Tuesday, January 8, 2008

Kelavu geleyaru rachisