ನೆನಪಾಗಿ ಉಳಿದವರು
ನೆನಪಲ್ಲಿ ನೆನಪಾಗಿ
ನೆನೆದಾಗ ಬ೦ದವರು
ನೆನೆಯದೆಯೂ ನೆನಪಾಗಿ
ನೆನಪಿಗೇ ಬರುವವರು
ನಿಜ ಅವರು ನೆನಪಾಗಿ ಉಳಿದವರು ......
ನಲ್ಲ
ಬೇಡ ಬೇಡವೆ೦ದರೂ
ಬಿಡದೇ ಬರೆದು ಒ೦ದು
ಪ್ರೇಮ ಪತ್ರ ತಿಳಿದೋ
ತಿಳಿಯದೇಯೋ ಕೊಟ್ಟು
ಕಳುಹಿಸಿದ್ದ ನನ್ನ ಗ೦ಡನ ಹತ್ರ ........
ಸ್ವಾರ್ಥ
ಕಳೆದು ಹೋಗುತಿದೆ ಮನವು
ಕಾಣದ ಕೈಗಳ ಸ್ವಾರ್ಥದಲಿ
ಕಳೆದುಕೊಳ್ಳದಿರು ನಿನ್ನ
ತನವಪರರ ಆಸೆಗಳ ಸಾರ್ಥಕತೆಯಲಿ....
ಅರುಣ ಸಿರಿಗೆರೆ
ನಾ ನಿನ್ನ ತಡೆಯುವುದರೊಳಗಾಗಿ
ನನ್ನೆದೆಯಲ್ಲಿ ಹೆಜ್ಜೆಯೂರಿದೆ
ಏಕೆಂದು ನಾ ಕೇಳುವುದರೊಳಗೆ
ಕಾಣದೆ ನೀ ಮಾಯವಾದೆ
ಗುರುತುಗಳ ಅಳಿಸಲಾಗದೆ
ನಾ ನಿನ್ನ ಹುಡುಕುತ್ತಿದ್ದೆ
ಆದರೆ ನೀ ಕಣ್ತಪ್ಪಿಸಿ
ನನ್ನ ಭಾವಗಳಲ್ಲಿ ಬೆರೆತಿದ್ದೆ......
ಗುರುಜೀ.....
ಗುರುವೇ ಗುರುವೇ ಹೇಗೆ ಬಣ್ಣಿಸಲಿ
ಈ ಗುರುಜಿಯ ಚಟ
ತಿಳಿಯಲಿಲ್ಲ ಈ ಸ್ವಾಮಿಯದು
ಯಾವ ಮಠ
ಜೊತೆಗೆ ಈ ಗುರುವಿಗ್ಯಾಕೆ
ನನ್ನ ಮೇಲೆ ಚುಟುಕ ಬರೆಯುವ ಹಠ .... ..........
ಮುಕ್ತಿ - ಭಕ್ತಿ
ಮಲಗುವಾಗ ನೆನೆ ನೆನೆದು
ಕೈ ಮುಗಿದರೆ ಗುರುವಿಗೆ
ಅದು ಭಕುತಿ ಶಾಶ್ವತವಾಗಿ ಕ
ಣ್ಮುಚ್ಹುವಾಗ ದೇವನೊಲಿದರೇ
ಅದೇ ಮುಕುತಿ ತಿಳಿಯೋ
ಮ೦ಕು ತಿಮ್ಮ ಎ೦ದ ಸರ್ವಜ್ಞ....
ಅವಾ೦ತರ
ಮುತ್ತು ಕೊಟ್ಟ ನಲ್ಲ
ಮಾತೇ ಆಡಲಿಲ್ಲ
ಕೇಳದೇ ಮುತ್ತಿಕ್ಕಿದ್ದಕ್ಕೆ
ಉದುರಿಸಿದ್ದೆ ಅವನ ಹಲ್ಲ ...!
ಒಮ್ಮೊಮ್ಮೆ ಹೀಗೇ .........
ಹೀಗೊಮ್ಮೆ ನೆನಪಾಯಿತು
ನೋವು ನಲಿವಿನ
ಹಿ೦ದಿನ ದಿನಗಳು
ಅಸ್ಟರಲ್ಲೇ ಕ೦ಬನಿಯಿ೦ದ
ಮ೦ಜಾಗಿದ್ದವು
ಈ ನನ್ನ ಕಣ್ಗಳು .......
" ಮರೆಗುಳಿ "
ಮೊನ್ನೆ ಮೊನ್ನೆ
ನೋಡಿದ ಹಾಗಿದೆ ನಿಮ್ಮನ್ನಾ
ಏಲ್ಲೋ ಕೇಳಿದ ಹಾಗಿದೆ
ಈ ನಗುವನ್ನಾ
ನೀವು ಅವರೇ ..ss
ಇಲ್ಲಾ ಇವರೇ ...sss**
ಓ ನೆನಪಾಯಿತು
ಬಿಡಿನೀವು ನಮ್ಮ ಮನೆಯವರೇ...
ಪ್ರತಿ--ಕ್ರಿಯೆ
ಯಾವಾಗಾ
ನಾ ನಿನ್ನ
ಪ್ರೀತಿ ಮಾಡಿದೆನೋ
ಪ್ರಿಯೆ ಅ೦ದಿನಿ೦ದ ಯಾವುದಕ್ಕೂ
ಇಲ್ಲ ನನ್ನ ಪ್ರತಿಕ್ರಿಯೆ ..........
ಹೆಚ್. ಡು೦ಡಿರಾಜ್
ನಮ್ಮ ನಾಡು
ಸುಕದ ಬೀಡು
ನಿಸ್ಟೆಯಿ೦ದ ದುಡಿದರೆ .........
ಎ೦ದ ನಮ್ಮ ಮುಖ್ಯಮ೦ತ್ರಿ
ನಿಸ್ಟೆಯಿ೦ದ ದುಡಿದರೇ ???
Tuesday, January 8, 2008
Tuesday, January 1, 2008
SNEHADA KURUHU....
ಒದ್ದೆಯಾದ ಕಣ್ಣು ಮತ್ತೆ ಕದ್ದು ಅಳುತ್ತಲೇ ಇದೆ
ಹ್ರದಯದಾಳದಲ್ಲೆಲ್ಲೋ ಅಳಲ ಬಚ್ಚಿಟ್ಟುಕೊಂಡು
ಮಂದ ಬೆಳಕಿನ ಆ ಸಂಜೆ ಕಣ್ಮುಚ್ಚಿ ಕುಳಿತೇ ಇದ್ದೆ
ಮರುದಿನ ಇಬ್ಬನಿ ಚುಂಬಿಸುವವರೆಗೂ..
ಮುಚ್ಚಿದ್ದ ಕಣ್ಣು ತೆರೆದು ಸುತ್ತಲೂ ದಿಟ್ಟಿಸಿದೆ
ಕಂಡಿತು ಆ ಹಳೆ ನೆನಪು ಸಾಲು ಸಾಲಾಗಿ
ಅಂದು ನೀನಿರೆ ಆ ಮಧುರ ಉದ್ಯಾನದಿ
ಅದೆಷ್ಟೋ ಹೊತ್ತು ತಿಳಿಯದೆ ಸರಿದವು
ಆ ಉದ್ಯಾನದ ಮೊಗ್ಗು, ಹೂವುಗಳ ನಡುವೆ
ನಮ್ಮ ಸ್ನೇಹದ, ಮೌನ ಭಾಷೆಯ,
ಆತ್ಮೀಯತೆಯ ಸವಿನೆನಪಿನ ಹಸಿರು
ಹೂವಾಗಿ ನನ್ನಲ್ಲಿದೆ ಇಂದು
ಮರೆಯದೆ ಜೊತೆಗೊಯ್ಯುವೆ
ಯಾವಾಗಲೂಇದೇ ತಾನೆ ನನ್ನ ನಿನ್ನ ಸ್ನೇಹದ ಕುರುಹುಗಳು. .....ANAMIKA...
ಹ್ರದಯದಾಳದಲ್ಲೆಲ್ಲೋ ಅಳಲ ಬಚ್ಚಿಟ್ಟುಕೊಂಡು
ಮಂದ ಬೆಳಕಿನ ಆ ಸಂಜೆ ಕಣ್ಮುಚ್ಚಿ ಕುಳಿತೇ ಇದ್ದೆ
ಮರುದಿನ ಇಬ್ಬನಿ ಚುಂಬಿಸುವವರೆಗೂ..
ಮುಚ್ಚಿದ್ದ ಕಣ್ಣು ತೆರೆದು ಸುತ್ತಲೂ ದಿಟ್ಟಿಸಿದೆ
ಕಂಡಿತು ಆ ಹಳೆ ನೆನಪು ಸಾಲು ಸಾಲಾಗಿ
ಅಂದು ನೀನಿರೆ ಆ ಮಧುರ ಉದ್ಯಾನದಿ
ಅದೆಷ್ಟೋ ಹೊತ್ತು ತಿಳಿಯದೆ ಸರಿದವು
ಆ ಉದ್ಯಾನದ ಮೊಗ್ಗು, ಹೂವುಗಳ ನಡುವೆ
ನಮ್ಮ ಸ್ನೇಹದ, ಮೌನ ಭಾಷೆಯ,
ಆತ್ಮೀಯತೆಯ ಸವಿನೆನಪಿನ ಹಸಿರು
ಹೂವಾಗಿ ನನ್ನಲ್ಲಿದೆ ಇಂದು
ಮರೆಯದೆ ಜೊತೆಗೊಯ್ಯುವೆ
ಯಾವಾಗಲೂಇದೇ ತಾನೆ ನನ್ನ ನಿನ್ನ ಸ್ನೇಹದ ಕುರುಹುಗಳು. .....ANAMIKA...
ಪ್ರೀತಿ ಪ್ರೇಮದ ಬಗ್ಗೆ ಕೆಲ ಸ್ನೇಹಿತರು ರಚಿಸಿದ ಕವನಗಳು.....
ಪ್ರೇಮಕ್ಕೆ ನಿಮ್ಮ ಪರಿಭಾಷೆ ಏನು... ?
ಗದ್ದಲ ಗಳಲ್ಲಿ
ಕಳೆದು ಹೋದ ಸದ್ದಲ್ಲವೀ
ಪ್ರೇಮ ಹೃದಯದ
ಪಿಸುಮಾತುಗಳ ಕಣ್ಣಲೆ
ಹೇಳುವ ಮಧುರ ಕಲೆ ಪ್ರೇಮ.......
ಒಂದೇ ನೋಟದಲ್ಲಿ
ಅಡಗಿ ಕುಳಿತ ಕಾಮಾನೆಯೋ
ತಿಳಿಯದು ಜೀವನ
ನೌಕೆಯ ಮಧುರ ಪಯಣಕೆ
ನಾವಿಕನೆ ಪ್ರೇಮ ...........
ಹೃದಯದ ಹಿಮ
ಬಂಡೆಯ ಕರಗಿಸುವ
ಬಿಸಿ ಕಾವೇ ಪ್ರೇಮ......
ಸುಪ್ತ ಮನ-ಭಾವದ
ಅಭಿವಕ್ತಿಯೇ ಪ್ರೇಮ
ಮೌನ ತಾಲ್ಮೆಗಳ
ಮಿಲನ ತ್ಯಾಗದ ಇ
ಟ್ಟಿಗೆಯ ಸೌಧ ಸಂವತ್ಸ್ಸ
ರ ಗಳಿಗೆ ಚೈತ್ರ ಕಾಲವೀ ಪ್ರೇಮ........MALINI
ಅದರ ಪ್ರೀತಿಯ ಚಿಂತನೆ ಬಹು ಸುಮದುರ..!
ಬಾನಲಿ ಬೆಳ್ಳಕ್ಕಿ ಮುಗಿಲ ಚುಂಬಿಸೆ ಪ್ರೇಮ..
ಅಂಗೈಯಲಿ ಅಸುಗೊಸು ಅಳುತ ಮುಸುನಕ್ಕೊಡೆ ಪ್ರೇಮ..
ಹೊವಿನೊಳು ಮಕರಂದವ ಹೀರುವ ಧುಂಬಿಯಲಿ ಪ್ರೇಮ..
ಪ್ರಕ್ರುತಿಯ ಸೌಂದರ್ಯವ ಸವೆವ ಕಂಗಳಲಿಹಿದು ಪ್ರೇಮ..
ಪರಿ ಪರಿಯ ಪರಿಚಯ ಪ್ರೇಮಕ್ಕೆ..!
ಪ್ರಾಂತ್ಯವದು ಇರದು ಈ
ಅನುಭವಕೆನೊಂದ ಮೊಗದಲು
ಮಲ್ಲಿಗೆಯ ಮೊಗ್ಗರಳಿದಣಿದ ಉಸಿರಿನಲಿ
ಅಕ್ಕರೆಯು ನಲಿಯುತಲಿನಾಚುವ
ತುಟಿಗಳಲಿ ತಂಪಾದ ಮುತ್ತಿಡುತ..
ಅಮ್ರುತದ ಸವಿಯ ಸದಾಸೊಸುವುದರಲ್ಲೆ ಪ್ರೇಮ..!! -ಯುವಪ್ರೇಮಿ
Padagalige nilukada "Kaavya" Prema...
ಮುಸೂಕಿದ ಮಬ್ಬನು ಸೀಳಿ
ಭೂಮಿಗಿಲಿದ ಮೊದಲ
ಬೆಳ್ಳಿಕಿರಣ
ಅರಳಿನಿಂಥ ಹೂವಿಗಿತ್ಟಾ
ಇಬ್ಬನಿಯ ಮುತ್ತುಪ್ರೇಮ.....
ಬಿಸಿಲಿನಿಂದ ಬೆಂಡು
ಕೆಂಪಾದ ಧಾರೆಗೆ
ತಂಪೆರೇದ ಮಳೆ
ಹನಿ ಇಂದಹೊಮ್ಮಿಡ
ಮಣ್ಣಿನ ಘಮಪ್ರೇಮ......
ಕೇಕ್ಚಲಲ್ಲಿ ಕಾರು
ಹಾಲುನ್ಣುತಿರಲು
ತೀರು ತಿರುಗಿ ನೊಾಡುವ
ಆಕಲ ಕಣ್ಣಲ್ಲಿಚಿಮ್ಮುವ
ಮಮತೆಪ್ರೇಮ.....
ಹಾಳುಗಲ್ಳ ಹಸುಳೆ,
ಕಿಲಕಿಲನ ನಗುತ
ತೋಡಳ ಮಾತಲಿ ಕರೆದ
"ಅಮ್ಮ" ಎಂಬ ಕೂಗುಪ್ರೇಮ.....
ನೋಾಟಗಳು
ಬೆರೆತಾಗ ತುಟಿಯಂಚಲಿ
ಮಿಂಚಿ, ವಿನಿಮಯ
ವಾದಒಲವಿನ ಮುಗುಳ್ನಾಗೆಪ್ರೇಮ....
ಪದಗಳಿಗೆ ನಿಲುಕಡೆ
ಎದೆಯಲ್ಲೇ ಉಳಿದ
ನೂರು ಮಾತುಗಳ
ಬೆಚ್ಚಾಗಿನ ಭಾವ ಲಹರಿಪ್ರೇಮ......ANAMIKA
*ಪ್ರೀತಿಯೆಂದರೆ* ...
ಅವರ ಪ್ರಕಾರ
ಪ್ರೀತಿಯೆಂದರೆ
ಒಂದು ನದಿ,ಹತ್ತಾರು
ಮುಗ್ಧಜೊಂಡುಗಳನ್ನು
ಮುಳುಗಿಸುತ್ತಾಸಾಗುವ ತೊರೆ!
ಮತ್ತೆ ಕೆಲವರಿಗೆ,
ಇಡಿ ಎದೆಯನ್ನೇ
ರಕ್ತದಲ್ಲಿ ಅದ್ದುವ
ಕತ್ತಿಯ ಅಲುಗು!
ಮಿಕ್ಕವರ ಪಾಲಿಗೆ
ಅದು ಎಲ್ಲವನ್ನೂ
ನುಂಗುವ ಒಂದು
ಅನಿವಾರ್ಯ ಹಸಿವು!
ಆದರೆ, ಹುಡುಗಿ!
ನನ್ನ ಪಾಲಿಗೆ
ಪ್ರೀತಿಯೊಂದು ಸ್ನಿಗ್ಧ
ಹೂವು ಹಾಗು
ನೀನೆಅದರ ತಾಯಿ ಬೇರು! .....SHANKAR
ಹೃದಯ ಗೀತೆ..!
ನೀ ಅಲ್ಲೆ ನಿಂತು
ಹಾಡೆ ಒಮ್ಮೆ ನಾ
ಇಲ್ಲೆ ಕೇಳಿ ನಲಿಯುವೆ..!
ನೀ ಹಾಡೊ ರಾಗ
ಕೇಳದಿರೇನ್..!
ನಿನ ಬಾವ ಈ
ಹೃದಯ ಮುಟ್ಟದೆ..!!
ಸಾಗರ ನಮ್ಮಿಬ್ಬರ
ಸರಿಸಿದರೇನ್ಭುವಿಯ
ಮೇಲೆ ಇರುವೆವು ನಾವು..!
ನಿನ ನೆನೆಪೆ ನಿತ್ಯ
ದೈವ ಧೊಪನಾ ದಿನವು
ನೆನೆದು ಹಚ್ಚಿಹೆ...!
ಪ್ರೀತಿ ನೀನು,
ಕ್ರಾಂತಿ ನೀನು
ಈ ಬದುಕ ರೊಪಗಾರ್ತಿ
ನೀನುಶಕ್ತಿ ನೀನು,
ಯುಕ್ತಿ ನೀನುಈ ದೇಹಕೆ
ಉಸಿರಾದೆ ನೀನು
ನೀ ಹಾಡಲು ಪದ
ಸಿಗದಿರ್ದೊಡೆನಮ್ಮ
ಪ್ರೇಮ ಮಾತನೊಮ್ಮೆ ನೆನೆ..!
ನಿನ ಬಡಿವ ಕಣ್ಣ
ರೆಪ್ಪೆಯೆ ರಾಗನಾ ನೀಡಿದ
ಚುಂಬನವದುವೆ ತಾಳ..!
ಅಲ್ಲೆ ನಿಂತು ಹಾಡೆ ಒಮ್ಮೆ
ನಾ ಇಲ್ಲೆ ಸವಿದು ತಣಿವೆನು-,........ಯುವಪ್ರೇಮಿ
ಶಾಪ..!
ನಿನ್ನ ಚಂದಕೆ ಇಲ್ಲ ಮಾತು
ಆಡುತಿರುವೆ ಇದ ನಾ
ಸೋತುಕನಸ ಕಣೊ
ಪರಿಯ ರೊಪನನ್ನ
ಮನಕೆ ಅದುವೆ ಕೊಪಾ.. ಅ..ಅ.
.ಅಬೆಟ್ಟ ಸುತ್ತಿ, ಗಿರಿಯ ಬಳಸಿ
ಬಂದೆ ನಾ ಸೇರಲೊ.......!
ಸೆರಲೊಲ್ಲ ಮನಸು ನಿನದು
ಮರೆತೆಯ ನನ ಸರಿಯುತಾ...
ಭೊಮಿ ಭಾನು ಒಂದೆ ಎನಿಸಿ
ನಿನ್ನ ನಾ ಬಯಸಿದೆ...
ಬಯಸಲೊಲ್ಲ ಬವಣೆ ನಿನದು
ಬಂದೆ ಎಕೆ ನನ್ನ ಬದುಕಲೀ...ಇ..ಇಇ.
ಹಗಲು ಅರಸಿ, ಇರುಳು ನೆನೆಸಿ
ನಿನ ಹೃದಯ ನಾ ಮುಟ್ಟಲು...
ಬಿಸಿಲಿನಲ್ಲಿ ಬಿರುಗಾಳಿ ನೀನು
ಯಾಕೇ ಪ್ರಾಣ ಕಸಿದು ಹೋದೇ..ಎ..ಎ..ಎ.
ಅಂದವೆಲ್ಲ ಈ ಅಂಗಾಂಗ
ಕಲ್ಲಇಂದು ಎನಗೆ ಶಪಿಸಿತು...!
ಮನಸಿನ ಆ ಕುರೊಪವೆ
ನೇನಾ ನೋಡದೆ ನಡೆದೆ ಎಕೇ...ಎ..ಎ..ಎ.
ಜೀವ ಭಾರ, ಹೃದಯದ
ಗುರಇಂದು ನಾ ತ್ಯಜಿಸುವೆ...!
ನಿನ್ನ ಪ್ರೀತಿಗೆ ಈ ಪ್ರೀತಿಯುಡುಗೊರೆ
ನಿನ ಮಡಿಲಲಿಡುವೆ ಸಾಕೇ...ಎ..ಎ..ಎ
.ನಿನ್ನ ಚಂದಕೆ ಇಲ್ಲವೆ ಮಾತು
ಆಡುತಿರುವೆ ಇದ ನಾ ಸೋತು
ಕನಸ ಕಣೊ ಪರಿಯ ರೊಪ
ಅರಿಯೆ ಬರಿಸಿದೆನೆ ಶಾಪಾ..ಅ.ಅ..ಅ..-....ಯುವಪ್ರೇಮಿ
ನನ್ನ-ನಿನ್ನ ನಡುವೆ..!
ನನ್ನ ನಿನ್ನ ನಡುವಿನಲಿ..!
ಪ್ರೀತಿ ಬಳ್ಳಿ ನಲಿದಿಹುದು,!
ವರುಷಗಳೆ ಉರುಳಿದರೊ
ಹರುಷವದು ದಿನೆ ಬೆಳೆದಿಹುದು..!
ನೀ ಮುಡಿದ ಹೊವದು..!
ಕೊಗಿ ನನ್ನ ಕರೆದಿಹುದು
ಓರೆ ನೋಟದ ಆ ನಯನ
ನನ್ನಲ್ಲೇನೊ ಗೊಣಗಿಹುದು..!
ನನ್ನ ನಿನ್ನ ನಡುವಿನಲಿ..!
ಪ್ರೀತಿ ಉಕ್ಕಿ ಹರಿದಿಯುದು
ಯುಗಗಳೆ ಉರುಳಿ ಒರಳಿದರೊ
ಹರುಷವು ಚಿಮ್ಮಿ ಬೆಳೆದಿಹುದು..!
ನಿನ್ನ ನುಡಿಯೊ ಬಲುಚಂದ..!
ಸವಿದಂತೆಲ್ಲ ಸವಿ ಸಿರಿಗಂಧ.!
ಮಾತು ಮಾತೆ ಮತ್ತೆ ಮೊಡಿ
ಹುದುನಿನ್ನ ಕೊಡಿದ ಆ ಕ್ಷಣದಿಂದ..!
ನಿನ್ನ ನಗು ಎಂತ ಮಾಯೆಯೊ
ಆ ಮಾಟದಾಟ ನನ್ನ ಕಾಡಿಹುದು
ಹಾಗೆ ನಕ್ಕು ನೀ ತಿರುಗಿದೊಡೆ
ಲೊಕವನ್ನೆ ಮರೆ ಮಾಚಿಹುದು
ನನ್ನ ನಿನ್ನ ನಡುವಿನಲಿ..!
ಪ್ರೀತಿ ಬಂಧ ಬಾಡದಂತಹದು
ಇತಿಹಾಸವೆ ಅಳಿಸಿ ಹೋದರೊ
ಈ ಪ್ರೀತಿಯಂದು ಶಾಶ್ವತವೊ..!
ನಿನ್ನ ಆ ನುಲಿವ ನಡೆ..!
ನನ್ನ ಸದಾ ಕುಣಿಸಿಹುದು
ನಿನ್ನ ಗೆಜ್ಜೆಯ ದನಿಯದೊ
ಹೆಜ್ಜೆ ಹೆಜ್ಜೆಗು ಎನ್ನ ತಣಿಸಿಹುದೊ..!
ನನ್ನ ನಿನ್ನ ಮನವದೊ...!
ಸರಿಸಲಾಗದಂತೆ ಬೆರೆತಿಹುದು
ಬೆರೆತು ನುಡಿವ ಪ್ರೇಮ ಮಾತದೊ
ಜೀವ ಭಾವದ ಪ್ರಣಯದಾಟವೊ..!-.......ಯುವಪ್ರೇಮಿ
ಕನಸುಗಳು
ಕನಸುಗಳು
ನಿನ್ನ ಪಾದಗಳ ಅಡಿ
ನನ್ನ ಕನಸುಗಳ ಚೆಲ್ಲಿರುವೆ
ಮೃದುವಾಗಿ ನಡೆ
ಎಚ್ಚರವಾದೀತು.
ಹಗಲುಗನಸಲ್ಲವಿದು
ಗೆಳತಿಮೃದುವಾದ
ಮನಸ್ಸುನನ್ನ ಮನಕೆ
ನೀನೇ ಒಡತಿ ಇದು ಆಗಲಿ
ನನಸು ಭಾರದ ಹೆಜ್ಜೆ ಇಡಬೇಡ
ನೋವು ಆದೀತು
ನೀನು ಎಷ್ಟೇ ದೂರವಿದ್ದರು
ಆಗಸದಿಂದ ನೋಡುವೆನೇ
ಸಂತಸದಿ ಇರು ನೀನು
ಎಂದು ದೇವರ ಬೇಡುವೆನೇ
ಕನಸಿನ ಮೇಲೆ ಓಡಬೇಡ
ನಿಂತು ಹೋದೀತು .....ANaMIKA
ಕ್ಲಾಸ್ ರೂಮ್ ಎಂಬ ನಾಲ್ಕು.....
ಕ್ಲಾಸ್ ರೂಮ್ ಎಂಬ ನಾಲ್ಕು ಗೋಡೆಯ ಮಧ್ಯೆ
ತುಂಬಿದ್ದ ಮೌನ ಮತ್ತೆ ಮುರಿಯುತ್ತಿದೆ.
ಚಿಲಿಪಿಲಿಗುಡುವ ಗೂಡಿನ ಗುಬ್ಬಚ್ಚಿಗಳಂತೆ
ಚಿಣ್ಣರ ಕಲರವ ಸುತ್ತಲೂ ಧ್ವನಿಸುತ್ತಿದೆ.
ರಜೆಯಲ್ಲಿ ಗರಿಗೆದರಿ ಹಾರಿದ್ದ ಮಕ್ಕಳೆಂಬ ಹಕ್ಕಿಗಳು
ಮತ್ತೆ ಮಳೆಗಾಲಕ್ಕೆ ಬೆಚ್ಚಗಿನ ಗೂಡು ಸೇರಿವೆ.
ಕ್ಲಾಸ್ ರೂಮ್ ಎಂಬ ಮಾಯಾಲೋಕದಲ್ಲಿ ಎಷ್ಟೋ
ಮನಸುಗಳು ಅರಳುತ್ತವೆ ಮತ್ತೆಷ್ಟೋ ಮುದುಡುತ್ತವೆ.
ಒಮ್ಮೊಮ್ಮೆ ಈ ಭಯಂಕರ ಲೋಕ ಎಷ್ಟೋ
ಬಾಲ್ಯಗಳ ಕೊಂದು ಹಾಕುತ್ತದೆ.
ಅದೆಷ್ಟೋ ಬಣ್ಣದ ಕನಸುಗಳು ಜೀವ ತಳೆಯುತ್ತವೆ
ಮತ್ತೆ ಹಲವರ ಭವಿಷ್ಯಕ್ಕೆ ಭಾಷ್ಯ ಬರೆಯುತ್ತದೆ.
ಅರಿವೇ ಮೂಡದ ಕುರಿಗಳನ್ನು ಕಟ್ಟಿ ಹಾಕಿ
ಕೆಲ ಕಂಠಗಳು ಏನೋ ಗಿಳಿಪಾಠ ಹೇಳಿಸುತ್ತಿವೆ.
ಕ್ಲಾಸ್ ರೂಮ್ ಎಂಬ ನಾಲ್ಕು ಗೋಡೆಯ ಮಧ್ಯೆ
ತುಂಬಿದ್ದ ಮೌನ ಮತ್ತೆ ಮುರಿಯುತ್ತಿದೆ.- ...........Reshma narayan
gelathi..
ಬೇಡ ಗೆಳೆಯಾ ಇಷ್ಟು ದೊಡ್ಡ ತ್ಯಾಗ
ಕ್ರುರ್ ಹೃದಯದ ಹುಡುಗಿ,
ಘಶಿಯಾದನೋವು ,
ತ್ಯಾಗದ ದುಖ , ಸಾಕು
ಒಂದೇ ಯಾರದೇ avalu ಕೊಟ್ಟ ಸುಖ .....
ಆರಿಯಲಿಲ್ಲ ಏಕೆ ನೀನು ,
ನೆನಪು ಹೋಯಿತೇ avalu
ಹೇಳ್ಳುತಿದ್ದಳು ನೀನು ಪ್ರಾನಸಖ
ಅಂತ ನಿನ್ನ ಪ್ರಾಣ ಹಿರುವರೆಗೂ
ನೀನೆ ಸಖ ಆದದ್
ಮೇಲೆ ನಿನ್ನ ಸಹವಾಸ್ ಅವಲ್ಲಿಗೆ ಬೇಕ .......
ಗದ್ದಲ ಗಳಲ್ಲಿ
ಕಳೆದು ಹೋದ ಸದ್ದಲ್ಲವೀ
ಪ್ರೇಮ ಹೃದಯದ
ಪಿಸುಮಾತುಗಳ ಕಣ್ಣಲೆ
ಹೇಳುವ ಮಧುರ ಕಲೆ ಪ್ರೇಮ.......
ಒಂದೇ ನೋಟದಲ್ಲಿ
ಅಡಗಿ ಕುಳಿತ ಕಾಮಾನೆಯೋ
ತಿಳಿಯದು ಜೀವನ
ನೌಕೆಯ ಮಧುರ ಪಯಣಕೆ
ನಾವಿಕನೆ ಪ್ರೇಮ ...........
ಹೃದಯದ ಹಿಮ
ಬಂಡೆಯ ಕರಗಿಸುವ
ಬಿಸಿ ಕಾವೇ ಪ್ರೇಮ......
ಸುಪ್ತ ಮನ-ಭಾವದ
ಅಭಿವಕ್ತಿಯೇ ಪ್ರೇಮ
ಮೌನ ತಾಲ್ಮೆಗಳ
ಮಿಲನ ತ್ಯಾಗದ ಇ
ಟ್ಟಿಗೆಯ ಸೌಧ ಸಂವತ್ಸ್ಸ
ರ ಗಳಿಗೆ ಚೈತ್ರ ಕಾಲವೀ ಪ್ರೇಮ........MALINI
ಅದರ ಪ್ರೀತಿಯ ಚಿಂತನೆ ಬಹು ಸುಮದುರ..!
ಬಾನಲಿ ಬೆಳ್ಳಕ್ಕಿ ಮುಗಿಲ ಚುಂಬಿಸೆ ಪ್ರೇಮ..
ಅಂಗೈಯಲಿ ಅಸುಗೊಸು ಅಳುತ ಮುಸುನಕ್ಕೊಡೆ ಪ್ರೇಮ..
ಹೊವಿನೊಳು ಮಕರಂದವ ಹೀರುವ ಧುಂಬಿಯಲಿ ಪ್ರೇಮ..
ಪ್ರಕ್ರುತಿಯ ಸೌಂದರ್ಯವ ಸವೆವ ಕಂಗಳಲಿಹಿದು ಪ್ರೇಮ..
ಪರಿ ಪರಿಯ ಪರಿಚಯ ಪ್ರೇಮಕ್ಕೆ..!
ಪ್ರಾಂತ್ಯವದು ಇರದು ಈ
ಅನುಭವಕೆನೊಂದ ಮೊಗದಲು
ಮಲ್ಲಿಗೆಯ ಮೊಗ್ಗರಳಿದಣಿದ ಉಸಿರಿನಲಿ
ಅಕ್ಕರೆಯು ನಲಿಯುತಲಿನಾಚುವ
ತುಟಿಗಳಲಿ ತಂಪಾದ ಮುತ್ತಿಡುತ..
ಅಮ್ರುತದ ಸವಿಯ ಸದಾಸೊಸುವುದರಲ್ಲೆ ಪ್ರೇಮ..!! -ಯುವಪ್ರೇಮಿ
Padagalige nilukada "Kaavya" Prema...
ಮುಸೂಕಿದ ಮಬ್ಬನು ಸೀಳಿ
ಭೂಮಿಗಿಲಿದ ಮೊದಲ
ಬೆಳ್ಳಿಕಿರಣ
ಅರಳಿನಿಂಥ ಹೂವಿಗಿತ್ಟಾ
ಇಬ್ಬನಿಯ ಮುತ್ತುಪ್ರೇಮ.....
ಬಿಸಿಲಿನಿಂದ ಬೆಂಡು
ಕೆಂಪಾದ ಧಾರೆಗೆ
ತಂಪೆರೇದ ಮಳೆ
ಹನಿ ಇಂದಹೊಮ್ಮಿಡ
ಮಣ್ಣಿನ ಘಮಪ್ರೇಮ......
ಕೇಕ್ಚಲಲ್ಲಿ ಕಾರು
ಹಾಲುನ್ಣುತಿರಲು
ತೀರು ತಿರುಗಿ ನೊಾಡುವ
ಆಕಲ ಕಣ್ಣಲ್ಲಿಚಿಮ್ಮುವ
ಮಮತೆಪ್ರೇಮ.....
ಹಾಳುಗಲ್ಳ ಹಸುಳೆ,
ಕಿಲಕಿಲನ ನಗುತ
ತೋಡಳ ಮಾತಲಿ ಕರೆದ
"ಅಮ್ಮ" ಎಂಬ ಕೂಗುಪ್ರೇಮ.....
ನೋಾಟಗಳು
ಬೆರೆತಾಗ ತುಟಿಯಂಚಲಿ
ಮಿಂಚಿ, ವಿನಿಮಯ
ವಾದಒಲವಿನ ಮುಗುಳ್ನಾಗೆಪ್ರೇಮ....
ಪದಗಳಿಗೆ ನಿಲುಕಡೆ
ಎದೆಯಲ್ಲೇ ಉಳಿದ
ನೂರು ಮಾತುಗಳ
ಬೆಚ್ಚಾಗಿನ ಭಾವ ಲಹರಿಪ್ರೇಮ......ANAMIKA
*ಪ್ರೀತಿಯೆಂದರೆ* ...
ಅವರ ಪ್ರಕಾರ
ಪ್ರೀತಿಯೆಂದರೆ
ಒಂದು ನದಿ,ಹತ್ತಾರು
ಮುಗ್ಧಜೊಂಡುಗಳನ್ನು
ಮುಳುಗಿಸುತ್ತಾಸಾಗುವ ತೊರೆ!
ಮತ್ತೆ ಕೆಲವರಿಗೆ,
ಇಡಿ ಎದೆಯನ್ನೇ
ರಕ್ತದಲ್ಲಿ ಅದ್ದುವ
ಕತ್ತಿಯ ಅಲುಗು!
ಮಿಕ್ಕವರ ಪಾಲಿಗೆ
ಅದು ಎಲ್ಲವನ್ನೂ
ನುಂಗುವ ಒಂದು
ಅನಿವಾರ್ಯ ಹಸಿವು!
ಆದರೆ, ಹುಡುಗಿ!
ನನ್ನ ಪಾಲಿಗೆ
ಪ್ರೀತಿಯೊಂದು ಸ್ನಿಗ್ಧ
ಹೂವು ಹಾಗು
ನೀನೆಅದರ ತಾಯಿ ಬೇರು! .....SHANKAR
ಹೃದಯ ಗೀತೆ..!
ನೀ ಅಲ್ಲೆ ನಿಂತು
ಹಾಡೆ ಒಮ್ಮೆ ನಾ
ಇಲ್ಲೆ ಕೇಳಿ ನಲಿಯುವೆ..!
ನೀ ಹಾಡೊ ರಾಗ
ಕೇಳದಿರೇನ್..!
ನಿನ ಬಾವ ಈ
ಹೃದಯ ಮುಟ್ಟದೆ..!!
ಸಾಗರ ನಮ್ಮಿಬ್ಬರ
ಸರಿಸಿದರೇನ್ಭುವಿಯ
ಮೇಲೆ ಇರುವೆವು ನಾವು..!
ನಿನ ನೆನೆಪೆ ನಿತ್ಯ
ದೈವ ಧೊಪನಾ ದಿನವು
ನೆನೆದು ಹಚ್ಚಿಹೆ...!
ಪ್ರೀತಿ ನೀನು,
ಕ್ರಾಂತಿ ನೀನು
ಈ ಬದುಕ ರೊಪಗಾರ್ತಿ
ನೀನುಶಕ್ತಿ ನೀನು,
ಯುಕ್ತಿ ನೀನುಈ ದೇಹಕೆ
ಉಸಿರಾದೆ ನೀನು
ನೀ ಹಾಡಲು ಪದ
ಸಿಗದಿರ್ದೊಡೆನಮ್ಮ
ಪ್ರೇಮ ಮಾತನೊಮ್ಮೆ ನೆನೆ..!
ನಿನ ಬಡಿವ ಕಣ್ಣ
ರೆಪ್ಪೆಯೆ ರಾಗನಾ ನೀಡಿದ
ಚುಂಬನವದುವೆ ತಾಳ..!
ಅಲ್ಲೆ ನಿಂತು ಹಾಡೆ ಒಮ್ಮೆ
ನಾ ಇಲ್ಲೆ ಸವಿದು ತಣಿವೆನು-,........ಯುವಪ್ರೇಮಿ
ಶಾಪ..!
ನಿನ್ನ ಚಂದಕೆ ಇಲ್ಲ ಮಾತು
ಆಡುತಿರುವೆ ಇದ ನಾ
ಸೋತುಕನಸ ಕಣೊ
ಪರಿಯ ರೊಪನನ್ನ
ಮನಕೆ ಅದುವೆ ಕೊಪಾ.. ಅ..ಅ.
.ಅಬೆಟ್ಟ ಸುತ್ತಿ, ಗಿರಿಯ ಬಳಸಿ
ಬಂದೆ ನಾ ಸೇರಲೊ.......!
ಸೆರಲೊಲ್ಲ ಮನಸು ನಿನದು
ಮರೆತೆಯ ನನ ಸರಿಯುತಾ...
ಭೊಮಿ ಭಾನು ಒಂದೆ ಎನಿಸಿ
ನಿನ್ನ ನಾ ಬಯಸಿದೆ...
ಬಯಸಲೊಲ್ಲ ಬವಣೆ ನಿನದು
ಬಂದೆ ಎಕೆ ನನ್ನ ಬದುಕಲೀ...ಇ..ಇಇ.
ಹಗಲು ಅರಸಿ, ಇರುಳು ನೆನೆಸಿ
ನಿನ ಹೃದಯ ನಾ ಮುಟ್ಟಲು...
ಬಿಸಿಲಿನಲ್ಲಿ ಬಿರುಗಾಳಿ ನೀನು
ಯಾಕೇ ಪ್ರಾಣ ಕಸಿದು ಹೋದೇ..ಎ..ಎ..ಎ.
ಅಂದವೆಲ್ಲ ಈ ಅಂಗಾಂಗ
ಕಲ್ಲಇಂದು ಎನಗೆ ಶಪಿಸಿತು...!
ಮನಸಿನ ಆ ಕುರೊಪವೆ
ನೇನಾ ನೋಡದೆ ನಡೆದೆ ಎಕೇ...ಎ..ಎ..ಎ.
ಜೀವ ಭಾರ, ಹೃದಯದ
ಗುರಇಂದು ನಾ ತ್ಯಜಿಸುವೆ...!
ನಿನ್ನ ಪ್ರೀತಿಗೆ ಈ ಪ್ರೀತಿಯುಡುಗೊರೆ
ನಿನ ಮಡಿಲಲಿಡುವೆ ಸಾಕೇ...ಎ..ಎ..ಎ
.ನಿನ್ನ ಚಂದಕೆ ಇಲ್ಲವೆ ಮಾತು
ಆಡುತಿರುವೆ ಇದ ನಾ ಸೋತು
ಕನಸ ಕಣೊ ಪರಿಯ ರೊಪ
ಅರಿಯೆ ಬರಿಸಿದೆನೆ ಶಾಪಾ..ಅ.ಅ..ಅ..-....ಯುವಪ್ರೇಮಿ
ನನ್ನ-ನಿನ್ನ ನಡುವೆ..!
ನನ್ನ ನಿನ್ನ ನಡುವಿನಲಿ..!
ಪ್ರೀತಿ ಬಳ್ಳಿ ನಲಿದಿಹುದು,!
ವರುಷಗಳೆ ಉರುಳಿದರೊ
ಹರುಷವದು ದಿನೆ ಬೆಳೆದಿಹುದು..!
ನೀ ಮುಡಿದ ಹೊವದು..!
ಕೊಗಿ ನನ್ನ ಕರೆದಿಹುದು
ಓರೆ ನೋಟದ ಆ ನಯನ
ನನ್ನಲ್ಲೇನೊ ಗೊಣಗಿಹುದು..!
ನನ್ನ ನಿನ್ನ ನಡುವಿನಲಿ..!
ಪ್ರೀತಿ ಉಕ್ಕಿ ಹರಿದಿಯುದು
ಯುಗಗಳೆ ಉರುಳಿ ಒರಳಿದರೊ
ಹರುಷವು ಚಿಮ್ಮಿ ಬೆಳೆದಿಹುದು..!
ನಿನ್ನ ನುಡಿಯೊ ಬಲುಚಂದ..!
ಸವಿದಂತೆಲ್ಲ ಸವಿ ಸಿರಿಗಂಧ.!
ಮಾತು ಮಾತೆ ಮತ್ತೆ ಮೊಡಿ
ಹುದುನಿನ್ನ ಕೊಡಿದ ಆ ಕ್ಷಣದಿಂದ..!
ನಿನ್ನ ನಗು ಎಂತ ಮಾಯೆಯೊ
ಆ ಮಾಟದಾಟ ನನ್ನ ಕಾಡಿಹುದು
ಹಾಗೆ ನಕ್ಕು ನೀ ತಿರುಗಿದೊಡೆ
ಲೊಕವನ್ನೆ ಮರೆ ಮಾಚಿಹುದು
ನನ್ನ ನಿನ್ನ ನಡುವಿನಲಿ..!
ಪ್ರೀತಿ ಬಂಧ ಬಾಡದಂತಹದು
ಇತಿಹಾಸವೆ ಅಳಿಸಿ ಹೋದರೊ
ಈ ಪ್ರೀತಿಯಂದು ಶಾಶ್ವತವೊ..!
ನಿನ್ನ ಆ ನುಲಿವ ನಡೆ..!
ನನ್ನ ಸದಾ ಕುಣಿಸಿಹುದು
ನಿನ್ನ ಗೆಜ್ಜೆಯ ದನಿಯದೊ
ಹೆಜ್ಜೆ ಹೆಜ್ಜೆಗು ಎನ್ನ ತಣಿಸಿಹುದೊ..!
ನನ್ನ ನಿನ್ನ ಮನವದೊ...!
ಸರಿಸಲಾಗದಂತೆ ಬೆರೆತಿಹುದು
ಬೆರೆತು ನುಡಿವ ಪ್ರೇಮ ಮಾತದೊ
ಜೀವ ಭಾವದ ಪ್ರಣಯದಾಟವೊ..!-.......ಯುವಪ್ರೇಮಿ
ಕನಸುಗಳು
ಕನಸುಗಳು
ನಿನ್ನ ಪಾದಗಳ ಅಡಿ
ನನ್ನ ಕನಸುಗಳ ಚೆಲ್ಲಿರುವೆ
ಮೃದುವಾಗಿ ನಡೆ
ಎಚ್ಚರವಾದೀತು.
ಹಗಲುಗನಸಲ್ಲವಿದು
ಗೆಳತಿಮೃದುವಾದ
ಮನಸ್ಸುನನ್ನ ಮನಕೆ
ನೀನೇ ಒಡತಿ ಇದು ಆಗಲಿ
ನನಸು ಭಾರದ ಹೆಜ್ಜೆ ಇಡಬೇಡ
ನೋವು ಆದೀತು
ನೀನು ಎಷ್ಟೇ ದೂರವಿದ್ದರು
ಆಗಸದಿಂದ ನೋಡುವೆನೇ
ಸಂತಸದಿ ಇರು ನೀನು
ಎಂದು ದೇವರ ಬೇಡುವೆನೇ
ಕನಸಿನ ಮೇಲೆ ಓಡಬೇಡ
ನಿಂತು ಹೋದೀತು .....ANaMIKA
ಕ್ಲಾಸ್ ರೂಮ್ ಎಂಬ ನಾಲ್ಕು.....
ಕ್ಲಾಸ್ ರೂಮ್ ಎಂಬ ನಾಲ್ಕು ಗೋಡೆಯ ಮಧ್ಯೆ
ತುಂಬಿದ್ದ ಮೌನ ಮತ್ತೆ ಮುರಿಯುತ್ತಿದೆ.
ಚಿಲಿಪಿಲಿಗುಡುವ ಗೂಡಿನ ಗುಬ್ಬಚ್ಚಿಗಳಂತೆ
ಚಿಣ್ಣರ ಕಲರವ ಸುತ್ತಲೂ ಧ್ವನಿಸುತ್ತಿದೆ.
ರಜೆಯಲ್ಲಿ ಗರಿಗೆದರಿ ಹಾರಿದ್ದ ಮಕ್ಕಳೆಂಬ ಹಕ್ಕಿಗಳು
ಮತ್ತೆ ಮಳೆಗಾಲಕ್ಕೆ ಬೆಚ್ಚಗಿನ ಗೂಡು ಸೇರಿವೆ.
ಕ್ಲಾಸ್ ರೂಮ್ ಎಂಬ ಮಾಯಾಲೋಕದಲ್ಲಿ ಎಷ್ಟೋ
ಮನಸುಗಳು ಅರಳುತ್ತವೆ ಮತ್ತೆಷ್ಟೋ ಮುದುಡುತ್ತವೆ.
ಒಮ್ಮೊಮ್ಮೆ ಈ ಭಯಂಕರ ಲೋಕ ಎಷ್ಟೋ
ಬಾಲ್ಯಗಳ ಕೊಂದು ಹಾಕುತ್ತದೆ.
ಅದೆಷ್ಟೋ ಬಣ್ಣದ ಕನಸುಗಳು ಜೀವ ತಳೆಯುತ್ತವೆ
ಮತ್ತೆ ಹಲವರ ಭವಿಷ್ಯಕ್ಕೆ ಭಾಷ್ಯ ಬರೆಯುತ್ತದೆ.
ಅರಿವೇ ಮೂಡದ ಕುರಿಗಳನ್ನು ಕಟ್ಟಿ ಹಾಕಿ
ಕೆಲ ಕಂಠಗಳು ಏನೋ ಗಿಳಿಪಾಠ ಹೇಳಿಸುತ್ತಿವೆ.
ಕ್ಲಾಸ್ ರೂಮ್ ಎಂಬ ನಾಲ್ಕು ಗೋಡೆಯ ಮಧ್ಯೆ
ತುಂಬಿದ್ದ ಮೌನ ಮತ್ತೆ ಮುರಿಯುತ್ತಿದೆ.- ...........Reshma narayan
gelathi..
ಬೇಡ ಗೆಳೆಯಾ ಇಷ್ಟು ದೊಡ್ಡ ತ್ಯಾಗ
ಕ್ರುರ್ ಹೃದಯದ ಹುಡುಗಿ,
ಘಶಿಯಾದನೋವು ,
ತ್ಯಾಗದ ದುಖ , ಸಾಕು
ಒಂದೇ ಯಾರದೇ avalu ಕೊಟ್ಟ ಸುಖ .....
ಆರಿಯಲಿಲ್ಲ ಏಕೆ ನೀನು ,
ನೆನಪು ಹೋಯಿತೇ avalu
ಹೇಳ್ಳುತಿದ್ದಳು ನೀನು ಪ್ರಾನಸಖ
ಅಂತ ನಿನ್ನ ಪ್ರಾಣ ಹಿರುವರೆಗೂ
ನೀನೆ ಸಖ ಆದದ್
ಮೇಲೆ ನಿನ್ನ ಸಹವಾಸ್ ಅವಲ್ಲಿಗೆ ಬೇಕ .......
-ಧೀರೇಂದ್ರ ನಾಗರಹಳ್ಳಿ mattu anekara sangraha....
ದ್ರೋಹ...!-----------
ದ್ರೋಹವೆಂದರೆನೆಂದು
ನಿನ್ನಿಂದಲೇ ಕಲಿಯಬೇಕು!
ದಶಕಗಳ ದ್ವೇಷವೆಂಬಂತೆ
ಒಂದುಸಣ್ಣ ಸುಳ್ಳು ಹೇಳಿಬಿಟ್ಟೆ!
ಪ್ರೀತಿಸಿಯೂ "ಪ್ರೀತಿಸಿಲ್ಲ" ವೆಂದು ಬಿಟ್ಟೆ.
ನನ್ನದೊಂದು ಮಾತಿತ್ತು ಅದ
ಮುಗಿಸುವ ಮೊದಲೇ,
ಅಲ್ಲಿಂದ ಹೊರಟು ಬಿಟ್ಟೆ! -ಧೀರೇಂದ್ರ ನಾಗರಹಳ್ಳಿ
ಮುಗಿಯದ ಮಾತು...!
ಮುಗಿಯದ ಮಾತು ನೋರಿಹವು,
ನಮ್ಮಿಬ್ಬರ ನಡುವೆ.
ಬತ್ತಿ ಹೋಗಿಹುದು ಒಲವು,
ಹಮ್ಮು-ಬಿಮ್ಮು ಗಳ ನಡುವೆ.
ನೂರೊಂದು ಕೂಣಿಯುತಿಹವು,
ಉತ್ತರವಿಲ್ಲದ ಪ್ರೆಶ್ನೆಗಳು.
ಕೂಗಿ ಕೆಳಲು ದನಿ ಇರಲಿಲ್ಲ,
ಸೂರೆ ಮಾಡಿದ್ದವು ಭಗ್ನ ಕನಸುಗಳು.
ತಿರುಗಿಯೂ ನೋಡದೆ ಹೊರಟು ಹೋದೆ,
ನಾನಲ್ಲೆ ನಿಂತಿದ್ದೆ ನೀಬರುವೆ ಎಂದು!
ದಿನಗಳೇ ಉರುಳಿದರು ಬಾರದೆ ಹೋದೆ.
ನೀ ಸುಖವ ಕಂಡಿದ್ದೆ
ಮತ್ತೊಬ್ಬರ ತೆಕ್ಕೆಯಲಿ ಮಿಂದು. - ಧೀರೇಂದ್ರ ನಾಗರಹಳ್ಳಿ
ಓ! ಗೆಳತಿ!---------
ಓ! ಗೆಳತಿಯೇ,
ನನ್ನೆದೆಯನ್ನು ಒದ್ದೋಡುವ
,ಇರಾದೆ ಇದ್ದಿದ್ದೇ ಆಗಿದ್ದರೆ,
ಒಂದು ಕಣ್ಸನ್ನೆ ಸಾಕಿತ್ತು!
ಈ ಹೃದಯವನ್ನೆ ಹಾಸಿರುತಿದ್ದೆ,
ನಿನ್ನ ಪಾದದಡಿಗೆ! -ಧೀರೇಂದ್ರ ನಾಗರಹಳ್ಳಿ
ಇನ್ನೇನು ಬೇಕು?
ನಿನ್ನ ಆ ಬಟ್ಟಲು ಕಂಗಳಲಿ,
ನನ್ನದೆ ಬಿಂಬ.
ನನ್ನ ಕನಸುಗಳ ಆ ಪಸೆಯಲಿ,
ನೀನೇ ನೀನು.
ನಮ್ಮಿಬ್ಬರ ಈ 'ಪ್ರೀತಿ'ಗೆಆ
'ಚಡಪಡಿಕೆ'ಗೆ ಇನ್ನೇನು ಬೇಕು? -ಧೀರೇಂದ್ರ ನಾಗರಹಳ್ಳಿ
ಎನ್ನ ಮನದನ್ನೆ
ಎನ ನಲ್ಲೆಯ ಬಗ್ಗೆ
ಏನೆಂದು ವಿವರಿಸಲಿಸರಳ
ಸುಂದರತೆಯ ಸಾಕಾರ ಇವಳು
ಒಲ್ಲದಿಹ ಮಾತಿಗೆ
ಸನ್ನೆಯಲೇ ನಕಾರಪ್ರೀತಿ
ಬಯಸುತಿಹ ಜೀವಕೆ
ಒಲವಿನಲಿ ಸಹಕಾರ
ತುಂಟ ಕುಡಿ ನೋಟದಲೇ
ಸೆರೆ ಹಿಡಿವ ರತಿ ಇವಳು
ಬಳುಕು ನಡೆ ನೀಳ
ಜಡೆಯ ಮನ ಕದ್ದ ಒಡತಿ
ಜತೆಗೂಡಿ ನನ್ನೊಡನೆ
ಎಲೆಯಡಿಕೆ ಮೆಲ್ಲು
ತಲಿಸುದ್ದಿ ಕಂತೆಯ
ಮಹಾಪೂರವನೇ ಕರೆಯುವಳು
ಅವರಿವರ ಸುದ್ದಿ ನಮಗೇತಕೆ
ಬಿಡಿಕೊನೆಯಲ್ಲಿ ನನ್ನ
ಬಾಯ್ಮುಚ್ಚಿಸುವಳೇ ಇವಳು!
ಎನ್ನ ಮನದನ್ನೆ,
ಸೊನ್ನೆಯ ಮೊಗದವಳು
ಕಪಟ,ಅಸೂಯೆಗಳು
ಸೋನ್ನೆ ಇರುವ ಗುಣಡವಳು
ಹೊಗಳಿದರೆ ಕೆನ್ನೆಯಲಿಗು
ಳಿಗಳ ನರ್ತನತೆಗಳಿದರೆ ಮೊಗ,'?'
ಸನ್ನೆಯಲಿ ಪರಿವರ್ತನ
ಹೇಗೆ ಇರಲಿ
ಅವಳು ಎನ್ನ ಮನದನ್ನೆ
ರಾತ್ರಿ ಕನಸಲಿ ಬರುವ
ಕನಸಿನ ಕನ್ಯೆ
ಮರಳಿ ಕನಸಿನೂರಿಗೆ
ದಿನಗಳು ಅದೆಷ್ಟೋ
ಉರುಳಿವೆ ಅಕ್ಷರಗಳ
ಪೋಣಿಸದೆಪದಗಳ ಜೋಡಣೆಗೆ
ಪರದಾಡುವ ಪರಿಸ್ಥಿತಿಯೆ?
ವಿನಾ ಕಾರಣ
ಕೊಡಲೇಕೆ ಹಲವು
ನೆಪಗಳ ಕಂತೆಮತ್ತೆ ನ
ಡೆಯುದಿಲ್ಲಿ ಕನಸುಗಳ ಕಂತೆಹೊತ್ತು
ಆಸೆಗಳ ಸಾಗಿಹೆನು ಕನಸಿ
ನೂರಿನ ಕಡೆಗೆತೇಲಿ
ಸಾಗಲು ಜತೆಗೆ ಬರುವೆಯಾ
ನನ್ನೊಡನೆ?
ಪದಗಳ ಪರದಾಟವಲ್ಲ,
ಕೋಟಿ ಪದಗಳಲಿ,
ಕೋಟಿ ಬಾಳುವ
ಪದಗಳ ಹೆಕ್ಕುವ ಪೀಕಲಾಟ!
ಕಂತೆ ಕನಸುಗಳಿರುವಾಗ
ಕಾರಣಗಳ ಬೊಂತೆ ಏಕೆ?
ಆಸೆಗಳ ಮೂಟೆ ಹಂಚುವೆಯಾದರೆ,
ಜತೆಗೆ ಬರುವೆ ನಿನ್ನ ಕನಸಿನ ಊರಿಗೆ....
ವಾಹ್.. ವಾಹ್.. ಅದ್ಬುತ..!!
ವಾಹ್.. ವಾಹ್.. ಅದ್ಬುತ..!!
ಶೈಲಜರವರ ಕಾವ್ಯ
ಸುಧೆಗೆ ಅಡೆತಡೆ ಇಲ್ಲ..!
ದೀಪಕರ ಚುಂಬಕ
ಉತ್ತರಕ್ಕೆ ಸರಿಸಾಟಿಇಲ್ಲ..!!
ಮಾಲಿನಿಯವರ ಅಕ್ಷರ
ನೈವಿಕೆಗೆ ಮನಸೋಲ
ದವರಿಲ್ಲವೇ ಇಲ್ಲ..!!
ಕನಸಿನೊರ ಪಯಣದಲ್ಲಿ
ಪಯಣಿಗನು ನಾನುಕೈಯೊಳಾಸೆ
ಮೊಟೆ ಹೊತ್ತಿ ಪಯಣಿಸುತಿಹೆನು..!
ಕನಸಿನೊರ ದಾರಿ ಕಾಣಲು
ಬೆಟ್ಟಗುಟ್ಟವ ಸುತ್ತಿ..!
ಕಂಡ ಕನಸ ಕೈಯಲಿಡಿಯುವ
ಹೆಬ್ಬಯಕೆಯನೊತ್ತಿ
ಕನಸುಗಾರ ನಾನು,
ಕನಸಕಾಣ್ವುದೆ ನನ್ನ ಕಾರ್ಯ
ಕನಸಿಲ್ಲದ ಅರೆಕ್ಷಣವು ಏನ್ನಲಿಲ್ಲ,
ಇದುವೆ ಆಸ್ಚರ್ಯಕನಸಿನಲ್ಲಿ
ಏನ್ನಮನವು ಸಧಾ ಮಗ್ನವಾಗಿಹುದು...!
ಮಗ್ನತೆಯ ಮಾದುರ್ಯದಿ
ಇಹವನೆ ಮರೆತಿಹುದು..!
ಕನಸಿನೊಲುಮೆ ಏನ್ನಮೇಲೆ
ಇಹುದು ಸಪ್ತಕಡಲಿನಸ್ಟು
ಕಂಡದೆಲ್ಲ ನನಸಮಾಡಿ
ಹೊಸಗನಸ ಸಿಹಿ ಸವಿಯಬಿಟ್ಟು
ಕನಸಕಾಣ್ವ ಆ ಸಮಯವೆ
ಮಕರಂದದ ಸಿಹಿಯಂತೆ..!
ಕನಸು ಮಿಡಿವ ಮದುರ
ಮಾತೆ ಜೇಂಕಾರದ ಸುದೆಯಂತೆ..!
ಕನಸಿನೊರ ನಾಸೇರ್ವೆನು
ಬೇದಿಸೆಲ್ಲ ಆತಂಕದಡೆ
ತಡೆಕನಸ ಕಾಣ್ವ ಗಳಯರನೆಲ್ಲ
ಕೊಡಿಸುವೆನು ಏನ್ನೊಡೆ
ಕಣ ಕಣದ ಏನ್ನುಸಿರಿದು
ರಚಿಸಿದೆ ಕನಸಿನೊರಿನೆಸರ..!
ಕಂಡೆಲ್ಲ ಕನಸ ನನಸಾಗಿಸಿ
ತ್ಯಜಿಸೆ ಸಿದ್ಧ ಈ ಉಸಿರ..!!
ಕನಸಿನೊರ ಪಯಣದಲ್ಲಿ
ಪಯಣಿಗನು ನಾನು..!
ಕನಸಿನಲ್ಲು ಕನಸಿನೊರ
ಕ್ಷಣದಿ ಸವಿಯ ಬಯಸಿಹೆನು..!! -ಯುವಪ್ರೇಮಿ
ಹೀಗಿತ್ತು ನನ್ನ ಪಯಣ
ಮರಳ ಕಣಗಳುರಿಳಿದಂತೆ ..
ಇರುಳು ಸಣಿಹ ಬಂದಿತು ..
ದಿನದ ದನಿವ ನಲಿವ ಕಂಡ
ಕಣ್ಣನು ರೆಪ್ಪೆ ತಾನು ಮುಚ್ಚಿತು
ಕನಸುಗಳ ಗುಡ್ಡೆ ಹಾಕಿ
ಒಂದೊಂದೇ ಹಂಚಿಹನು
ಚಂದ್ರಾಮನು ತಾರೆ ಸಖೀಯರೆಲ್ಲ
ಕೂಡಿ ಆಲ್ಲಿ ನಗುವ ಔತಣ ನಿ
ದ್ರೆ ಊರಿನಲ್ಲಿ ಸುಗ್ಗಿಯ ಸಂಭ್ರಮ
ನೀಡಿರೇ ಊರ ರಾಣಿ ಬಂದು
ನನ್ನ ನಲ್ಲಿ ಕಂಡಳೂ ಪ್ರೀತಿಯಿಂದ
ಆಪ್ಪಿ ನನ್ನ ನೂರಮುತ್ತಾ
ಕೊಟ್ಟಳು ಕನಸುಗಳು ಹೊತ್ತ
ನಾನು ಸಾಗಿದೆ ಉದಯ ರವಿಯ
ಮೊದಲ ಕಿರಣ ಬಂದು ನನ್ನ
ಮುತ್ತಲು ಬೆಳಕು ಹರಿದು
ಸಾರಿದ ರಾತ್ರಿ ಕತ್ತಲು ಹೊಸ
ದಿನದ ಹೊಸ ಬದುಕ ಜೀವಕಲೆಯ ಬಿತ್ತಲೂ
ನನ್ನ ಒಂದು ಪುಟ್ಟಗವನ ಹನಿಗೆ ನೀವೆಲ್ಲ ಸೇರಿಸಿದಿರಿ ನೂರೆಂಟು ಹನಿಗಳನುಪ್ರತ್ಯುತ್ತರದ ಝರಿ ನಿಲ್ಲದಿರಲಿ ಎಂದೂಕವಿಗನಸು ಅದೇ ತಾನೆ " DAM" ತುಂಬಲಿಯೆಂದು .....
ದ್ರೋಹವೆಂದರೆನೆಂದು
ನಿನ್ನಿಂದಲೇ ಕಲಿಯಬೇಕು!
ದಶಕಗಳ ದ್ವೇಷವೆಂಬಂತೆ
ಒಂದುಸಣ್ಣ ಸುಳ್ಳು ಹೇಳಿಬಿಟ್ಟೆ!
ಪ್ರೀತಿಸಿಯೂ "ಪ್ರೀತಿಸಿಲ್ಲ" ವೆಂದು ಬಿಟ್ಟೆ.
ನನ್ನದೊಂದು ಮಾತಿತ್ತು ಅದ
ಮುಗಿಸುವ ಮೊದಲೇ,
ಅಲ್ಲಿಂದ ಹೊರಟು ಬಿಟ್ಟೆ! -ಧೀರೇಂದ್ರ ನಾಗರಹಳ್ಳಿ
ಮುಗಿಯದ ಮಾತು...!
ಮುಗಿಯದ ಮಾತು ನೋರಿಹವು,
ನಮ್ಮಿಬ್ಬರ ನಡುವೆ.
ಬತ್ತಿ ಹೋಗಿಹುದು ಒಲವು,
ಹಮ್ಮು-ಬಿಮ್ಮು ಗಳ ನಡುವೆ.
ನೂರೊಂದು ಕೂಣಿಯುತಿಹವು,
ಉತ್ತರವಿಲ್ಲದ ಪ್ರೆಶ್ನೆಗಳು.
ಕೂಗಿ ಕೆಳಲು ದನಿ ಇರಲಿಲ್ಲ,
ಸೂರೆ ಮಾಡಿದ್ದವು ಭಗ್ನ ಕನಸುಗಳು.
ತಿರುಗಿಯೂ ನೋಡದೆ ಹೊರಟು ಹೋದೆ,
ನಾನಲ್ಲೆ ನಿಂತಿದ್ದೆ ನೀಬರುವೆ ಎಂದು!
ದಿನಗಳೇ ಉರುಳಿದರು ಬಾರದೆ ಹೋದೆ.
ನೀ ಸುಖವ ಕಂಡಿದ್ದೆ
ಮತ್ತೊಬ್ಬರ ತೆಕ್ಕೆಯಲಿ ಮಿಂದು. - ಧೀರೇಂದ್ರ ನಾಗರಹಳ್ಳಿ
ಓ! ಗೆಳತಿ!---------
ಓ! ಗೆಳತಿಯೇ,
ನನ್ನೆದೆಯನ್ನು ಒದ್ದೋಡುವ
,ಇರಾದೆ ಇದ್ದಿದ್ದೇ ಆಗಿದ್ದರೆ,
ಒಂದು ಕಣ್ಸನ್ನೆ ಸಾಕಿತ್ತು!
ಈ ಹೃದಯವನ್ನೆ ಹಾಸಿರುತಿದ್ದೆ,
ನಿನ್ನ ಪಾದದಡಿಗೆ! -ಧೀರೇಂದ್ರ ನಾಗರಹಳ್ಳಿ
ಇನ್ನೇನು ಬೇಕು?
ನಿನ್ನ ಆ ಬಟ್ಟಲು ಕಂಗಳಲಿ,
ನನ್ನದೆ ಬಿಂಬ.
ನನ್ನ ಕನಸುಗಳ ಆ ಪಸೆಯಲಿ,
ನೀನೇ ನೀನು.
ನಮ್ಮಿಬ್ಬರ ಈ 'ಪ್ರೀತಿ'ಗೆಆ
'ಚಡಪಡಿಕೆ'ಗೆ ಇನ್ನೇನು ಬೇಕು? -ಧೀರೇಂದ್ರ ನಾಗರಹಳ್ಳಿ
ಎನ್ನ ಮನದನ್ನೆ
ಎನ ನಲ್ಲೆಯ ಬಗ್ಗೆ
ಏನೆಂದು ವಿವರಿಸಲಿಸರಳ
ಸುಂದರತೆಯ ಸಾಕಾರ ಇವಳು
ಒಲ್ಲದಿಹ ಮಾತಿಗೆ
ಸನ್ನೆಯಲೇ ನಕಾರಪ್ರೀತಿ
ಬಯಸುತಿಹ ಜೀವಕೆ
ಒಲವಿನಲಿ ಸಹಕಾರ
ತುಂಟ ಕುಡಿ ನೋಟದಲೇ
ಸೆರೆ ಹಿಡಿವ ರತಿ ಇವಳು
ಬಳುಕು ನಡೆ ನೀಳ
ಜಡೆಯ ಮನ ಕದ್ದ ಒಡತಿ
ಜತೆಗೂಡಿ ನನ್ನೊಡನೆ
ಎಲೆಯಡಿಕೆ ಮೆಲ್ಲು
ತಲಿಸುದ್ದಿ ಕಂತೆಯ
ಮಹಾಪೂರವನೇ ಕರೆಯುವಳು
ಅವರಿವರ ಸುದ್ದಿ ನಮಗೇತಕೆ
ಬಿಡಿಕೊನೆಯಲ್ಲಿ ನನ್ನ
ಬಾಯ್ಮುಚ್ಚಿಸುವಳೇ ಇವಳು!
ಎನ್ನ ಮನದನ್ನೆ,
ಸೊನ್ನೆಯ ಮೊಗದವಳು
ಕಪಟ,ಅಸೂಯೆಗಳು
ಸೋನ್ನೆ ಇರುವ ಗುಣಡವಳು
ಹೊಗಳಿದರೆ ಕೆನ್ನೆಯಲಿಗು
ಳಿಗಳ ನರ್ತನತೆಗಳಿದರೆ ಮೊಗ,'?'
ಸನ್ನೆಯಲಿ ಪರಿವರ್ತನ
ಹೇಗೆ ಇರಲಿ
ಅವಳು ಎನ್ನ ಮನದನ್ನೆ
ರಾತ್ರಿ ಕನಸಲಿ ಬರುವ
ಕನಸಿನ ಕನ್ಯೆ
ಮರಳಿ ಕನಸಿನೂರಿಗೆ
ದಿನಗಳು ಅದೆಷ್ಟೋ
ಉರುಳಿವೆ ಅಕ್ಷರಗಳ
ಪೋಣಿಸದೆಪದಗಳ ಜೋಡಣೆಗೆ
ಪರದಾಡುವ ಪರಿಸ್ಥಿತಿಯೆ?
ವಿನಾ ಕಾರಣ
ಕೊಡಲೇಕೆ ಹಲವು
ನೆಪಗಳ ಕಂತೆಮತ್ತೆ ನ
ಡೆಯುದಿಲ್ಲಿ ಕನಸುಗಳ ಕಂತೆಹೊತ್ತು
ಆಸೆಗಳ ಸಾಗಿಹೆನು ಕನಸಿ
ನೂರಿನ ಕಡೆಗೆತೇಲಿ
ಸಾಗಲು ಜತೆಗೆ ಬರುವೆಯಾ
ನನ್ನೊಡನೆ?
ಪದಗಳ ಪರದಾಟವಲ್ಲ,
ಕೋಟಿ ಪದಗಳಲಿ,
ಕೋಟಿ ಬಾಳುವ
ಪದಗಳ ಹೆಕ್ಕುವ ಪೀಕಲಾಟ!
ಕಂತೆ ಕನಸುಗಳಿರುವಾಗ
ಕಾರಣಗಳ ಬೊಂತೆ ಏಕೆ?
ಆಸೆಗಳ ಮೂಟೆ ಹಂಚುವೆಯಾದರೆ,
ಜತೆಗೆ ಬರುವೆ ನಿನ್ನ ಕನಸಿನ ಊರಿಗೆ....
ವಾಹ್.. ವಾಹ್.. ಅದ್ಬುತ..!!
ವಾಹ್.. ವಾಹ್.. ಅದ್ಬುತ..!!
ಶೈಲಜರವರ ಕಾವ್ಯ
ಸುಧೆಗೆ ಅಡೆತಡೆ ಇಲ್ಲ..!
ದೀಪಕರ ಚುಂಬಕ
ಉತ್ತರಕ್ಕೆ ಸರಿಸಾಟಿಇಲ್ಲ..!!
ಮಾಲಿನಿಯವರ ಅಕ್ಷರ
ನೈವಿಕೆಗೆ ಮನಸೋಲ
ದವರಿಲ್ಲವೇ ಇಲ್ಲ..!!
ಕನಸಿನೊರ ಪಯಣದಲ್ಲಿ
ಪಯಣಿಗನು ನಾನುಕೈಯೊಳಾಸೆ
ಮೊಟೆ ಹೊತ್ತಿ ಪಯಣಿಸುತಿಹೆನು..!
ಕನಸಿನೊರ ದಾರಿ ಕಾಣಲು
ಬೆಟ್ಟಗುಟ್ಟವ ಸುತ್ತಿ..!
ಕಂಡ ಕನಸ ಕೈಯಲಿಡಿಯುವ
ಹೆಬ್ಬಯಕೆಯನೊತ್ತಿ
ಕನಸುಗಾರ ನಾನು,
ಕನಸಕಾಣ್ವುದೆ ನನ್ನ ಕಾರ್ಯ
ಕನಸಿಲ್ಲದ ಅರೆಕ್ಷಣವು ಏನ್ನಲಿಲ್ಲ,
ಇದುವೆ ಆಸ್ಚರ್ಯಕನಸಿನಲ್ಲಿ
ಏನ್ನಮನವು ಸಧಾ ಮಗ್ನವಾಗಿಹುದು...!
ಮಗ್ನತೆಯ ಮಾದುರ್ಯದಿ
ಇಹವನೆ ಮರೆತಿಹುದು..!
ಕನಸಿನೊಲುಮೆ ಏನ್ನಮೇಲೆ
ಇಹುದು ಸಪ್ತಕಡಲಿನಸ್ಟು
ಕಂಡದೆಲ್ಲ ನನಸಮಾಡಿ
ಹೊಸಗನಸ ಸಿಹಿ ಸವಿಯಬಿಟ್ಟು
ಕನಸಕಾಣ್ವ ಆ ಸಮಯವೆ
ಮಕರಂದದ ಸಿಹಿಯಂತೆ..!
ಕನಸು ಮಿಡಿವ ಮದುರ
ಮಾತೆ ಜೇಂಕಾರದ ಸುದೆಯಂತೆ..!
ಕನಸಿನೊರ ನಾಸೇರ್ವೆನು
ಬೇದಿಸೆಲ್ಲ ಆತಂಕದಡೆ
ತಡೆಕನಸ ಕಾಣ್ವ ಗಳಯರನೆಲ್ಲ
ಕೊಡಿಸುವೆನು ಏನ್ನೊಡೆ
ಕಣ ಕಣದ ಏನ್ನುಸಿರಿದು
ರಚಿಸಿದೆ ಕನಸಿನೊರಿನೆಸರ..!
ಕಂಡೆಲ್ಲ ಕನಸ ನನಸಾಗಿಸಿ
ತ್ಯಜಿಸೆ ಸಿದ್ಧ ಈ ಉಸಿರ..!!
ಕನಸಿನೊರ ಪಯಣದಲ್ಲಿ
ಪಯಣಿಗನು ನಾನು..!
ಕನಸಿನಲ್ಲು ಕನಸಿನೊರ
ಕ್ಷಣದಿ ಸವಿಯ ಬಯಸಿಹೆನು..!! -ಯುವಪ್ರೇಮಿ
ಹೀಗಿತ್ತು ನನ್ನ ಪಯಣ
ಮರಳ ಕಣಗಳುರಿಳಿದಂತೆ ..
ಇರುಳು ಸಣಿಹ ಬಂದಿತು ..
ದಿನದ ದನಿವ ನಲಿವ ಕಂಡ
ಕಣ್ಣನು ರೆಪ್ಪೆ ತಾನು ಮುಚ್ಚಿತು
ಕನಸುಗಳ ಗುಡ್ಡೆ ಹಾಕಿ
ಒಂದೊಂದೇ ಹಂಚಿಹನು
ಚಂದ್ರಾಮನು ತಾರೆ ಸಖೀಯರೆಲ್ಲ
ಕೂಡಿ ಆಲ್ಲಿ ನಗುವ ಔತಣ ನಿ
ದ್ರೆ ಊರಿನಲ್ಲಿ ಸುಗ್ಗಿಯ ಸಂಭ್ರಮ
ನೀಡಿರೇ ಊರ ರಾಣಿ ಬಂದು
ನನ್ನ ನಲ್ಲಿ ಕಂಡಳೂ ಪ್ರೀತಿಯಿಂದ
ಆಪ್ಪಿ ನನ್ನ ನೂರಮುತ್ತಾ
ಕೊಟ್ಟಳು ಕನಸುಗಳು ಹೊತ್ತ
ನಾನು ಸಾಗಿದೆ ಉದಯ ರವಿಯ
ಮೊದಲ ಕಿರಣ ಬಂದು ನನ್ನ
ಮುತ್ತಲು ಬೆಳಕು ಹರಿದು
ಸಾರಿದ ರಾತ್ರಿ ಕತ್ತಲು ಹೊಸ
ದಿನದ ಹೊಸ ಬದುಕ ಜೀವಕಲೆಯ ಬಿತ್ತಲೂ
ನನ್ನ ಒಂದು ಪುಟ್ಟಗವನ ಹನಿಗೆ ನೀವೆಲ್ಲ ಸೇರಿಸಿದಿರಿ ನೂರೆಂಟು ಹನಿಗಳನುಪ್ರತ್ಯುತ್ತರದ ಝರಿ ನಿಲ್ಲದಿರಲಿ ಎಂದೂಕವಿಗನಸು ಅದೇ ತಾನೆ " DAM" ತುಂಬಲಿಯೆಂದು .....
Wednesday, December 26, 2007
kavana bhaaga 2
ಸ್ನೇಹ ಮಾಡಬೇಕಿಂತವಳ!
-----------------------
ಸ್ನೇಹ ಮಾಡಬೇಕಿಂಥವಳ! - ಒಳ್ಳೇ
ಮೋಹದಿಂದಲಿ ಬಂದು - ಕೂಡುವಂಥವಳ
ಚಂದ್ರಗಾವಿ ಶೀರೀನುಟ್ಟು - ದಿವ್ಯ
ಕೆಂದಾವರಿ ಮಗ್ಗಿ ಕುಪ್ಪಸ ತೊಟ್ಟು
ಬಂದಳು ಮಂದಿರ ಬಿಟ್ಟು - ನಾಲ್ಕು
ಮಂದಿಯೊಳು ಬಂದು ನಾಚುವಳೆಷ್ಟು!
ಅರಗಿಳಿ ಸಮ ಇವಳ ನುಡಿಯು - ಚೆಲ್ವ
ಸುಳಿನಾಭಿ ಕುಚಕುಂಭಗಳ ಹಂಸನಡೆಯು
ಥಳಥಳಿಸುವ ತೋಳ್ತೊಡೆಯು - ಒಳ್ಳೇ
ಬಳುಬಳುಕುವ ನಡುವು ತಳಿರಡಿಯು.
ಮುಕ್ತ ಕಾಮಿನಿ ಎನ್ನ ಕಾಡಿ - ಮೋಹ
ಮತ್ತ ಸುರತಸುಖ ಸುಡುವಂತೆ ಕೂಡಿ
ಹುಟ್ಟನ್ನೇ ಕಳೆದಳೊ ಖೋಡಿ - ದೇವ
ಶಿಶುನಾಳಾಧೀಶನ ಪಾದಕೆ ದೂಡಿ!
-ಸಂತ ಶಿಶುನಾಳ ಶರೀಫ
ಅ ಆ ಮತ್ತು....ಕವನ ಸಂಕಲನ - ಅಕ್ಷರ ಹೊಸ ಕಾವ್ಯ.
-----------------------------------------------------
ಕಣ್ಣು ಬಿಟ್ಟು ನಾನು ಕೈಕಾಲು ಆಡಿಸಿದಾಗ
ಕತ್ತಲೆ ಗೂಡಿನ ಅವ್ವನ ಕಣ್ಣೊಳಗೆ
ಒಲೆ ಉರಿಯುತ್ತಿತ್ತು
ಕಪ್ಪು ಕೈಕಾಲುಗಳ ಬೆಂಕಿಗೆ ಒಪ್ಪಿಸಿ ಕಾಯುತ್ತಾ
ಅಪ್ಪ ಮೋಟು ಬೀಡಿಯೊಂದಿಗೆ ಉಸಿರಾಡಿದ
ಕುದಿವ ಗಂಜಿಗೆ ಜೀವಗಳು ಕುದಿಯುತ್ತಿದ್ದವು
ಅವ್ವನ ಎದೆ ಗೂಡೊಳಗೆ
ತೆವಳಿ ನಿಂತು ನಡೆದಾಡಿದ ಹೆಜ್ಜೆಗಳು
ಇಸ್ಕೋಲು ಗೋಡೆಗಳ ನಡುವೆ ನಿಂತೇ ಬಿಟ್ಟಾಗ
ಕರಿ ಕೆನ್ನೆಯ ಮೇಲೆ ಹುರಿಗೊಂಡಿದ್ದ ಅಪ್ಪನ ಮೀಸೆ
ನಾಮದ ಮೇಸ್ಟರ ಕಾಲಿಗೆ ಬಿದ್ದು ನೆಲ ನೋಡಿತು.
ಕತ್ತಲೆ ಬೋರ್ಡಿನ ಮೇಲೆ ಕಲಿತ ಅ ಆ
ಅಕ್ಷರಗಳ ನಡುವೆ ಅವ್ವ ಅಪ್ಪನ ಅಶೆಗಳು ಸಿಕ್ಕಿದುವು
ನಮ್ಮೂರ ಕೇರಿ ಸಮಾಧಿಗಳು ಸಿಕ್ಕಿದುವು
ಅಸ್ಥಿ ಪಂಜರಗಳ ಪಾತಾಲದಲ್ಲಿ
ಒಂದಿಷ್ಟು ಮಾತುಗಳು ಸಿಕ್ಕಿದುವು
ಹುಡುಕುತ್ತಾ ಹುಡುಕುತ್ತಾ
ಕೆಳಕ್ಕೆ ಇಳಿದಾಗ ಎದ್ದ ಪ್ರಶ್ನೆಗಳಿಗೆ
ಕಾಕಿ ಡ್ರೇಸ್ಸಿನ ಕೈಕಾಲುಗಳು ಮೂಡಿ
ಮೀಸೆ ಬೆಳೆದು ಅಡರಿಸಿಕೊಂಡು
ಕತ್ತಲಲ್ಲಿ ಕಾಣದಾದೆ
ಆದರೆ
ಪಿತ್ರಾರ್ಜಿತ ಗುಡಿಸಲ ಹರಕು ಗೋಡೆಯ ಮೇಲೆ
ಅ ಆ ಮೂಡಿಸಿದಾಗ ಅಂದು
ಅವ್ವ ಕೊಟ್ಟ ಮುತ್ತುಗಳು ಕೆನ್ನೆ ಮೇಲೆ ಇನ್ನೂ ಇವೆ
ಅಪ್ಪ ಕೊಟ್ಟ ತೂತು ಕಾಸು ಉಡುದಾರದಲ್ಲಿ ಹಾಗೇ ಇದೆ.
- ಎಚ್ ಗೋವಿಂದಯ್ಯ.
ಯಾಕೋ ಅಕ್ಷರಗಳೆಲ್ಲ ಒದ್ದೆ.
--------------------------
ಪ್ರೀಯಾ
ನಮ್ಮ ಪ್ರೀತಿ
ಶಬ್ದಗಳ ಹಂಗಿಗೆ ಒಳಪಡಲಿಲ್ಲ...
ಸ್ಪರ್ಶದ ಹಂಬಲಕ್ಕೆ ಹಾತೊರೆಯಲಿಲ್ಲ...
ಆದರೂ, ನೀನು ಪ್ರತಿರಾತ್ರಿ
ನನ್ನ ಕನಸುಗಳ ದರಬಾರಿಗೆ
ಬರುವುದನ್ನ ತಡೆಯಲು
ಯಾರಿಂದಲೂ ಸಾಧ್ಯವಾಗಲಿಲ್ಲ.
ಈ ಬೆಳಗು
ಮೆಟ್ಟಿಲೇರುವಾಗ
ನಿನ್ನ ಧ್ಯಾನದಲ್ಲಿ ಕಾಲಿ ಜಾರಿ
ಮತ್ತೆ ಕಂಪಿಸಿದೆ...
ನಿನ್ನನ್ನು ಇಡಿಯಾಗಿ ಕ್ಷಣಕ್ಷಣವೂ ಪ್ರೀತಿಸಬೇಕೆಂದಿದ್ದೇನೆ
ಕಾಲನೂ ಸೋಲಬೇಕು ಹಾಗೆ
ಅವನ ನಿರ್ದಯಿ ಹೆಜ್ಜೆ
ನಮ್ಮ ಮನೆಯ ಬಾಗಿಲಿಗೆ ಬಂದರೆ
ನನ್ನ ಜೀವ ನಿನ್ನೊಳಗೆ
ನಿನ್ನ ಜೀವ ನನ್ನೊಳಗೆ ಇರುವುದ ಕಂಡು
ಕಾಲನೆ ಕಾಲು ಕಿತ್ತಬೇಕು ಹಾಗೆ.
-ಜಯಂತ ಕಾಯ್ಕಿಣಿ.
-----------------------
ಸ್ನೇಹ ಮಾಡಬೇಕಿಂಥವಳ! - ಒಳ್ಳೇ
ಮೋಹದಿಂದಲಿ ಬಂದು - ಕೂಡುವಂಥವಳ
ಚಂದ್ರಗಾವಿ ಶೀರೀನುಟ್ಟು - ದಿವ್ಯ
ಕೆಂದಾವರಿ ಮಗ್ಗಿ ಕುಪ್ಪಸ ತೊಟ್ಟು
ಬಂದಳು ಮಂದಿರ ಬಿಟ್ಟು - ನಾಲ್ಕು
ಮಂದಿಯೊಳು ಬಂದು ನಾಚುವಳೆಷ್ಟು!
ಅರಗಿಳಿ ಸಮ ಇವಳ ನುಡಿಯು - ಚೆಲ್ವ
ಸುಳಿನಾಭಿ ಕುಚಕುಂಭಗಳ ಹಂಸನಡೆಯು
ಥಳಥಳಿಸುವ ತೋಳ್ತೊಡೆಯು - ಒಳ್ಳೇ
ಬಳುಬಳುಕುವ ನಡುವು ತಳಿರಡಿಯು.
ಮುಕ್ತ ಕಾಮಿನಿ ಎನ್ನ ಕಾಡಿ - ಮೋಹ
ಮತ್ತ ಸುರತಸುಖ ಸುಡುವಂತೆ ಕೂಡಿ
ಹುಟ್ಟನ್ನೇ ಕಳೆದಳೊ ಖೋಡಿ - ದೇವ
ಶಿಶುನಾಳಾಧೀಶನ ಪಾದಕೆ ದೂಡಿ!
-ಸಂತ ಶಿಶುನಾಳ ಶರೀಫ
ಅ ಆ ಮತ್ತು....ಕವನ ಸಂಕಲನ - ಅಕ್ಷರ ಹೊಸ ಕಾವ್ಯ.
-----------------------------------------------------
ಕಣ್ಣು ಬಿಟ್ಟು ನಾನು ಕೈಕಾಲು ಆಡಿಸಿದಾಗ
ಕತ್ತಲೆ ಗೂಡಿನ ಅವ್ವನ ಕಣ್ಣೊಳಗೆ
ಒಲೆ ಉರಿಯುತ್ತಿತ್ತು
ಕಪ್ಪು ಕೈಕಾಲುಗಳ ಬೆಂಕಿಗೆ ಒಪ್ಪಿಸಿ ಕಾಯುತ್ತಾ
ಅಪ್ಪ ಮೋಟು ಬೀಡಿಯೊಂದಿಗೆ ಉಸಿರಾಡಿದ
ಕುದಿವ ಗಂಜಿಗೆ ಜೀವಗಳು ಕುದಿಯುತ್ತಿದ್ದವು
ಅವ್ವನ ಎದೆ ಗೂಡೊಳಗೆ
ತೆವಳಿ ನಿಂತು ನಡೆದಾಡಿದ ಹೆಜ್ಜೆಗಳು
ಇಸ್ಕೋಲು ಗೋಡೆಗಳ ನಡುವೆ ನಿಂತೇ ಬಿಟ್ಟಾಗ
ಕರಿ ಕೆನ್ನೆಯ ಮೇಲೆ ಹುರಿಗೊಂಡಿದ್ದ ಅಪ್ಪನ ಮೀಸೆ
ನಾಮದ ಮೇಸ್ಟರ ಕಾಲಿಗೆ ಬಿದ್ದು ನೆಲ ನೋಡಿತು.
ಕತ್ತಲೆ ಬೋರ್ಡಿನ ಮೇಲೆ ಕಲಿತ ಅ ಆ
ಅಕ್ಷರಗಳ ನಡುವೆ ಅವ್ವ ಅಪ್ಪನ ಅಶೆಗಳು ಸಿಕ್ಕಿದುವು
ನಮ್ಮೂರ ಕೇರಿ ಸಮಾಧಿಗಳು ಸಿಕ್ಕಿದುವು
ಅಸ್ಥಿ ಪಂಜರಗಳ ಪಾತಾಲದಲ್ಲಿ
ಒಂದಿಷ್ಟು ಮಾತುಗಳು ಸಿಕ್ಕಿದುವು
ಹುಡುಕುತ್ತಾ ಹುಡುಕುತ್ತಾ
ಕೆಳಕ್ಕೆ ಇಳಿದಾಗ ಎದ್ದ ಪ್ರಶ್ನೆಗಳಿಗೆ
ಕಾಕಿ ಡ್ರೇಸ್ಸಿನ ಕೈಕಾಲುಗಳು ಮೂಡಿ
ಮೀಸೆ ಬೆಳೆದು ಅಡರಿಸಿಕೊಂಡು
ಕತ್ತಲಲ್ಲಿ ಕಾಣದಾದೆ
ಆದರೆ
ಪಿತ್ರಾರ್ಜಿತ ಗುಡಿಸಲ ಹರಕು ಗೋಡೆಯ ಮೇಲೆ
ಅ ಆ ಮೂಡಿಸಿದಾಗ ಅಂದು
ಅವ್ವ ಕೊಟ್ಟ ಮುತ್ತುಗಳು ಕೆನ್ನೆ ಮೇಲೆ ಇನ್ನೂ ಇವೆ
ಅಪ್ಪ ಕೊಟ್ಟ ತೂತು ಕಾಸು ಉಡುದಾರದಲ್ಲಿ ಹಾಗೇ ಇದೆ.
- ಎಚ್ ಗೋವಿಂದಯ್ಯ.
ಯಾಕೋ ಅಕ್ಷರಗಳೆಲ್ಲ ಒದ್ದೆ.
--------------------------
ಪ್ರೀಯಾ
ನಮ್ಮ ಪ್ರೀತಿ
ಶಬ್ದಗಳ ಹಂಗಿಗೆ ಒಳಪಡಲಿಲ್ಲ...
ಸ್ಪರ್ಶದ ಹಂಬಲಕ್ಕೆ ಹಾತೊರೆಯಲಿಲ್ಲ...
ಆದರೂ, ನೀನು ಪ್ರತಿರಾತ್ರಿ
ನನ್ನ ಕನಸುಗಳ ದರಬಾರಿಗೆ
ಬರುವುದನ್ನ ತಡೆಯಲು
ಯಾರಿಂದಲೂ ಸಾಧ್ಯವಾಗಲಿಲ್ಲ.
ಈ ಬೆಳಗು
ಮೆಟ್ಟಿಲೇರುವಾಗ
ನಿನ್ನ ಧ್ಯಾನದಲ್ಲಿ ಕಾಲಿ ಜಾರಿ
ಮತ್ತೆ ಕಂಪಿಸಿದೆ...
ನಿನ್ನನ್ನು ಇಡಿಯಾಗಿ ಕ್ಷಣಕ್ಷಣವೂ ಪ್ರೀತಿಸಬೇಕೆಂದಿದ್ದೇನೆ
ಕಾಲನೂ ಸೋಲಬೇಕು ಹಾಗೆ
ಅವನ ನಿರ್ದಯಿ ಹೆಜ್ಜೆ
ನಮ್ಮ ಮನೆಯ ಬಾಗಿಲಿಗೆ ಬಂದರೆ
ನನ್ನ ಜೀವ ನಿನ್ನೊಳಗೆ
ನಿನ್ನ ಜೀವ ನನ್ನೊಳಗೆ ಇರುವುದ ಕಂಡು
ಕಾಲನೆ ಕಾಲು ಕಿತ್ತಬೇಕು ಹಾಗೆ.
-ಜಯಂತ ಕಾಯ್ಕಿಣಿ.
Tuesday, December 25, 2007
kavanagalu
ಸುಮ್ಮನೆ ಹೇಳುತ್ತಿಲ್ಲ
ನಿನಗಾಗಿ ನಾನು ಏಳು ಸಾಗರಗಳನ್ನ
ದಾಟಿಬಂದರು ಅಚ್ಚರಿಯಿಲ್ಲ!
ನಿನ್ನೊಳಗೆ ನನಗಾಗಿ
ಏಳು ಮಲ್ಲಿಗೆ ತೂಕದ ಪ್ರೀತಿಯಿದೆಯೆ?
ಎಷ್ಟೋ ನಿದ್ದೆ ಬಾರದ ರಾತ್ರಿಗಳನ್ನ
ನಿನ್ನ ಗುಂಗಿನಲ್ಲೆ ಕಳೆದಿದ್ದಿದೆ!
ಒಮ್ಮೆಯಾದರು ನೀನು
ಮಗ್ಗಲುಬದಲಿಸುವಾಗ ನನ್ನ ನೆನೆದಿದ್ದಿದೆಯ?
ನನಗಿಲ್ಲಿ ನಿನ್ನ ನೆನಪುಗಳೇ
ನನ್ನ ಬೆಳಕಾಗಿರುವಾಗ!
ನೀನು ನನ್ನೊಳಗೆ ಬಂದು
ಒಮ್ಮೆಯಾದರು ಕಚಕುಳಿ ಇಟ್ಟಿದ್ದಿದೆಯ?
ನಾನು ಬರೆದ ಕವಿತೆಗಳ
ಪ್ರತಿಸಾಲಿನಲ್ಲಿ ನಾನು ನಿನ್ನ
ಮುದ್ದು ಹೆಸರಪ್ರೀತಿಯಿ೦ದ ಬರೆದಿದ್ದಿದೆ!
ಅಷ್ಟು ಚಂದ ಹಾಡುವ
ನೀನುಒಮ್ಮೆಯಾದರು ನನಗೆ ಲಾಲಿ ಹಾಡಿದ್ದಿದೆಯ?
ಸಾಕು ಸಾಕಿನ್ನು
ನಿನ್ನ ನೆನಪೊಳಗೆ
ನನ್ನ ಮರೆಯುವುದನಾನು ನಾನಾಗಬೇಕಿದೆ
ನೀನಿಲ್ಲದೆಆದರೆ ನಾ ಇಡುವ
ಪ್ರತಿಹೆಜ್ಜೆಹೆಜ್ಜೆಯಲ್ಲಿಯೂನಾ
ನಿನ್ನ ನೆನೆಯದಿದ್ದರೆ ನನ್ನಾಣೆ…..
Nanna Gelathi
ಮೆಲ್ಲಮೆಲ್ಲನೆ ಬೀಸುವ ತಂಗಾಳಿ
ನನ್ನ ಗೆಳತಿಯ ಬಳಿಯಲೊಮ್ಮೆ
ಸುಳಿದು ನೋಡುಅವಳಿಂದ
ನೀನು ಮತ್ತಷ್ಟು ತಂಪಾದರು ಆಶ್ಚರ್ಯವಿಲ್ಲ !
ಭುವಿಯ ಸವಿಯ ಹೆಚ್ಚಿಸುವ
ಮುದ್ದು ಮುದ್ದುಹೂವುಗಳೇ,
ಒಂದೇ ಒಂದು ಸಲ ಇವಳನೆನಪು ಮಾಡಿಕೊಳ್ಳಿ,
ಮಲಿನಗೊಂಡ ಮನಗಳಿಗೆಮತ್ತಷ್ಟು
ಮುದ ನೀಡುವ ಸೌಂದರ್ಯ ನಿಮ್ಮದಾಗಬಹುದು !
ಬದುಕಿನ ಆಸೆಯನ್ನ
ಹೊರಹೊಮ್ಮಿಸುವಸುಂದರ
ಕವನಗಳೆ ಒಂದೇ ಒಂದು ಸಾರಿಇವಳ
ಮೃದು ಹೃದಯದೊಳಿಳಿದು ಬನ್ನಿ,
ಈ ಮಾಯಗಾತಿಯ ಮೈ ಸ್ಪರ್ಶದಿಂದಲಾದರು
ನಿಮ್ಮ ಸಾಲುಗಳು ಇನ್ನೂ ಶ್ರೀಮಂತವಾದಾವು !
ರಾತ್ರಿ ಮಿನುಗುವ
ಚಂದಮಾಮನೇಯಾಕಿಷ್ಟು ಕೆಂಪಾಗಿದ್ದಿ
ತಂಪಾಗಿದ್ದಿ ?ಗೊತ್ತಾಯಿತು ಬಿಡು…
ಇವಳು ನಿನ್ನ ಕನಸಲ್ಲಿ ಬಂದಿರಬೇಕು !
ನಕ್ಷತ್ರಗಳೇ ನಿಮಗೆ ಏನು
ಅನ್ನಿಸುವುದಿಲ್ಲವೆ?ಈ ಮಲ್ಲಿಗೆಯ
ಮಗಳಿಂದ ಅದೆಷ್ಟು ದೂರವಿದ್ದೀರಿ !
ಸುಮ್ಮನಿಳಿದು ಬಂದಿವಳ ಜೊತೆ
ಜೊತೆಯಾಗಿಆಟವಾಡಿಕೊಂಡಿರಬಾರದೇನು !
ಇವಳೇನು ದೂರದವಳ?ನಿಮ್ಮ ಚಂದಮಾಮನ ತಂಗಿಯಲ್ಲವೇನು !
ಕವಿತೆ ಹುಟ್ಟುತಿಲ್ಲ......
ಎದೆಯೊಳಗೆ ನೂರಾರು
ಕವಿತೆಅದೆಷ್ಟೋ ಸಾಲುಗಳು,
ಅದೆಷ್ಟೊಮೊಗೆದಷ್ಟು
ಭಾವನೆಗಳು, ಬೇಡಿದಷ್ಟು ಕನಸು !
ತುಂಬಿಕೊಂಡು ಬರೆಯಲು ಕುಳಿತರೂ,
ಒಂದು ಕವಿತೆ ಹುಟ್ಟುತ್ತಿಲ್ಲವೆಂದು ಬಿಕ್ಕಳಿಸುತ್ತೇನೆ !!!
ಕನಸಿನಲ್ಲೂ ಹಾಗೆ
ಅದೆಷ್ಟೋಸಾಗರದಷ್ಟು ಪದಗಳು
ಬಂದುನನ್ನೊಡನೆ ಕಧನಕ್ಕಿಳಿಯುತ್ತವೆ !
ಒಂದೊಂದು ಪದಗಳಿಗು ಮುದ್ದು ಮಾಡಿ
ತಲೆ ನೇವರಿಸಿ ಬಂದು ಬರೆಯಲು ಕುಳಿತರೂ
ಬರೆಯಲಾಗದೆ ಮತ್ತೆ ಬಿಕ್ಕಳಿಸುತ್ತೇನೆ !!!
ಬೆರಳ ತುದಿಯಲ್ಲೇ
ಶಭ್ಧಗಳ ಬಂಡಾರಸುಮ್ಮನೆ ಬಂದು
ಹೆಗಲೇರಿ ಕಚಕುಳಿಯಿಡುತ್ತವೆ
ಒಂದೊಂದು ಪದಗಳೂ,
ನಲ್ಲನ ನಲ್ಲೆಯ ಹಾಗೆ ಸುಂದರಬೆರಳ ತುದಿಯಲ್ಲಿದ್ದರೆ ಸಾಕೆ?
ಮನದೊಳಗೆ ಚಿತ್ತಾರ ಮಾಡಬೇಡವೆ?
ಚಿತ್ತಾರವಿಲ್ಲದ ಕವಿತೆ ಬರೆದು ನನಗು ಅಭ್ಯಾಸವಿಲ್ಲ !
ಒಂದೆ ಒಂದು ಸಾಲು ಬರೆಯದೆ ನನ್ನಲ್ಲೆ ಬೆತ್ತಲಾಗುತ್ತೇನೆ !!!
ಉಮ್ಮಳಿಸಿ ಬರುವ ದುಃಖವನ್ನ
ತಡೆಹಿಡಿದು ಬೇಡಿದರು ಕೇಳುತ್ತಿಲ್ಲಪದಗಳು !
ನವವಧುವಿನಂತೆ ಶೃಂಗರಿಸಿ
ಬರೆಯುತ್ತೇನೆಂದರು ಕೇಳುತ್ತಿಲ್ಲ ಪದಗಳು !
ನಮ್ಮನಮ್ಮೊಳಗೇ ವಿರಾಮವಿಲ್ಲದ
ಕದನಸುಮ್ಮನ ಹಠ ! ಬರೆಯಲಾಗುತ್ತಿಲ್ಲ ಕವನ!!!
ಕವಿತೆಗಳೇ ಹಾಗೆ,
ಎಷ್ಟು ಗೋಗರೆದರುಬೇಡಿಕೊಂಡರು,
ಯಾರ ಮಾತು ಕೇಳುವುದಿಲ್ಲ
ಪ್ರೀತಿಯಿಲ್ಲದೆ ಕರೆದರೆ ಹೇಗಾದರು ಬಂದೀತೆ
ಕವಿತೆಪ್ರೀತಿ ಇಲ್ಲದೆ ಬರೆದರೆ ಅದು ಆದೀತೆ ಕವಿತೆ !!!
ಗೆಳತಿಯ ಗುಟ್ಟು..............
ಹತ್ತಾರು ಕವಿತೆಯಲ್ಲಿರದ
ಶಕ್ತಿನಿನ್ನ ಕಣ್ಣಾಲೆಗಳಲ್ಲಿದೆಯಲ್ಲ
ಗೆಳತಿಅದರ ಗುಟ್ಟೇನು..!!
ನೂರಾರು ನೋವುಗಳು
ನಿನ್ನ ನಗುವ ಮಾಯೆಯಲ್ಲಿ
ಮಾಯವಾಗುವುದರ ಗುಟ್ಟೇನು ಗೆಳತಿ..!!
ಯಾರೊ ಬರೆದ
ಪ್ರೀತಿಯಕವಿತೆಯೊಳಗೂ ನಿನ್ನ ಛಾಯೆ !
ಯಾರೋ ಹಾಡಿದ
ಹಾಡಿನೊಳಗೂನಿನ್ನದೇ ಪ್ರೀತಿಯ ಮಾಯೆ
ಮಾಯೆನಿನ್ನ ಕುರಿತು ಬರೆದ
ಪ್ರತಿ ಪದಗಳೂಬಂಗಾರವಾಗುವುದರ ಗುಟ್ಟೇನು ಗೆಳತಿ..!!
ನೀನಾಡುವ ಪ್ರತಿ
ಮಾತುಗಳುನೊಂದ ಹೃದಯಕ್ಕೆ
ಮಲ್ಲಿಗೆಯಾಗುವುದರ ಗುಟ್ಟು ?
ನೀ ನೋಡುವ ಪ್ರತಿ ಹೂವುಗಳೂ
ಗುಲಾಭಿಯಾಗುವುದರ ಗುಟ್ಟೇನು ಗೆಳತಿ..!!
ಮನ ಮರುಗಿದಾಗಲೆಲ್ಲ
ನನ್ನ ಮನ ನಿನ್ನ
ಹೆಗಲ ಬೇಡುವುದರ ಗುಟ್ಟೆನು?
ಕೂಡಿ ಬೆಳೆಯಲಿಲ್ಲ,ಕೂಡಿ ಬೆರೆಯಲಿಲ್ಲ
ಆದರೂ ಅರೆಕ್ಷಣ ನಿನ್ನಗಲಿರಲಾರದ
ಮಧುರ ನೋವಿನ ಗುಟ್ಟಾದರೂ ಏನು ಗೆಳತಿ..!!
ನಟ್ಟ ನಡುರಾತ್ರಿ
ಬೆಚ್ಚಿ ಬೀಳಿಸುವ
ಕನಸುಗಳಿಗೆ ನಿನ್ನ ನೆನಪು ಮಾಡಿದೆ !
ಕನಸುಗಳೇನೊ ಮತ್ತೆ ಮತ್ತೆನನ್ನೆದೆಗೆ ಜಾರುತ್ತಿವೆ..!
ಆದರೆ ಬೆಚ್ಚಿ ಬೀಳಿಸುತ್ತಿಲ್ಲಮನದೊಳಗೆ
ಚಿತ್ತಾರ ಬಿಡಿಸುತ್ತಿರುವುದರ ಗುಟ್ಟೇನು ಗೆಳತಿ..!!
ನಲ್ಲೆ, ನಿನ್ನ ಮರೆಯಲು... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.
------------------------------------------------------------------
ನಲ್ಲೆ, ನಿನ್ನ ಮರೆಯಲು ಏನೆಲ್ಲ ಮಾಡಿದೆ
ಆದರೆ ಎಲ್ಲೆಲ್ಲೂ ನಿನ್ನ ನೆನಪೇ ಕಾಡಿದೆ
ಅರಳಿ ನಿಂತ ಮಲ್ಲಿಗೆಯಲಿ ನಿನ್ನದೆ ನಗೆ
ಹೂವಿನ ಮಕರಂದ ನಿನ್ನ ತುಟಿಯದೇ ಬಗೆ
ಸುಳಿದು ಬಂದ ಗಾಳಿಯಲ್ಲಿ ನಿನ್ನ ಪರಿಮಳ
ಮಾಮರದಲಿ ನಿನ್ನದೇ ಗಾನ ಮಂಜುಳ
ಮರಗಳು ಮೈತುಂಬ ನಮ್ಮ ಹೆಸರು ತೊಟ್ಟಿವೆ
ಪೊದೆಪೊದೆಗಳ ಮರೆಗಳಲ್ಲೂ ನಮ್ಮ ಗುಟ್ಟಿವೆ
ಬಳ್ಳಿ ಬಳ್ಳಿ ಗೆಳತಿ ಎಲ್ಲಿ ಎಂದು ಕೇಲಿವೆ
ದುಃಖದ ಮಡು ಮಾತಿಲ್ಲದೆ ಮೌನ ತಾಳೀದೆ.
- ಬಿ ಆರ್ ಲಕ್ಷ್ಮಣರಾವ್.
ಮರು ವಸಂತ.... ಕವನ ಸಂಕಲನ - ಸುಬ್ಬಾ ಭಟ್ಟರ ಮಗಳೇ.
-----------------------------------------------------------
ಬಂದಂತೆ ಮರು ವಸಂತ
ನೀ ಬಂದೆ ಬಾಳಿಗೆ
ಅನುರಾಗ, ಆಮೋದ
ಎದೆಯಲ್ಲಿ ತುಂಬಿದೆ
ಕೈ ಸೋಕಿ, ನಿನ್ನ ಬಿಸಿ ತಾಕಿ,
ಚಿಮ್ಮಿದೆ ಹೊಸ ಚಿಗುರು;
ನಗೆಯಂತೆ, ನಿನ್ನ ಬಗೆಯಂತೆ
ಅರಳಿದೆ ಹೂವುಗಳು;
ನಿನ್ನ ಪ್ರೀತಿಯ ಪ್ರಖರತೆಗೆ
ಮಾಗಿಯ ಮಂಜು ತೆರೆ
ಕರಗಿ, ಸೊರಗಿ, ಮರೆಯಾಗಲು
ಜಗವೇ ಝಗಝಗಿಸಿದೆ.
ಕಂದಿದ್ದ ಕಣ್ಣಿಗೆ ಹೊಸ ಹೊಳಪು
ನೀ ತಂದೆ ಹೊಸ ನೋಟವ,
ಎಂದೆಂದೂ ಜೋಡಿ ನಾನೆಂದು
ನೀಡಿದೆ ಒಡನಾಟವ;
ನಿನ್ನ ಒಲವೆಂಬ ಸಂಜೀವಿನಿ
ಹೊಸ ಶಕ್ತಿ ತೋಳಿಗೆ,
ಧೃತಿಯ ತಂದಿಹುದು ಹೆಜ್ಜೆಗೆ,
ಭರವಸೆಯ ಬದುಕಿಗೆ.
- ಬಿ ಆರ್ ಲಕ್ಷ್ಮಣರಾವ್.
ಈ ಕಂಗಳು....ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.
------------------------------------------------------
ಈ ಕಂಗಳೇನೋ ನನ್ನವು
ನೋಟ ನಿನ್ನದು
ಈ ನೆಲವ ಹಸಿರು ಹೊಲವ ಗೈದ
ಮಾಟ ನಿನ್ನದು
ನಿನ್ನ ಕನಸುಗಣ್ಣಿನಲ್ಲಿ
ನನ್ನ ಕನಸಿದೆ
ನನ್ನ ಮನದ ದೇಗುಲದಲಿ
ನಿನ್ನ ಮನಸಿದೆ
ನನ್ನ ಹೆಜ್ಜೆ, ನಿನ್ನ ಹಾದಿ
ಪ್ರೇಮದೂರಿಗೆ
ನಿಂತ ಕಡೆಯೆ ನಮ್ಮ ತಾಣ
ಗಗನ ಸೂರಿಗೆ
ಎಲ್ಲ ಬಂಧ ಬಿಡಿಸಿ, ನೀನು
ನನ್ನ ಬಂಧಿಸಿದೆ
ಈಗ ನನಗಿದೊಂದೇ ಸಾಕು
ನಿನ್ನ ಪ್ರೇಮಸುಧೆ..
- ಬಿ ಆರ್ ಲಕ್ಷ್ಮಣರಾವ್.
ಒಡೆಯದ ಒಡಪೇ...ಕವನ ಸಂಕಲನ - ಸುಬ್ಭಾಭಟ್ಟರ ಮಗಳೇ.
----------------------------------------------------------
ಒಡೆಯದ ಒಡಪೇ, ಒಲವಿನ ಮುಡಿಪೇ
ಸನಿಹಕೆ ಸೆಳೆದವಳೇ
ಕಾಡುವ ಕನಸೇ, ಕನ್ನಡಿ ತಿನಿಸೇ
ದೂರವೇ ಉಳಿದವಳೇ
ಬಾರೇ ಬಾ ಬಳಿಗೆ
ಇಂದೇ ಈ ಗಳಿಗೆ
ಮಾಯಾಜಿಂಕೆಯ ನಡೆಯವಳೇ
ಬೆಡಗಿನ ನಿಗೂಢ ನುಡಿಯವಳೇ
ನೋಟದ ತುಂಬ ನಿನ್ನದೇ ಬಿಂಬ
ನನ್ನೀ ಕಂಗಳಗೆ
ಕಿನ್ನರ ಲೋಕದ ಕನ್ನಿಕೆಯೇ
ನಿಜವನು ಮರೆಸುವ ಜವನಿಕೆಯೇ
ಕವಿದರೂ ಇರುಳ, ನೀ ಬಳಿ ಇರಲು
ಉಜ್ವಲ ದೀವಳಿಗೆ
ಕಲ್ಪಯಲ್ಲೇ ಎಷ್ಟು ದಿನ
ಕಾಡುವೆ ಹೀಗೆ ಪ್ರ್ಇಯಕರನ?
ಬಾ ಕನಿಕರಿಸಿ, ನನ್ನನು ವರಿಸಿ
ಬಾಳಿನ ಪಾತಳಿಗೆ.
- ಬಿ ಆರ್ ಲಕ್ಷ್ಮಣರಾವ್
ನನ್ನವಳು... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.
------------------------------------------------------
ನಾನಿಂದು ಕಂಡೆ ಆ ಹೆಣ್ಣನು
ನಾ ಕಂಡುಕೊಂಡೆ ನನ್ನವಳನು
ಆ ಬೊಗಸೆ ಕಣ್ಣುಗಳನ್ನು ಏನೆನ್ನಲಿ ?
ಜೋಡಿ ನಂದಾದೀಪ ದೇಗುಲದಲಿ
ಹಣೆಯಲ್ಲಿ ಕುಂಕುಮಬೊಟ್ಟು ಉದಯರವಿಯು
ಮೂಗಲ್ಲಿ ಮುತ್ತಿನ ನತ್ತು ಚಂದ್ರಾಮನು
ನಕ್ಕಾಗ ಕೆನ್ನೆಗಳಲ್ಲಿ ಎಂಥಾ ಗುಳಿ !
ಚುಂಬನದ ಆಸೆಗೆ ಸೆಳೆವ ಸುಂದರ ಸುಳಿ
ಅವಳ ದನಿಯೋ ಮಂಜುಳ ರಾಗಮಾಲಿಕೆ
ಅಂಗಾಂಗದ ಬಣ್ಣನೆಯೇಕೆ ? ಶಿಲಾಬಾಲಿಕೆ
ಅವಳ ಹೃದಯ ವಿಶಾಲ ಕಡಲಿನ ಹಾಗೆ
ಅದರಲ್ಲಿ ಮುಳುಗಿದೆ ನಾನು ನಿಧಿ ಶೋಧಕೆ
ಹವಳವೆ? ಮುತ್ತೆ? ಅಲ್ಲಿ, ತಳದಲೇನಿದೆ ?
ಅಲ್ಲುಂಟು ಭಾಗ್ಯಶಾಲಿಗೆ ಪ್ರೀತಿಯ ಸುಧೆ.
- ಬಿ ಆರ್ ಲಕ್ಷ್ಮಣರಾವ್.
ಹದಿಹರೆಯದ ಹಾಡು.... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ
----------------------------------------------------------------
ಈ ಬೀದಿಯಲ್ಲಿ ನಾ ಓಡಾಡಿದ್ದೆ
ಬೇಕಾದಷ್ಟು ಸಲ
ಈ ನಗರದ ಎಲ್ಲಾ ಬೀದಿಗಳಂತೆ
ಧೂಳು, ಹೊಗೆ, ಗದ್ದಲ
ನಲ್ಲೆ, ನಿನ್ನ ಮನೆ
ಇಲ್ಲೇ ಇರುವುದು ತಿಳಿದೊಡನೆ
ಎಂಥಾ ಚೆಲುವು ಬಂತು ಬೀದಿಗೆ!
ಎಂಥಾ ಪರಿಮಳ!
ಧೂಳು ಈಗ ಧೂಳಲ್ಲ, ನನಗದೇ
ಪುಷ್ಪ ಪರಾಗ ರೇಣು
ಕಿವಿ ಗಡಚಿಕ್ಕುವ ಹಾರನ್ನುಗಳೇ
ಈಗ ಇಂಪಾದ ವೇಣು
ಬಸ್ಸು ಲಾರಿಯ ಹೊಗೆ
ಆಗರು ಧೂಪ ನನಗೆ
ನೀನಿರುವೆಡೆಯೇ ನನಗೆ ನಂದನ
ನೀನೇ ಕಾಮಧೇನು
ನೀನ್ನ ಮನೆಯೆ ದೇವಾಲಯ, ದೇವಿ
ನಾನು ನಿನ್ನ ಭಕ್ತ
ಯಾರೇ ನಕ್ಕರೂ ಕೇರು ಮಾಡದೆ
ನಿಂತಿರುವೆನು ಅನುರಕ್ತ
ನಿನ್ನ ಮನೆಯ ಮುಂದೆ
ನೆಟ್ಟ ಗರುಡಗಂಬದಂತೆ
ನಲ್ಲೆ, ನಿನ್ನ ದರ್ಶನಕ್ಕಾಗಿ
ನಾ ಹಂಬಲಿಸುತ್ತ
ಕರುಣಿಸಿ ನಿನ್ನ ಭಕ್ತನ ಮೇಲೆ
ಬಾರೇ ನೀ ಹೊರಗೆ
ಕಿಟಕಿಯನ್ನು ತೆರೆದಾದರೂ ಒಮ್ಮೆ
ನೋಡೇ ಈ ಕಡೆಗೆ
ಪ್ರೀತಿಯ ಒಂದು ನಗೆ
ಸಿಕ್ಕರೆ,ಅದೇ ಸಾಕು ನನಗೆ
ಬದುಕಿ ಉಳಿಯುವೆನು ಭರವಸೆಯಲ್ಲಿ
ನಾನು ನಾಳೆವರೆಗೆ.
- ಬಿ ಆರ್ ಲಕ್ಷ್ಮಣರಾವ್.
ಅಮ್ಮ....... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.
------------------------------------------------------
ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೋಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ
ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಆಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಆಗಾಧ ಗಗನ
ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ
-ಬಿ ಆರ್ ಲಕ್ಷ್ಮಣರಾವ್
ಕನಸು..... ಕವನ ಸಂಕಲನ- ಸುಬ್ಬಾಭಟ್ಟರ ಮಗಳೇ.
-----------------------------------------------------
ಏಕೆ ಬಂದೆ ನೀ ನಟ್ಟಿರುಳು
ಕನಸಿನ ಕದ ತೆರೆದು ?
ಏಕೆ ನಿಂತೆ ನೀ ಒಲಿದಂತೆ
ಬಿಗುಮಾನವ ತೊರೆದು ?
ನಗುವೆಯೇಕೆ ಹೊಸ ಹಗಲಂತೆ
ಹೊಂಬೆಳಕನು ಸೂಸಿ ?
ಕರೆವೆಯೇಕೆ ಹಾದಿಯ ತುಂಬ
ಹೂಗಳ ನೀ ಹಾಸಿ ?
ಕೈಗಳಲ್ಲಿ ನೀ ಹಿಡಿದಿರುವೆ
ಒಲವಿನ ಹೂಮಾಲೆ
ಕಂಗಳು ತಿಳಿಸಿವೆ ಇಂಗಿತವ:
"ನಿನ್ನವಳೀ ಬಾಲೆ"
ನಾ ಬಲ್ಲೆನು ಇದು ಕನಸೆಂದು
ಆದರೂ ನಾ ಬರುವೆ
ನೀ ಕರೆದರೆ ನಾ ಬರದಿರಲು
ಸಾಧ್ಯವೇ, ಓ ಚೆಲುವೆ ?
-ಬಿ ಆರ್ ಲಕ್ಷ್ಮಣರಾವ್.
ಹೃದಯ ಮೋಹಿನಿಗೆ....ಕವನ ಸಂಕಲನ - ದೀಪದ ಮಲ್ಲಿ.
----------------------------------------------------
ನಿದ್ದೆಯ ಬೇಲಿಯ ಕನಸಿನ ಬನದಲಿ
ಆಡುವ ಹೆಣ್ಣೆ, ನೀನಾರು ?
ಕಾಮನ ಬಿಲ್ಲಿನ ಸೀರೆಯ ಹೆಣ್ಣೆ,
ಜಡೆಯಲಿ ತಾರೆಯ ಮುಡಿದಿಹ ಹೆಣ್ಣೆ,
ಮಿಂಚುವ ಕಂಗಳ ಸಂಚಿನ ಹೆಣ್ಣೆ,
ಬಿಂಕದ ಹೆಣ್ಣೆ, ನೀನಾರು ?
ಎತ್ತಿದ ಮುಖವೊ ಚೆಲುವಿನ ಗೋಪುರ ;
ಕಂಗಳೊ ಕಳಸದ ಜೊತೆದೀಪ,
ಕೊರಳೊ ಕೇಳದ ದನಿಯ ವಿಮಾನ -
ಹೃದಯದ ಮರುಳೆ, ನೀನಾರು ?
ವಸಂತ ಹಸೆಮಣೆ ನಿನ್ನ ಹಣೆ;
ನಡುವೆ ಕುಂಕುಮದ ಚಿತ್ರಲತೆ -
ಕರೆದರೆ ನಿಲ್ಲದೆ ತಿರುಗಿ ನೋಡದೆ
ತೆರಳುವ ಹೆಣ್ಣೆ, ನೀನಾರು ?
ಕನಸಿನ ಬನದಲಿ ಕಮಲಾಕರದಲಿ
ಕನಕ ವೀಣೆಯನು ದನಿಮಾಡಿ,
ನನ್ನ ನೆರಳಿಗೇ ಯೋಜನ ಹಾರುವ
ಒಲಿಯದ ಹೆಣ್ಣೆ, ನೀನಾರು ?
ಕೆನ್ನೆಯ ಬಾನಲಿ ಮುತ್ತಿನ ಚಂದಿರ
ಮೂಡದ ಹೆಣ್ಣೆ, ನೀನಾರು ?
ಪ್ರೇಮಪದಪದುಮ ಸೋಂಕದ ಮಂದಿರ
ಮಾಯಾಮೋಹಿನಿ, ನೀನಾರು ?
- ಕೆ ಎಸ್ ಸರಸಿಂಹಸ್ವಾಮಿಯವರು
ಎಲ್ಲ ಮಲಗಿರುವಾಗ..... ಕವನ ಸಂಕಲನ - ನವಿಲ ದನಿ.
-------------------------------------------------------
ಎಲ್ಲ ಮಲಗಿರುವಾಗ ಎಚ್ಚರಾಯಿತು ನನಗೆ,
ಕಣ್ತುಂಬ ಹೊಂಗನಸು ಬೆಳಗಿನಲ್ಲಿ;
ಎಲೆ ಮರೆಯ ಹಕ್ಕಿ ಹಾಡಿತ್ತು, ಹನಿಗಳು ಬಿದ್ದು
ಹೂವ ಹೊಳೆ ಹರಿದಿತ್ತು ಕಾಡಿನಲ್ಲಿ.
ಬೆಳಗಾಗ ಬಿರಿದ ಮೊಗ್ಗುಗಳು ಸಂಜೆಗೆ ಬಾಡಿ
ಸತ್ತ ಹೂಗಳ ರಾಶಿ ಲತೆಯ ಕೆಳಗೆ;
ತೆರೆದ ಪುಸ್ತಕದಂತೆ ಬದುಕು, ಮಳೆಬಿಲ್ಲಿನಲಿ
ನಾ ಕಂಡೆ ಹರುಷವನು ಮುಗಿಲ ಕೆಳಗೆ.
ಕೇಂದ್ರಬಿಂದುವಿಗೆ ಹತ್ತಿರವೊ ದೂರವೊ ಕಾಣೆ,
ಬೀಸುತ್ತಲೇ ಇತ್ತು ಮಂದಪವನ;
ಕಿಟಕಿಯನು ಮುಚ್ಚುದರೆ ತೆರೆದಿತ್ತು ಬಾಗಿಲು,
ಬಲು ಸೂಕ್ಷ್ಮ ಜೀವನದ ಚಲನವಲನ!
ಹಾಡಿನೀಚೆಗೆ ನೋವು ಕಾಡುತ್ತಲೆ ಇತ್ತು
ಬಾಯಿ ಮುಚ್ಚಿತ್ತೆನಗೆ, ಕಣ್ಣ ತೆರೆದೆ;
ಗೋಧೂಳಿಯಲ್ಲಿ ಹಸುಕರುಗಳನು ನಾ ಕಂಡೆ,
ನಡೆದದ್ದು ನಿಜವೆಂದು ಪದ್ಯ ಬರೆದೆ.
ನನ್ನ ಜೊತೆಗೂ ಬರುವ ಬೀದಿ ಮಕ್ಕಳ ಕಂಡೆ,
ಅವು ನಕ್ಕ ನಗೆ ದೇವರೆಂದುಕೊಂಡೆ;
ಹಸೆಯ ಮೇಲಿನ ಹೊಸತು ಜೋಡಿಯನು ನಾ ಕಂಡೆ,
ಇವರ ದೇವರು ಒಲವು ಎಂದುಕೊಂಡೆ!
- ಕೆ ಎಸ್ ನರಸಿಂಹಸ್ವಾಮಿಯವರು.
ನಿನಗಾಗಿ ನಾನು ಏಳು ಸಾಗರಗಳನ್ನ
ದಾಟಿಬಂದರು ಅಚ್ಚರಿಯಿಲ್ಲ!
ನಿನ್ನೊಳಗೆ ನನಗಾಗಿ
ಏಳು ಮಲ್ಲಿಗೆ ತೂಕದ ಪ್ರೀತಿಯಿದೆಯೆ?
ಎಷ್ಟೋ ನಿದ್ದೆ ಬಾರದ ರಾತ್ರಿಗಳನ್ನ
ನಿನ್ನ ಗುಂಗಿನಲ್ಲೆ ಕಳೆದಿದ್ದಿದೆ!
ಒಮ್ಮೆಯಾದರು ನೀನು
ಮಗ್ಗಲುಬದಲಿಸುವಾಗ ನನ್ನ ನೆನೆದಿದ್ದಿದೆಯ?
ನನಗಿಲ್ಲಿ ನಿನ್ನ ನೆನಪುಗಳೇ
ನನ್ನ ಬೆಳಕಾಗಿರುವಾಗ!
ನೀನು ನನ್ನೊಳಗೆ ಬಂದು
ಒಮ್ಮೆಯಾದರು ಕಚಕುಳಿ ಇಟ್ಟಿದ್ದಿದೆಯ?
ನಾನು ಬರೆದ ಕವಿತೆಗಳ
ಪ್ರತಿಸಾಲಿನಲ್ಲಿ ನಾನು ನಿನ್ನ
ಮುದ್ದು ಹೆಸರಪ್ರೀತಿಯಿ೦ದ ಬರೆದಿದ್ದಿದೆ!
ಅಷ್ಟು ಚಂದ ಹಾಡುವ
ನೀನುಒಮ್ಮೆಯಾದರು ನನಗೆ ಲಾಲಿ ಹಾಡಿದ್ದಿದೆಯ?
ಸಾಕು ಸಾಕಿನ್ನು
ನಿನ್ನ ನೆನಪೊಳಗೆ
ನನ್ನ ಮರೆಯುವುದನಾನು ನಾನಾಗಬೇಕಿದೆ
ನೀನಿಲ್ಲದೆಆದರೆ ನಾ ಇಡುವ
ಪ್ರತಿಹೆಜ್ಜೆಹೆಜ್ಜೆಯಲ್ಲಿಯೂನಾ
ನಿನ್ನ ನೆನೆಯದಿದ್ದರೆ ನನ್ನಾಣೆ…..
Nanna Gelathi
ಮೆಲ್ಲಮೆಲ್ಲನೆ ಬೀಸುವ ತಂಗಾಳಿ
ನನ್ನ ಗೆಳತಿಯ ಬಳಿಯಲೊಮ್ಮೆ
ಸುಳಿದು ನೋಡುಅವಳಿಂದ
ನೀನು ಮತ್ತಷ್ಟು ತಂಪಾದರು ಆಶ್ಚರ್ಯವಿಲ್ಲ !
ಭುವಿಯ ಸವಿಯ ಹೆಚ್ಚಿಸುವ
ಮುದ್ದು ಮುದ್ದುಹೂವುಗಳೇ,
ಒಂದೇ ಒಂದು ಸಲ ಇವಳನೆನಪು ಮಾಡಿಕೊಳ್ಳಿ,
ಮಲಿನಗೊಂಡ ಮನಗಳಿಗೆಮತ್ತಷ್ಟು
ಮುದ ನೀಡುವ ಸೌಂದರ್ಯ ನಿಮ್ಮದಾಗಬಹುದು !
ಬದುಕಿನ ಆಸೆಯನ್ನ
ಹೊರಹೊಮ್ಮಿಸುವಸುಂದರ
ಕವನಗಳೆ ಒಂದೇ ಒಂದು ಸಾರಿಇವಳ
ಮೃದು ಹೃದಯದೊಳಿಳಿದು ಬನ್ನಿ,
ಈ ಮಾಯಗಾತಿಯ ಮೈ ಸ್ಪರ್ಶದಿಂದಲಾದರು
ನಿಮ್ಮ ಸಾಲುಗಳು ಇನ್ನೂ ಶ್ರೀಮಂತವಾದಾವು !
ರಾತ್ರಿ ಮಿನುಗುವ
ಚಂದಮಾಮನೇಯಾಕಿಷ್ಟು ಕೆಂಪಾಗಿದ್ದಿ
ತಂಪಾಗಿದ್ದಿ ?ಗೊತ್ತಾಯಿತು ಬಿಡು…
ಇವಳು ನಿನ್ನ ಕನಸಲ್ಲಿ ಬಂದಿರಬೇಕು !
ನಕ್ಷತ್ರಗಳೇ ನಿಮಗೆ ಏನು
ಅನ್ನಿಸುವುದಿಲ್ಲವೆ?ಈ ಮಲ್ಲಿಗೆಯ
ಮಗಳಿಂದ ಅದೆಷ್ಟು ದೂರವಿದ್ದೀರಿ !
ಸುಮ್ಮನಿಳಿದು ಬಂದಿವಳ ಜೊತೆ
ಜೊತೆಯಾಗಿಆಟವಾಡಿಕೊಂಡಿರಬಾರದೇನು !
ಇವಳೇನು ದೂರದವಳ?ನಿಮ್ಮ ಚಂದಮಾಮನ ತಂಗಿಯಲ್ಲವೇನು !
ಕವಿತೆ ಹುಟ್ಟುತಿಲ್ಲ......
ಎದೆಯೊಳಗೆ ನೂರಾರು
ಕವಿತೆಅದೆಷ್ಟೋ ಸಾಲುಗಳು,
ಅದೆಷ್ಟೊಮೊಗೆದಷ್ಟು
ಭಾವನೆಗಳು, ಬೇಡಿದಷ್ಟು ಕನಸು !
ತುಂಬಿಕೊಂಡು ಬರೆಯಲು ಕುಳಿತರೂ,
ಒಂದು ಕವಿತೆ ಹುಟ್ಟುತ್ತಿಲ್ಲವೆಂದು ಬಿಕ್ಕಳಿಸುತ್ತೇನೆ !!!
ಕನಸಿನಲ್ಲೂ ಹಾಗೆ
ಅದೆಷ್ಟೋಸಾಗರದಷ್ಟು ಪದಗಳು
ಬಂದುನನ್ನೊಡನೆ ಕಧನಕ್ಕಿಳಿಯುತ್ತವೆ !
ಒಂದೊಂದು ಪದಗಳಿಗು ಮುದ್ದು ಮಾಡಿ
ತಲೆ ನೇವರಿಸಿ ಬಂದು ಬರೆಯಲು ಕುಳಿತರೂ
ಬರೆಯಲಾಗದೆ ಮತ್ತೆ ಬಿಕ್ಕಳಿಸುತ್ತೇನೆ !!!
ಬೆರಳ ತುದಿಯಲ್ಲೇ
ಶಭ್ಧಗಳ ಬಂಡಾರಸುಮ್ಮನೆ ಬಂದು
ಹೆಗಲೇರಿ ಕಚಕುಳಿಯಿಡುತ್ತವೆ
ಒಂದೊಂದು ಪದಗಳೂ,
ನಲ್ಲನ ನಲ್ಲೆಯ ಹಾಗೆ ಸುಂದರಬೆರಳ ತುದಿಯಲ್ಲಿದ್ದರೆ ಸಾಕೆ?
ಮನದೊಳಗೆ ಚಿತ್ತಾರ ಮಾಡಬೇಡವೆ?
ಚಿತ್ತಾರವಿಲ್ಲದ ಕವಿತೆ ಬರೆದು ನನಗು ಅಭ್ಯಾಸವಿಲ್ಲ !
ಒಂದೆ ಒಂದು ಸಾಲು ಬರೆಯದೆ ನನ್ನಲ್ಲೆ ಬೆತ್ತಲಾಗುತ್ತೇನೆ !!!
ಉಮ್ಮಳಿಸಿ ಬರುವ ದುಃಖವನ್ನ
ತಡೆಹಿಡಿದು ಬೇಡಿದರು ಕೇಳುತ್ತಿಲ್ಲಪದಗಳು !
ನವವಧುವಿನಂತೆ ಶೃಂಗರಿಸಿ
ಬರೆಯುತ್ತೇನೆಂದರು ಕೇಳುತ್ತಿಲ್ಲ ಪದಗಳು !
ನಮ್ಮನಮ್ಮೊಳಗೇ ವಿರಾಮವಿಲ್ಲದ
ಕದನಸುಮ್ಮನ ಹಠ ! ಬರೆಯಲಾಗುತ್ತಿಲ್ಲ ಕವನ!!!
ಕವಿತೆಗಳೇ ಹಾಗೆ,
ಎಷ್ಟು ಗೋಗರೆದರುಬೇಡಿಕೊಂಡರು,
ಯಾರ ಮಾತು ಕೇಳುವುದಿಲ್ಲ
ಪ್ರೀತಿಯಿಲ್ಲದೆ ಕರೆದರೆ ಹೇಗಾದರು ಬಂದೀತೆ
ಕವಿತೆಪ್ರೀತಿ ಇಲ್ಲದೆ ಬರೆದರೆ ಅದು ಆದೀತೆ ಕವಿತೆ !!!
ಗೆಳತಿಯ ಗುಟ್ಟು..............
ಹತ್ತಾರು ಕವಿತೆಯಲ್ಲಿರದ
ಶಕ್ತಿನಿನ್ನ ಕಣ್ಣಾಲೆಗಳಲ್ಲಿದೆಯಲ್ಲ
ಗೆಳತಿಅದರ ಗುಟ್ಟೇನು..!!
ನೂರಾರು ನೋವುಗಳು
ನಿನ್ನ ನಗುವ ಮಾಯೆಯಲ್ಲಿ
ಮಾಯವಾಗುವುದರ ಗುಟ್ಟೇನು ಗೆಳತಿ..!!
ಯಾರೊ ಬರೆದ
ಪ್ರೀತಿಯಕವಿತೆಯೊಳಗೂ ನಿನ್ನ ಛಾಯೆ !
ಯಾರೋ ಹಾಡಿದ
ಹಾಡಿನೊಳಗೂನಿನ್ನದೇ ಪ್ರೀತಿಯ ಮಾಯೆ
ಮಾಯೆನಿನ್ನ ಕುರಿತು ಬರೆದ
ಪ್ರತಿ ಪದಗಳೂಬಂಗಾರವಾಗುವುದರ ಗುಟ್ಟೇನು ಗೆಳತಿ..!!
ನೀನಾಡುವ ಪ್ರತಿ
ಮಾತುಗಳುನೊಂದ ಹೃದಯಕ್ಕೆ
ಮಲ್ಲಿಗೆಯಾಗುವುದರ ಗುಟ್ಟು ?
ನೀ ನೋಡುವ ಪ್ರತಿ ಹೂವುಗಳೂ
ಗುಲಾಭಿಯಾಗುವುದರ ಗುಟ್ಟೇನು ಗೆಳತಿ..!!
ಮನ ಮರುಗಿದಾಗಲೆಲ್ಲ
ನನ್ನ ಮನ ನಿನ್ನ
ಹೆಗಲ ಬೇಡುವುದರ ಗುಟ್ಟೆನು?
ಕೂಡಿ ಬೆಳೆಯಲಿಲ್ಲ,ಕೂಡಿ ಬೆರೆಯಲಿಲ್ಲ
ಆದರೂ ಅರೆಕ್ಷಣ ನಿನ್ನಗಲಿರಲಾರದ
ಮಧುರ ನೋವಿನ ಗುಟ್ಟಾದರೂ ಏನು ಗೆಳತಿ..!!
ನಟ್ಟ ನಡುರಾತ್ರಿ
ಬೆಚ್ಚಿ ಬೀಳಿಸುವ
ಕನಸುಗಳಿಗೆ ನಿನ್ನ ನೆನಪು ಮಾಡಿದೆ !
ಕನಸುಗಳೇನೊ ಮತ್ತೆ ಮತ್ತೆನನ್ನೆದೆಗೆ ಜಾರುತ್ತಿವೆ..!
ಆದರೆ ಬೆಚ್ಚಿ ಬೀಳಿಸುತ್ತಿಲ್ಲಮನದೊಳಗೆ
ಚಿತ್ತಾರ ಬಿಡಿಸುತ್ತಿರುವುದರ ಗುಟ್ಟೇನು ಗೆಳತಿ..!!
ನಲ್ಲೆ, ನಿನ್ನ ಮರೆಯಲು... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.
------------------------------------------------------------------
ನಲ್ಲೆ, ನಿನ್ನ ಮರೆಯಲು ಏನೆಲ್ಲ ಮಾಡಿದೆ
ಆದರೆ ಎಲ್ಲೆಲ್ಲೂ ನಿನ್ನ ನೆನಪೇ ಕಾಡಿದೆ
ಅರಳಿ ನಿಂತ ಮಲ್ಲಿಗೆಯಲಿ ನಿನ್ನದೆ ನಗೆ
ಹೂವಿನ ಮಕರಂದ ನಿನ್ನ ತುಟಿಯದೇ ಬಗೆ
ಸುಳಿದು ಬಂದ ಗಾಳಿಯಲ್ಲಿ ನಿನ್ನ ಪರಿಮಳ
ಮಾಮರದಲಿ ನಿನ್ನದೇ ಗಾನ ಮಂಜುಳ
ಮರಗಳು ಮೈತುಂಬ ನಮ್ಮ ಹೆಸರು ತೊಟ್ಟಿವೆ
ಪೊದೆಪೊದೆಗಳ ಮರೆಗಳಲ್ಲೂ ನಮ್ಮ ಗುಟ್ಟಿವೆ
ಬಳ್ಳಿ ಬಳ್ಳಿ ಗೆಳತಿ ಎಲ್ಲಿ ಎಂದು ಕೇಲಿವೆ
ದುಃಖದ ಮಡು ಮಾತಿಲ್ಲದೆ ಮೌನ ತಾಳೀದೆ.
- ಬಿ ಆರ್ ಲಕ್ಷ್ಮಣರಾವ್.
ಮರು ವಸಂತ.... ಕವನ ಸಂಕಲನ - ಸುಬ್ಬಾ ಭಟ್ಟರ ಮಗಳೇ.
-----------------------------------------------------------
ಬಂದಂತೆ ಮರು ವಸಂತ
ನೀ ಬಂದೆ ಬಾಳಿಗೆ
ಅನುರಾಗ, ಆಮೋದ
ಎದೆಯಲ್ಲಿ ತುಂಬಿದೆ
ಕೈ ಸೋಕಿ, ನಿನ್ನ ಬಿಸಿ ತಾಕಿ,
ಚಿಮ್ಮಿದೆ ಹೊಸ ಚಿಗುರು;
ನಗೆಯಂತೆ, ನಿನ್ನ ಬಗೆಯಂತೆ
ಅರಳಿದೆ ಹೂವುಗಳು;
ನಿನ್ನ ಪ್ರೀತಿಯ ಪ್ರಖರತೆಗೆ
ಮಾಗಿಯ ಮಂಜು ತೆರೆ
ಕರಗಿ, ಸೊರಗಿ, ಮರೆಯಾಗಲು
ಜಗವೇ ಝಗಝಗಿಸಿದೆ.
ಕಂದಿದ್ದ ಕಣ್ಣಿಗೆ ಹೊಸ ಹೊಳಪು
ನೀ ತಂದೆ ಹೊಸ ನೋಟವ,
ಎಂದೆಂದೂ ಜೋಡಿ ನಾನೆಂದು
ನೀಡಿದೆ ಒಡನಾಟವ;
ನಿನ್ನ ಒಲವೆಂಬ ಸಂಜೀವಿನಿ
ಹೊಸ ಶಕ್ತಿ ತೋಳಿಗೆ,
ಧೃತಿಯ ತಂದಿಹುದು ಹೆಜ್ಜೆಗೆ,
ಭರವಸೆಯ ಬದುಕಿಗೆ.
- ಬಿ ಆರ್ ಲಕ್ಷ್ಮಣರಾವ್.
ಈ ಕಂಗಳು....ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.
------------------------------------------------------
ಈ ಕಂಗಳೇನೋ ನನ್ನವು
ನೋಟ ನಿನ್ನದು
ಈ ನೆಲವ ಹಸಿರು ಹೊಲವ ಗೈದ
ಮಾಟ ನಿನ್ನದು
ನಿನ್ನ ಕನಸುಗಣ್ಣಿನಲ್ಲಿ
ನನ್ನ ಕನಸಿದೆ
ನನ್ನ ಮನದ ದೇಗುಲದಲಿ
ನಿನ್ನ ಮನಸಿದೆ
ನನ್ನ ಹೆಜ್ಜೆ, ನಿನ್ನ ಹಾದಿ
ಪ್ರೇಮದೂರಿಗೆ
ನಿಂತ ಕಡೆಯೆ ನಮ್ಮ ತಾಣ
ಗಗನ ಸೂರಿಗೆ
ಎಲ್ಲ ಬಂಧ ಬಿಡಿಸಿ, ನೀನು
ನನ್ನ ಬಂಧಿಸಿದೆ
ಈಗ ನನಗಿದೊಂದೇ ಸಾಕು
ನಿನ್ನ ಪ್ರೇಮಸುಧೆ..
- ಬಿ ಆರ್ ಲಕ್ಷ್ಮಣರಾವ್.
ಒಡೆಯದ ಒಡಪೇ...ಕವನ ಸಂಕಲನ - ಸುಬ್ಭಾಭಟ್ಟರ ಮಗಳೇ.
----------------------------------------------------------
ಒಡೆಯದ ಒಡಪೇ, ಒಲವಿನ ಮುಡಿಪೇ
ಸನಿಹಕೆ ಸೆಳೆದವಳೇ
ಕಾಡುವ ಕನಸೇ, ಕನ್ನಡಿ ತಿನಿಸೇ
ದೂರವೇ ಉಳಿದವಳೇ
ಬಾರೇ ಬಾ ಬಳಿಗೆ
ಇಂದೇ ಈ ಗಳಿಗೆ
ಮಾಯಾಜಿಂಕೆಯ ನಡೆಯವಳೇ
ಬೆಡಗಿನ ನಿಗೂಢ ನುಡಿಯವಳೇ
ನೋಟದ ತುಂಬ ನಿನ್ನದೇ ಬಿಂಬ
ನನ್ನೀ ಕಂಗಳಗೆ
ಕಿನ್ನರ ಲೋಕದ ಕನ್ನಿಕೆಯೇ
ನಿಜವನು ಮರೆಸುವ ಜವನಿಕೆಯೇ
ಕವಿದರೂ ಇರುಳ, ನೀ ಬಳಿ ಇರಲು
ಉಜ್ವಲ ದೀವಳಿಗೆ
ಕಲ್ಪಯಲ್ಲೇ ಎಷ್ಟು ದಿನ
ಕಾಡುವೆ ಹೀಗೆ ಪ್ರ್ಇಯಕರನ?
ಬಾ ಕನಿಕರಿಸಿ, ನನ್ನನು ವರಿಸಿ
ಬಾಳಿನ ಪಾತಳಿಗೆ.
- ಬಿ ಆರ್ ಲಕ್ಷ್ಮಣರಾವ್
ನನ್ನವಳು... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.
------------------------------------------------------
ನಾನಿಂದು ಕಂಡೆ ಆ ಹೆಣ್ಣನು
ನಾ ಕಂಡುಕೊಂಡೆ ನನ್ನವಳನು
ಆ ಬೊಗಸೆ ಕಣ್ಣುಗಳನ್ನು ಏನೆನ್ನಲಿ ?
ಜೋಡಿ ನಂದಾದೀಪ ದೇಗುಲದಲಿ
ಹಣೆಯಲ್ಲಿ ಕುಂಕುಮಬೊಟ್ಟು ಉದಯರವಿಯು
ಮೂಗಲ್ಲಿ ಮುತ್ತಿನ ನತ್ತು ಚಂದ್ರಾಮನು
ನಕ್ಕಾಗ ಕೆನ್ನೆಗಳಲ್ಲಿ ಎಂಥಾ ಗುಳಿ !
ಚುಂಬನದ ಆಸೆಗೆ ಸೆಳೆವ ಸುಂದರ ಸುಳಿ
ಅವಳ ದನಿಯೋ ಮಂಜುಳ ರಾಗಮಾಲಿಕೆ
ಅಂಗಾಂಗದ ಬಣ್ಣನೆಯೇಕೆ ? ಶಿಲಾಬಾಲಿಕೆ
ಅವಳ ಹೃದಯ ವಿಶಾಲ ಕಡಲಿನ ಹಾಗೆ
ಅದರಲ್ಲಿ ಮುಳುಗಿದೆ ನಾನು ನಿಧಿ ಶೋಧಕೆ
ಹವಳವೆ? ಮುತ್ತೆ? ಅಲ್ಲಿ, ತಳದಲೇನಿದೆ ?
ಅಲ್ಲುಂಟು ಭಾಗ್ಯಶಾಲಿಗೆ ಪ್ರೀತಿಯ ಸುಧೆ.
- ಬಿ ಆರ್ ಲಕ್ಷ್ಮಣರಾವ್.
ಹದಿಹರೆಯದ ಹಾಡು.... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ
----------------------------------------------------------------
ಈ ಬೀದಿಯಲ್ಲಿ ನಾ ಓಡಾಡಿದ್ದೆ
ಬೇಕಾದಷ್ಟು ಸಲ
ಈ ನಗರದ ಎಲ್ಲಾ ಬೀದಿಗಳಂತೆ
ಧೂಳು, ಹೊಗೆ, ಗದ್ದಲ
ನಲ್ಲೆ, ನಿನ್ನ ಮನೆ
ಇಲ್ಲೇ ಇರುವುದು ತಿಳಿದೊಡನೆ
ಎಂಥಾ ಚೆಲುವು ಬಂತು ಬೀದಿಗೆ!
ಎಂಥಾ ಪರಿಮಳ!
ಧೂಳು ಈಗ ಧೂಳಲ್ಲ, ನನಗದೇ
ಪುಷ್ಪ ಪರಾಗ ರೇಣು
ಕಿವಿ ಗಡಚಿಕ್ಕುವ ಹಾರನ್ನುಗಳೇ
ಈಗ ಇಂಪಾದ ವೇಣು
ಬಸ್ಸು ಲಾರಿಯ ಹೊಗೆ
ಆಗರು ಧೂಪ ನನಗೆ
ನೀನಿರುವೆಡೆಯೇ ನನಗೆ ನಂದನ
ನೀನೇ ಕಾಮಧೇನು
ನೀನ್ನ ಮನೆಯೆ ದೇವಾಲಯ, ದೇವಿ
ನಾನು ನಿನ್ನ ಭಕ್ತ
ಯಾರೇ ನಕ್ಕರೂ ಕೇರು ಮಾಡದೆ
ನಿಂತಿರುವೆನು ಅನುರಕ್ತ
ನಿನ್ನ ಮನೆಯ ಮುಂದೆ
ನೆಟ್ಟ ಗರುಡಗಂಬದಂತೆ
ನಲ್ಲೆ, ನಿನ್ನ ದರ್ಶನಕ್ಕಾಗಿ
ನಾ ಹಂಬಲಿಸುತ್ತ
ಕರುಣಿಸಿ ನಿನ್ನ ಭಕ್ತನ ಮೇಲೆ
ಬಾರೇ ನೀ ಹೊರಗೆ
ಕಿಟಕಿಯನ್ನು ತೆರೆದಾದರೂ ಒಮ್ಮೆ
ನೋಡೇ ಈ ಕಡೆಗೆ
ಪ್ರೀತಿಯ ಒಂದು ನಗೆ
ಸಿಕ್ಕರೆ,ಅದೇ ಸಾಕು ನನಗೆ
ಬದುಕಿ ಉಳಿಯುವೆನು ಭರವಸೆಯಲ್ಲಿ
ನಾನು ನಾಳೆವರೆಗೆ.
- ಬಿ ಆರ್ ಲಕ್ಷ್ಮಣರಾವ್.
ಅಮ್ಮ....... ಕವನ ಸಂಕಲನ - ಸುಬ್ಬಾಭಟ್ಟರ ಮಗಳೇ.
------------------------------------------------------
ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೋಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ
ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಆಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಆಗಾಧ ಗಗನ
ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ
-ಬಿ ಆರ್ ಲಕ್ಷ್ಮಣರಾವ್
ಕನಸು..... ಕವನ ಸಂಕಲನ- ಸುಬ್ಬಾಭಟ್ಟರ ಮಗಳೇ.
-----------------------------------------------------
ಏಕೆ ಬಂದೆ ನೀ ನಟ್ಟಿರುಳು
ಕನಸಿನ ಕದ ತೆರೆದು ?
ಏಕೆ ನಿಂತೆ ನೀ ಒಲಿದಂತೆ
ಬಿಗುಮಾನವ ತೊರೆದು ?
ನಗುವೆಯೇಕೆ ಹೊಸ ಹಗಲಂತೆ
ಹೊಂಬೆಳಕನು ಸೂಸಿ ?
ಕರೆವೆಯೇಕೆ ಹಾದಿಯ ತುಂಬ
ಹೂಗಳ ನೀ ಹಾಸಿ ?
ಕೈಗಳಲ್ಲಿ ನೀ ಹಿಡಿದಿರುವೆ
ಒಲವಿನ ಹೂಮಾಲೆ
ಕಂಗಳು ತಿಳಿಸಿವೆ ಇಂಗಿತವ:
"ನಿನ್ನವಳೀ ಬಾಲೆ"
ನಾ ಬಲ್ಲೆನು ಇದು ಕನಸೆಂದು
ಆದರೂ ನಾ ಬರುವೆ
ನೀ ಕರೆದರೆ ನಾ ಬರದಿರಲು
ಸಾಧ್ಯವೇ, ಓ ಚೆಲುವೆ ?
-ಬಿ ಆರ್ ಲಕ್ಷ್ಮಣರಾವ್.
ಹೃದಯ ಮೋಹಿನಿಗೆ....ಕವನ ಸಂಕಲನ - ದೀಪದ ಮಲ್ಲಿ.
----------------------------------------------------
ನಿದ್ದೆಯ ಬೇಲಿಯ ಕನಸಿನ ಬನದಲಿ
ಆಡುವ ಹೆಣ್ಣೆ, ನೀನಾರು ?
ಕಾಮನ ಬಿಲ್ಲಿನ ಸೀರೆಯ ಹೆಣ್ಣೆ,
ಜಡೆಯಲಿ ತಾರೆಯ ಮುಡಿದಿಹ ಹೆಣ್ಣೆ,
ಮಿಂಚುವ ಕಂಗಳ ಸಂಚಿನ ಹೆಣ್ಣೆ,
ಬಿಂಕದ ಹೆಣ್ಣೆ, ನೀನಾರು ?
ಎತ್ತಿದ ಮುಖವೊ ಚೆಲುವಿನ ಗೋಪುರ ;
ಕಂಗಳೊ ಕಳಸದ ಜೊತೆದೀಪ,
ಕೊರಳೊ ಕೇಳದ ದನಿಯ ವಿಮಾನ -
ಹೃದಯದ ಮರುಳೆ, ನೀನಾರು ?
ವಸಂತ ಹಸೆಮಣೆ ನಿನ್ನ ಹಣೆ;
ನಡುವೆ ಕುಂಕುಮದ ಚಿತ್ರಲತೆ -
ಕರೆದರೆ ನಿಲ್ಲದೆ ತಿರುಗಿ ನೋಡದೆ
ತೆರಳುವ ಹೆಣ್ಣೆ, ನೀನಾರು ?
ಕನಸಿನ ಬನದಲಿ ಕಮಲಾಕರದಲಿ
ಕನಕ ವೀಣೆಯನು ದನಿಮಾಡಿ,
ನನ್ನ ನೆರಳಿಗೇ ಯೋಜನ ಹಾರುವ
ಒಲಿಯದ ಹೆಣ್ಣೆ, ನೀನಾರು ?
ಕೆನ್ನೆಯ ಬಾನಲಿ ಮುತ್ತಿನ ಚಂದಿರ
ಮೂಡದ ಹೆಣ್ಣೆ, ನೀನಾರು ?
ಪ್ರೇಮಪದಪದುಮ ಸೋಂಕದ ಮಂದಿರ
ಮಾಯಾಮೋಹಿನಿ, ನೀನಾರು ?
- ಕೆ ಎಸ್ ಸರಸಿಂಹಸ್ವಾಮಿಯವರು
ಎಲ್ಲ ಮಲಗಿರುವಾಗ..... ಕವನ ಸಂಕಲನ - ನವಿಲ ದನಿ.
-------------------------------------------------------
ಎಲ್ಲ ಮಲಗಿರುವಾಗ ಎಚ್ಚರಾಯಿತು ನನಗೆ,
ಕಣ್ತುಂಬ ಹೊಂಗನಸು ಬೆಳಗಿನಲ್ಲಿ;
ಎಲೆ ಮರೆಯ ಹಕ್ಕಿ ಹಾಡಿತ್ತು, ಹನಿಗಳು ಬಿದ್ದು
ಹೂವ ಹೊಳೆ ಹರಿದಿತ್ತು ಕಾಡಿನಲ್ಲಿ.
ಬೆಳಗಾಗ ಬಿರಿದ ಮೊಗ್ಗುಗಳು ಸಂಜೆಗೆ ಬಾಡಿ
ಸತ್ತ ಹೂಗಳ ರಾಶಿ ಲತೆಯ ಕೆಳಗೆ;
ತೆರೆದ ಪುಸ್ತಕದಂತೆ ಬದುಕು, ಮಳೆಬಿಲ್ಲಿನಲಿ
ನಾ ಕಂಡೆ ಹರುಷವನು ಮುಗಿಲ ಕೆಳಗೆ.
ಕೇಂದ್ರಬಿಂದುವಿಗೆ ಹತ್ತಿರವೊ ದೂರವೊ ಕಾಣೆ,
ಬೀಸುತ್ತಲೇ ಇತ್ತು ಮಂದಪವನ;
ಕಿಟಕಿಯನು ಮುಚ್ಚುದರೆ ತೆರೆದಿತ್ತು ಬಾಗಿಲು,
ಬಲು ಸೂಕ್ಷ್ಮ ಜೀವನದ ಚಲನವಲನ!
ಹಾಡಿನೀಚೆಗೆ ನೋವು ಕಾಡುತ್ತಲೆ ಇತ್ತು
ಬಾಯಿ ಮುಚ್ಚಿತ್ತೆನಗೆ, ಕಣ್ಣ ತೆರೆದೆ;
ಗೋಧೂಳಿಯಲ್ಲಿ ಹಸುಕರುಗಳನು ನಾ ಕಂಡೆ,
ನಡೆದದ್ದು ನಿಜವೆಂದು ಪದ್ಯ ಬರೆದೆ.
ನನ್ನ ಜೊತೆಗೂ ಬರುವ ಬೀದಿ ಮಕ್ಕಳ ಕಂಡೆ,
ಅವು ನಕ್ಕ ನಗೆ ದೇವರೆಂದುಕೊಂಡೆ;
ಹಸೆಯ ಮೇಲಿನ ಹೊಸತು ಜೋಡಿಯನು ನಾ ಕಂಡೆ,
ಇವರ ದೇವರು ಒಲವು ಎಂದುಕೊಂಡೆ!
- ಕೆ ಎಸ್ ನರಸಿಂಹಸ್ವಾಮಿಯವರು.
Thursday, December 20, 2007
ಪ್ರೀತಿ - ಜಾತಿ
ಗುರು ಇಲ್ಲದೇ ಹೃದಯ ಕಲಿಸುವ
ಪಾಠ ಈ ಪ್ರೀತಿ....
ಕಾರಣವಿಲ್ಲದೇ ಅಡ್ಡ ಬರುವುದು
ಈ ಜಾತಿ........
ತಾವರೆಯ ಏಸಲು
ನನ್ನವಾಲ ಕಣ್ಣುಗಳು
ತಾವರೆಯ ಏಸಲು
ಕಣ್ಣು ತೆರೆಸಲು
ಬೀಳಬೇಕು ಬಿಸಿಲು!!!!!
ಲವಂಗ
ತುಟಿ ತೊಂದೆ
ಮೂಗು ಸಂಪಿಗೆ
ಕಣ್ಣು ಮಾತ್ರ ಲವಂಗ..
ಏಕೆಂದರೆ
ಕಣ್ಣು ಲವ್ ಹುಟ್ಟುವ ಅಂಗ.........
ನಿನದೆ ನೆನಪು.....
ನಿನ್ನುಸಿರು
ಬೆರೆತಿದೆ ಏನೋ
e ಹೂವಿಗೆ
ಪರಿಮಳ ಬೀರಿದಾಗಲೆಲ್ಲ
ನಿನದೆ ನೆನಪು.............
ಕನ್ನಡಿ ಕನ್ನಡಿ
ಪಂಚಟಾರಾ
ಹೊಟೆಲ್ಲುಗಳಲ್ಲಿ
ಎಲ್ಲಿ ನೋಡಿದರಲ್ಲಿ
ಕನ್ನಡಿ ಕನ್ನಡಿ
ನನಗೆ ನೆನಪಾಗುವುದು
ಕ್ಷೋರಡಂಗಡಿ.....
Preethi......
ಕತ್ತಲೆಯಲ್ಲಿ ಬೆಳಕಾದರೆ ಈ ಪ್ರೀತಿ...ನೀ ಮೊ೦ಬತ್ತಿಯ ಮೊರೆ ಹೊಗುವೆ ಎಕೆ...?ಸುಮಧುರ ಅನುಭವದ ಮೂಲವಾದರೆ ಈ ಪ್ರೀತಿ...ನೀ ಎನ್ನ ಮನಸಾರೆ ಪ್ರೀತಿಸಲಾರೆ ಎಕೆ...?ಹುಚ್ಹು ಮನಸ್ಸಿನ ಹ೦ಬಲದ ಬಲವಾದರೆ ಈ ಪ್ರೀತಿ...ನಾ ಹೀಗೆ ದುರ್ಬಲನಾಗಿ ಅಳುತ್ತಿರುವೆನು ಹೀಗೇಕೆ...?ಸರ್ವ ಕಾಲಕ್ಕು ಪರಮ ಪವಿತ್ರವಾದರೆ ಈ ಪ್ರೀತಿ...ಸ೦ತೆಯಲ್ಲಿ ನೀನದನ್ನು ಮಾರಾಟಕ್ಕೆ ಇಟ್ತಿರುವೆಯಲ್ಲ ಹೀಗೇಕೆ...?ಸಿಹಿ ನಾದದ ಸವಿ ಶ್ರುತಿಗಳ ಸಮ್ಮೇಳವಾದರೆ ಈ ಪ್ರೀತಿ...ರೋದನದ ವೇದನೆಯ ಹಿಮ್ಮೇಳವು ಇದಕ್ಕೇಕೆ...?ನಶ್ವರವಾದ ಈ ಲೋಕದಲ್ಲಿ ಅಮರವಾದರೆ ಈ ಪ್ರೀತಿ...ನೀನದಕ್ಕೆ ಗೋರಿಯನ್ನು ಕಟ್ಟಿರುವುದಾದರು ಎಕೆ...?ನಿಮ್ಮ ಕನಸಿನ ಗೆಳೆಯಾ ವಿಶಾಲ್.....
ಕದ್ದ ಹೃದಯ
ನನ್ನಲ್ಲಿ ಅವಳಿದ್ದಾಳೆ
ಅವಳಲ್ಲಿ ನಾನಿದ್ದೇನೆ
ಆದರೂ,
ಅವಳಲ್ಲಿ ನಾನಿಲ್ಲ
ನನ್ನಲ್ಲಿ ಅವಳಿಲ್ಲ
ಏಕೆಂದರೆ,
ನನ್ನ ಹೃದಯ ಅವಳು ಕದ್ದಿದ್ದಾಳೆ
ಅವಳ ಹೃದಯ ನಾನು ಕದ್ದಿದ್ದೇನೆ.
*
ಕುರೂಪಿ
ಕೇವಲ ಯಾಂತ್ರಿಕವಾಗಿರುವ
ಈ ಜಗತ್ತಿನಲ್ಲಿ ,
ಜನ ಸಾಮಾನ್ಯನ
ಮುಗುಳುನಗೆಯನ್ನೇ
ಕಸಿದುಕೊಂಡಿರುವ
ಈ ಜಗತ್ತಿನಲ್ಲಿ ,
ಕೆಲವರಾದರೂ
ನನ್ನ ಮುಖವನ್ನಾದರೂ ನೋಡಿ
ಮೊದಲ ಬಾರಿ
ಮುಗುಳ್ನಕ್ಕರೆ
ನನಗದೇ ಸಂತೋಷ.
ಆಡುವುದು ಒಂದು...
ಎಲ್ಲರ ಮಾತುಗಳಲ್ಲಿ
ತುಂಬಿರುತ್ತದೆಆಚಾರ
ಮಾಡುವಾಗ ಮಾತ್ರ
ಎಲ್ಲರೂಹಾಕುತ್ತಾರೆ
ಲೆಕ್ಕಾಚಾರ*
ಹೆಣ್ಣಿನಾಸೆಬೇಡ
ನಲ್ಲಬೆಳ್ಳಿ ಬಂಗಾರದ
ಒಡವೆಗಳು ಆದರೆ
ಸಾಕುನಿನ್ನ
ಬೆರಳುಗಳು ನನ್ನ
ಕೈ ಬಳೆಗಳು
*ಹೊಗಳಿಕೆ
ಇದು ತುಂಬಾ
ವಿಚಿತ್ರ ಆದರೂ ಸತ್ಯ
ನೀನು ನಕ್ಕಾಗ ಮಾತ್ರ
ಮಿನುಗುತ್ತದೆನಕ್ಷತ್ರ
*ಸತ್ಯ
ಮನೆಯಲ್ಲಿಸೊಳ್ಳೆ
ಪರದೆಯಿಲ್ಲಅದಕ್ಕೆ
ನಿದ್ರೆಯಾಗಲಿಲ್ಲ
ಎಂಬುದು ಬರಿ ನೆಪ
ರಾತ್ರಿಯೆಲ್ಲಮಾಡುತ್ತಿದ್ದುದು
ನಿನ್ನ ನಾಮದ ಜಪ
*ಬೇಡಿಕೆ
ಗೆಳತಿ ಬರೀ ಕಣ್ಣಿನಿಂದ
ಹೊಡೆಯಬೆಡಗೋಲಿ
ಬಂದಿರು ನನ್ನೆದೆ
ಯಾಳಗೆಹೃದಯವಿದೆ
ಖಾಲಿಹಾಕು ಬಾನನ್ನ
ಮನೆಯಂಗಳದಿ
ರಂಗೋಲಿಆಗು
ಬಾಜೀವನದ
ಇನ್ನೊಂದುಗಾಲಿ
*ಸ್ಥಿತಿ
ನೀ
ಬೇಸಿಗೆಯಲ್ಲಿರದಿದ್ದರೂ
ಆಗುತ್ತದೆ ಚಳಿ
ಎಷ್ಟು ಮಾಡಿದರೂCover
ಉನೀ ಹಾಸಿಗೆಯಲ್ಲಿದ್ದರೆ
ಚಳಿಯಲ್ಲೂಸುರಿಯುತ್ತದೆ
ಬೆವರು
*ಸೆರಗು
ನಲ್ಲೆತಡೆಯಲಾಗುತ್ತಿಲ್ಲ
ಚಳಿಯಎಷ್ಟು ಹೊದ್ದುಕೊಂಡ
ರೂರಗ್ಗುಸೇರಿಕೊಳ್ಳಬೇಕೆನಿಸುತ್ತಿದೆ
ನಿನ್ನ ಸೀರೆಯಸೆರಗು
*ಗಾಯನ
ಕೇಳಿ ಮರುಳಾಗಿದ್ದೆ
ನಿನ್ನ ಗಾಯನ
ಮರೆಯಲಾಗುತ್ತಿಲ್ಲ
ಗಲ್ಲದ ಮೇಲೆಕೊಟ್ಟ
ಗಾಯಾನ
*ರಾಸಲೀಲ
ಕೃಷ್ಣಹದಿನಾರು ಸಾವಿರ
ಕನ್ಯೆಯರ ಜೊತೆ
ಆಡಿ ಕುಣಿದರೆ
ಅದು ರಾಸಲೀಲ
ನಾನು ಇನ್ನೊಬ್ಬಳನ್ನು
ಕಣ್ಣೆತ್ತಿ ನೋಡಿದರೂ
ಹೇಳುತ್ತಾರೆ
ಇವನ ಚರಿತ್ರಸರಿಯಿಲ್ಲ
*ವರದಕ್ಷಿಣೆ
ಹುಡುಗಿಯರೆ
ಎಷ್ಟೇ ಹಾಕಿ ದೇವಸ್ಥಾನದ
ಪ್ರದಕ್ಷಿಣೆ
ಎಷ್ಟೇ ಕೊಡಿ ಪೂಜಾರಿಗೆ ದಕ್ಷಿಣೆ
ಸಿಗುವುದಿಲ್ಲ ಒಳ್ಳೆ ಗಂಡುಇರದಿದ್ದರೆ
ನಿಮ್ಮತಂದೆ ಹತ್ತಿರ
ವರದಕ್ಷಿಣೆ
KANNALLI KANTHI.....
ಬರೆದದೆಷ್ಟು
ವರುಷವಾದವೋಈಗಿರುವುದು
ಬರಿ ಬಯಕೆಯಷ್ಟೇ ...
ಕಣ್ಣಿನಲಿ ಕಾಂತಿ ಇಲ್ಲ ,
ಕಾಂತಿಗೆ ಬೇಕಿರಲು
ಹೃದಯದಲಿ ಪ್ರೀತಿ ಇಲ್ಲ
ಪ್ರೀತಿಗೆ ಬೇಕಿರಲು
ಎದುರಿನಲ್ಲಿ ಅವಳಿಲ್ಲ
ಎಲ್ಲಕ್ಕಿಂಥಳು ಮಿಗಿಲಾಗಿ
ಅವಳೊಳಗೆ ನಾನಿಲ್ಲ
ನನ್ನೊಳಗೆ ಕವಿಯಿಲ್ಲ ....
ಅದರೂ....
ಬಯಕೆ ಬರೆದದೆಷ್ಟು ವರುಷವಾದವೋ
ಈಗಿರುವುದು ಬರಿ ಬಯಕೆಯಷ್ಟೇ .......FRIEND'S10
ಹೀಗೇಕೆ ನೀ ಮಾಡಿದೆ?
-------------------
ಹೀಗೇಕೆ ನೀ ಮಾಡಿದೆ
ಬರುವೆನೆಂದು ಬಾರದೆ
ನನ್ನ ಕಾಯಿಸಿದೆ
ಸೋನೆ ಮಳೆಗೆ ನೆನೆದು
ನಲುಗಿದ್ದೆ
ನೀ ಮಳೆಯಾಗಿ ಬಂದೆಯೆಂದೇ
ನಾ ಭಾವಿಸಿದ್ದೆ.
ಹೀಗೇಕೆ ನೀ ಮಾಡಿದೆ
ನನ್ನ ಕಡೆಗೆ ಬೆನ್ನು ಮಾಡಿ
ನನ್ನ ಪ್ರೀತಿಯ ತೊರೆದೆ
ನನ್ನೆದೆಯ ಮುಟ್ಟಿ, ಭಾವ ತಟ್ಟಿ
ನನ್ನಾಸೆ ಕನಸುಗಳ ಸುಟ್ಟೆ
ಹೀಗೇಕೆ ನೀ ಮಾಡಿದೆ
ಅಂದು ನಾನೇನೂ ಹೇಳದೆ
ನೀನೆ ಎಲ್ಲವ ಅರ್ಥೈಸುತಲಿದ್ದೆ
ಇಂದು ನಾ ಕೂಗುತಲಿದ್ದರೂ
ಕೇಳದೆ ನೀ ಕಿವುಡಳಾದೆ
ಹೀಗೇಕೆ ನೀ ಮಾಡಿದೆ
ಅಂದು ನಾ ಬೇಡವೆಂದರೂ
ನನ್ನಲ್ಲಿ ಒಲವನ್ನು ತಂದೆ
ಇಂದು ನನ್ನೆದೆಯ ಭಾವನೆಗಳ
ಬಡಿದು ಕೊಚ್ಚಿ ಕೊಂದೆ
ಹೀಗೇಕೆ ನೀ ಮಾಡಿದೆ
ಎಂದು ನಾ ಕೇಳುತಲಿದ್ದರೂ
ನೀ ಸುಮ್ಮನೆ ನಡೆದು ಹೋದೆ
ಹೋಗುವುದಾದರೆ ಹೋಗು
ತಿರುಗಿ ನನ್ನೆದೆಗೆ ಬಾರದಿರು
ಈಗ ನಿನ್ನಲ್ಲಿ ಒಲವಿಲ್ಲ, ನನ್ನಲ್ಲಿ
ಭಾವವಿಲ್ಲನೀ ಹೋಗಿಬಿಡು ನನಗೆ ಅಜ್ನಾತವಾಗಿ ಬಿಡು-- ಅರುಣ ಸಿರಿಗೆರೆ
ಒಂದು ಹಾರೈಕೆ...
ಕಾಲ ಚಕ್ರ
ಮತ್ತೊಮ್ಮೆ ಉರುಳಿದೆ ...
ಅನುಭವದ ಗುಚ್ಚಕ್ಕೆ
ಮತ್ತೊಂದು ಹೂವ ಸೇರಿಸಿದೆ...
ಎಷ್ಟೊಂದು ನೆನಪುಗಳ
ಹಿಂದೆ ಸರಿಸಿದೆ...
ಇನ್ನಷ್ಟು ಕನಸುಗಳ
ಬಿತ್ತಲು ಅಣಿಯಾಗಿದೆ...
ಒಂದು ವರುಷದ
ಪಯಣದಲ್ಲಿ ಹಲವರ ಪರಿಚಯಿಸಿದೆ..
ಸ್ವಲ್ಪ ನೋವು-ಸ್ವಲ್ಪ ನಲಿ
ವನ್ನು ತುಂಬಿ ಮನವ ಮುದಗೊಳಿಸಿದೆ..
ನೆಡೆದು ಬಂದ ದಾರಿಯಲ್ಲಿ
ಅಡೆ-ತಡೆಗಳಾಗಿ ಎದುರಾಗಿದೆ...
ತನ್ಮೂಲಕ ಸಾಧನೆಯ ಪಾಠ ಕಲಿಸಿದೆ...
ಜ್ಯೋತೆಗೆಯೇ ಅವಳ
ಬಟ್ಟಲು ಕಣ್ಣುಗಳ ನೆನಪಾಗಿಸಿದೆ...!
ಅವನ ತುಂಟ ನಗುವನ್ನು
ಎದೆಯಾಳದಲ್ಲಿ ಮುದ್ರಿಸಿದೆ...!!.........FRIEND'S 10
ಹೃದಯವೀಣೆ
-------------
ನೀ ಮೀಟಿದಾಗಲೆ ನಾನರಿತದ್ದು
ನನ್ನದೊಂದು ಮಿಡಿವ ಹೃದಯವೆಂದು
ಅದ್ಯಾವ ರಾಗವ ನುಡಿಸಿದೆಯೋ
ನೀನಂದುನನ್ನೆದೆಯ
ಸ್ವರಗಳಿಗೆ ಶೃತಿ ಪಲ್ಲವಿಗಳಾಗಿಹೆ
ನೀನಿಂದುಅದೆಷ್ಟೋ ಕೈಗಳು
ನುಡಿಸಲೆತ್ನಿಸಿದ ಹೃದಯವೀಣೆಯಿದು
ಯಾವ ಕೈಗಳೂ ನುಡಿಸಲಿಲ್ಲ ನೀ
ನುಡಿಸಿದ ರಾಗವನೆಂದೂನೀ ಮೀಟಿದ
ತಂತಿಗಳು ಕಂಪಿಸಿರಲು ಇಂಪಿನಲಿನಾ
ಕಳೆದು ಹೋಗಿಹೆ ನಿನ್ನ ರಾಗಗಳದೇ ಗುಂಗಿನಲಿ
ನನಗೀಗ ಬೇರೆ ರಾಗಗಳ ಅರಿವೇ ಇಲ್ಲ
ನೀ ಮೂಡಿಸುವ ರಾಗಗಳ
ಪರಿವೇ ಎಲ್ಲನುಡಿಸುತಿರು
ರಾಗಗಳ ನೀ ಹೀಗೆ ಎಡೆಬಿಡದೆ
ಚುಂಬಿಸಲಿ ಅವು ನನ್ನೆದೆಯ
ಹಾಗೆಯೆ ಕ್ಷಣ ಬಿಡದೆ
ನೀ ನುಡಿಸುವ ರಾಗವದಾವುದೇ
ಆಗಿರಲಿನನ್ನೆದೆಯ ತಂತಿಗಳು ಹರಿಯದೆ ಉಳಿದಿರಲಿ- - ಅರುಣ ಸಿರಿಗೆರೆ
ಗುರು ಇಲ್ಲದೇ ಹೃದಯ ಕಲಿಸುವ
ಪಾಠ ಈ ಪ್ರೀತಿ....
ಕಾರಣವಿಲ್ಲದೇ ಅಡ್ಡ ಬರುವುದು
ಈ ಜಾತಿ........
ತಾವರೆಯ ಏಸಲು
ನನ್ನವಾಲ ಕಣ್ಣುಗಳು
ತಾವರೆಯ ಏಸಲು
ಕಣ್ಣು ತೆರೆಸಲು
ಬೀಳಬೇಕು ಬಿಸಿಲು!!!!!
ಲವಂಗ
ತುಟಿ ತೊಂದೆ
ಮೂಗು ಸಂಪಿಗೆ
ಕಣ್ಣು ಮಾತ್ರ ಲವಂಗ..
ಏಕೆಂದರೆ
ಕಣ್ಣು ಲವ್ ಹುಟ್ಟುವ ಅಂಗ.........
ನಿನದೆ ನೆನಪು.....
ನಿನ್ನುಸಿರು
ಬೆರೆತಿದೆ ಏನೋ
e ಹೂವಿಗೆ
ಪರಿಮಳ ಬೀರಿದಾಗಲೆಲ್ಲ
ನಿನದೆ ನೆನಪು.............
ಕನ್ನಡಿ ಕನ್ನಡಿ
ಪಂಚಟಾರಾ
ಹೊಟೆಲ್ಲುಗಳಲ್ಲಿ
ಎಲ್ಲಿ ನೋಡಿದರಲ್ಲಿ
ಕನ್ನಡಿ ಕನ್ನಡಿ
ನನಗೆ ನೆನಪಾಗುವುದು
ಕ್ಷೋರಡಂಗಡಿ.....
Preethi......
ಕತ್ತಲೆಯಲ್ಲಿ ಬೆಳಕಾದರೆ ಈ ಪ್ರೀತಿ...ನೀ ಮೊ೦ಬತ್ತಿಯ ಮೊರೆ ಹೊಗುವೆ ಎಕೆ...?ಸುಮಧುರ ಅನುಭವದ ಮೂಲವಾದರೆ ಈ ಪ್ರೀತಿ...ನೀ ಎನ್ನ ಮನಸಾರೆ ಪ್ರೀತಿಸಲಾರೆ ಎಕೆ...?ಹುಚ್ಹು ಮನಸ್ಸಿನ ಹ೦ಬಲದ ಬಲವಾದರೆ ಈ ಪ್ರೀತಿ...ನಾ ಹೀಗೆ ದುರ್ಬಲನಾಗಿ ಅಳುತ್ತಿರುವೆನು ಹೀಗೇಕೆ...?ಸರ್ವ ಕಾಲಕ್ಕು ಪರಮ ಪವಿತ್ರವಾದರೆ ಈ ಪ್ರೀತಿ...ಸ೦ತೆಯಲ್ಲಿ ನೀನದನ್ನು ಮಾರಾಟಕ್ಕೆ ಇಟ್ತಿರುವೆಯಲ್ಲ ಹೀಗೇಕೆ...?ಸಿಹಿ ನಾದದ ಸವಿ ಶ್ರುತಿಗಳ ಸಮ್ಮೇಳವಾದರೆ ಈ ಪ್ರೀತಿ...ರೋದನದ ವೇದನೆಯ ಹಿಮ್ಮೇಳವು ಇದಕ್ಕೇಕೆ...?ನಶ್ವರವಾದ ಈ ಲೋಕದಲ್ಲಿ ಅಮರವಾದರೆ ಈ ಪ್ರೀತಿ...ನೀನದಕ್ಕೆ ಗೋರಿಯನ್ನು ಕಟ್ಟಿರುವುದಾದರು ಎಕೆ...?ನಿಮ್ಮ ಕನಸಿನ ಗೆಳೆಯಾ ವಿಶಾಲ್.....
ಕದ್ದ ಹೃದಯ
ನನ್ನಲ್ಲಿ ಅವಳಿದ್ದಾಳೆ
ಅವಳಲ್ಲಿ ನಾನಿದ್ದೇನೆ
ಆದರೂ,
ಅವಳಲ್ಲಿ ನಾನಿಲ್ಲ
ನನ್ನಲ್ಲಿ ಅವಳಿಲ್ಲ
ಏಕೆಂದರೆ,
ನನ್ನ ಹೃದಯ ಅವಳು ಕದ್ದಿದ್ದಾಳೆ
ಅವಳ ಹೃದಯ ನಾನು ಕದ್ದಿದ್ದೇನೆ.
*
ಕುರೂಪಿ
ಕೇವಲ ಯಾಂತ್ರಿಕವಾಗಿರುವ
ಈ ಜಗತ್ತಿನಲ್ಲಿ ,
ಜನ ಸಾಮಾನ್ಯನ
ಮುಗುಳುನಗೆಯನ್ನೇ
ಕಸಿದುಕೊಂಡಿರುವ
ಈ ಜಗತ್ತಿನಲ್ಲಿ ,
ಕೆಲವರಾದರೂ
ನನ್ನ ಮುಖವನ್ನಾದರೂ ನೋಡಿ
ಮೊದಲ ಬಾರಿ
ಮುಗುಳ್ನಕ್ಕರೆ
ನನಗದೇ ಸಂತೋಷ.
ಆಡುವುದು ಒಂದು...
ಎಲ್ಲರ ಮಾತುಗಳಲ್ಲಿ
ತುಂಬಿರುತ್ತದೆಆಚಾರ
ಮಾಡುವಾಗ ಮಾತ್ರ
ಎಲ್ಲರೂಹಾಕುತ್ತಾರೆ
ಲೆಕ್ಕಾಚಾರ*
ಹೆಣ್ಣಿನಾಸೆಬೇಡ
ನಲ್ಲಬೆಳ್ಳಿ ಬಂಗಾರದ
ಒಡವೆಗಳು ಆದರೆ
ಸಾಕುನಿನ್ನ
ಬೆರಳುಗಳು ನನ್ನ
ಕೈ ಬಳೆಗಳು
*ಹೊಗಳಿಕೆ
ಇದು ತುಂಬಾ
ವಿಚಿತ್ರ ಆದರೂ ಸತ್ಯ
ನೀನು ನಕ್ಕಾಗ ಮಾತ್ರ
ಮಿನುಗುತ್ತದೆನಕ್ಷತ್ರ
*ಸತ್ಯ
ಮನೆಯಲ್ಲಿಸೊಳ್ಳೆ
ಪರದೆಯಿಲ್ಲಅದಕ್ಕೆ
ನಿದ್ರೆಯಾಗಲಿಲ್ಲ
ಎಂಬುದು ಬರಿ ನೆಪ
ರಾತ್ರಿಯೆಲ್ಲಮಾಡುತ್ತಿದ್ದುದು
ನಿನ್ನ ನಾಮದ ಜಪ
*ಬೇಡಿಕೆ
ಗೆಳತಿ ಬರೀ ಕಣ್ಣಿನಿಂದ
ಹೊಡೆಯಬೆಡಗೋಲಿ
ಬಂದಿರು ನನ್ನೆದೆ
ಯಾಳಗೆಹೃದಯವಿದೆ
ಖಾಲಿಹಾಕು ಬಾನನ್ನ
ಮನೆಯಂಗಳದಿ
ರಂಗೋಲಿಆಗು
ಬಾಜೀವನದ
ಇನ್ನೊಂದುಗಾಲಿ
*ಸ್ಥಿತಿ
ನೀ
ಬೇಸಿಗೆಯಲ್ಲಿರದಿದ್ದರೂ
ಆಗುತ್ತದೆ ಚಳಿ
ಎಷ್ಟು ಮಾಡಿದರೂCover
ಉನೀ ಹಾಸಿಗೆಯಲ್ಲಿದ್ದರೆ
ಚಳಿಯಲ್ಲೂಸುರಿಯುತ್ತದೆ
ಬೆವರು
*ಸೆರಗು
ನಲ್ಲೆತಡೆಯಲಾಗುತ್ತಿಲ್ಲ
ಚಳಿಯಎಷ್ಟು ಹೊದ್ದುಕೊಂಡ
ರೂರಗ್ಗುಸೇರಿಕೊಳ್ಳಬೇಕೆನಿಸುತ್ತಿದೆ
ನಿನ್ನ ಸೀರೆಯಸೆರಗು
*ಗಾಯನ
ಕೇಳಿ ಮರುಳಾಗಿದ್ದೆ
ನಿನ್ನ ಗಾಯನ
ಮರೆಯಲಾಗುತ್ತಿಲ್ಲ
ಗಲ್ಲದ ಮೇಲೆಕೊಟ್ಟ
ಗಾಯಾನ
*ರಾಸಲೀಲ
ಕೃಷ್ಣಹದಿನಾರು ಸಾವಿರ
ಕನ್ಯೆಯರ ಜೊತೆ
ಆಡಿ ಕುಣಿದರೆ
ಅದು ರಾಸಲೀಲ
ನಾನು ಇನ್ನೊಬ್ಬಳನ್ನು
ಕಣ್ಣೆತ್ತಿ ನೋಡಿದರೂ
ಹೇಳುತ್ತಾರೆ
ಇವನ ಚರಿತ್ರಸರಿಯಿಲ್ಲ
*ವರದಕ್ಷಿಣೆ
ಹುಡುಗಿಯರೆ
ಎಷ್ಟೇ ಹಾಕಿ ದೇವಸ್ಥಾನದ
ಪ್ರದಕ್ಷಿಣೆ
ಎಷ್ಟೇ ಕೊಡಿ ಪೂಜಾರಿಗೆ ದಕ್ಷಿಣೆ
ಸಿಗುವುದಿಲ್ಲ ಒಳ್ಳೆ ಗಂಡುಇರದಿದ್ದರೆ
ನಿಮ್ಮತಂದೆ ಹತ್ತಿರ
ವರದಕ್ಷಿಣೆ
KANNALLI KANTHI.....
ಬರೆದದೆಷ್ಟು
ವರುಷವಾದವೋಈಗಿರುವುದು
ಬರಿ ಬಯಕೆಯಷ್ಟೇ ...
ಕಣ್ಣಿನಲಿ ಕಾಂತಿ ಇಲ್ಲ ,
ಕಾಂತಿಗೆ ಬೇಕಿರಲು
ಹೃದಯದಲಿ ಪ್ರೀತಿ ಇಲ್ಲ
ಪ್ರೀತಿಗೆ ಬೇಕಿರಲು
ಎದುರಿನಲ್ಲಿ ಅವಳಿಲ್ಲ
ಎಲ್ಲಕ್ಕಿಂಥಳು ಮಿಗಿಲಾಗಿ
ಅವಳೊಳಗೆ ನಾನಿಲ್ಲ
ನನ್ನೊಳಗೆ ಕವಿಯಿಲ್ಲ ....
ಅದರೂ....
ಬಯಕೆ ಬರೆದದೆಷ್ಟು ವರುಷವಾದವೋ
ಈಗಿರುವುದು ಬರಿ ಬಯಕೆಯಷ್ಟೇ .......FRIEND'S10
ಹೀಗೇಕೆ ನೀ ಮಾಡಿದೆ?
-------------------
ಹೀಗೇಕೆ ನೀ ಮಾಡಿದೆ
ಬರುವೆನೆಂದು ಬಾರದೆ
ನನ್ನ ಕಾಯಿಸಿದೆ
ಸೋನೆ ಮಳೆಗೆ ನೆನೆದು
ನಲುಗಿದ್ದೆ
ನೀ ಮಳೆಯಾಗಿ ಬಂದೆಯೆಂದೇ
ನಾ ಭಾವಿಸಿದ್ದೆ.
ಹೀಗೇಕೆ ನೀ ಮಾಡಿದೆ
ನನ್ನ ಕಡೆಗೆ ಬೆನ್ನು ಮಾಡಿ
ನನ್ನ ಪ್ರೀತಿಯ ತೊರೆದೆ
ನನ್ನೆದೆಯ ಮುಟ್ಟಿ, ಭಾವ ತಟ್ಟಿ
ನನ್ನಾಸೆ ಕನಸುಗಳ ಸುಟ್ಟೆ
ಹೀಗೇಕೆ ನೀ ಮಾಡಿದೆ
ಅಂದು ನಾನೇನೂ ಹೇಳದೆ
ನೀನೆ ಎಲ್ಲವ ಅರ್ಥೈಸುತಲಿದ್ದೆ
ಇಂದು ನಾ ಕೂಗುತಲಿದ್ದರೂ
ಕೇಳದೆ ನೀ ಕಿವುಡಳಾದೆ
ಹೀಗೇಕೆ ನೀ ಮಾಡಿದೆ
ಅಂದು ನಾ ಬೇಡವೆಂದರೂ
ನನ್ನಲ್ಲಿ ಒಲವನ್ನು ತಂದೆ
ಇಂದು ನನ್ನೆದೆಯ ಭಾವನೆಗಳ
ಬಡಿದು ಕೊಚ್ಚಿ ಕೊಂದೆ
ಹೀಗೇಕೆ ನೀ ಮಾಡಿದೆ
ಎಂದು ನಾ ಕೇಳುತಲಿದ್ದರೂ
ನೀ ಸುಮ್ಮನೆ ನಡೆದು ಹೋದೆ
ಹೋಗುವುದಾದರೆ ಹೋಗು
ತಿರುಗಿ ನನ್ನೆದೆಗೆ ಬಾರದಿರು
ಈಗ ನಿನ್ನಲ್ಲಿ ಒಲವಿಲ್ಲ, ನನ್ನಲ್ಲಿ
ಭಾವವಿಲ್ಲನೀ ಹೋಗಿಬಿಡು ನನಗೆ ಅಜ್ನಾತವಾಗಿ ಬಿಡು-- ಅರುಣ ಸಿರಿಗೆರೆ
ಒಂದು ಹಾರೈಕೆ...
ಕಾಲ ಚಕ್ರ
ಮತ್ತೊಮ್ಮೆ ಉರುಳಿದೆ ...
ಅನುಭವದ ಗುಚ್ಚಕ್ಕೆ
ಮತ್ತೊಂದು ಹೂವ ಸೇರಿಸಿದೆ...
ಎಷ್ಟೊಂದು ನೆನಪುಗಳ
ಹಿಂದೆ ಸರಿಸಿದೆ...
ಇನ್ನಷ್ಟು ಕನಸುಗಳ
ಬಿತ್ತಲು ಅಣಿಯಾಗಿದೆ...
ಒಂದು ವರುಷದ
ಪಯಣದಲ್ಲಿ ಹಲವರ ಪರಿಚಯಿಸಿದೆ..
ಸ್ವಲ್ಪ ನೋವು-ಸ್ವಲ್ಪ ನಲಿ
ವನ್ನು ತುಂಬಿ ಮನವ ಮುದಗೊಳಿಸಿದೆ..
ನೆಡೆದು ಬಂದ ದಾರಿಯಲ್ಲಿ
ಅಡೆ-ತಡೆಗಳಾಗಿ ಎದುರಾಗಿದೆ...
ತನ್ಮೂಲಕ ಸಾಧನೆಯ ಪಾಠ ಕಲಿಸಿದೆ...
ಜ್ಯೋತೆಗೆಯೇ ಅವಳ
ಬಟ್ಟಲು ಕಣ್ಣುಗಳ ನೆನಪಾಗಿಸಿದೆ...!
ಅವನ ತುಂಟ ನಗುವನ್ನು
ಎದೆಯಾಳದಲ್ಲಿ ಮುದ್ರಿಸಿದೆ...!!.........FRIEND'S 10
ಹೃದಯವೀಣೆ
-------------
ನೀ ಮೀಟಿದಾಗಲೆ ನಾನರಿತದ್ದು
ನನ್ನದೊಂದು ಮಿಡಿವ ಹೃದಯವೆಂದು
ಅದ್ಯಾವ ರಾಗವ ನುಡಿಸಿದೆಯೋ
ನೀನಂದುನನ್ನೆದೆಯ
ಸ್ವರಗಳಿಗೆ ಶೃತಿ ಪಲ್ಲವಿಗಳಾಗಿಹೆ
ನೀನಿಂದುಅದೆಷ್ಟೋ ಕೈಗಳು
ನುಡಿಸಲೆತ್ನಿಸಿದ ಹೃದಯವೀಣೆಯಿದು
ಯಾವ ಕೈಗಳೂ ನುಡಿಸಲಿಲ್ಲ ನೀ
ನುಡಿಸಿದ ರಾಗವನೆಂದೂನೀ ಮೀಟಿದ
ತಂತಿಗಳು ಕಂಪಿಸಿರಲು ಇಂಪಿನಲಿನಾ
ಕಳೆದು ಹೋಗಿಹೆ ನಿನ್ನ ರಾಗಗಳದೇ ಗುಂಗಿನಲಿ
ನನಗೀಗ ಬೇರೆ ರಾಗಗಳ ಅರಿವೇ ಇಲ್ಲ
ನೀ ಮೂಡಿಸುವ ರಾಗಗಳ
ಪರಿವೇ ಎಲ್ಲನುಡಿಸುತಿರು
ರಾಗಗಳ ನೀ ಹೀಗೆ ಎಡೆಬಿಡದೆ
ಚುಂಬಿಸಲಿ ಅವು ನನ್ನೆದೆಯ
ಹಾಗೆಯೆ ಕ್ಷಣ ಬಿಡದೆ
ನೀ ನುಡಿಸುವ ರಾಗವದಾವುದೇ
ಆಗಿರಲಿನನ್ನೆದೆಯ ತಂತಿಗಳು ಹರಿಯದೆ ಉಳಿದಿರಲಿ- - ಅರುಣ ಸಿರಿಗೆರೆ
Subscribe to:
Posts (Atom)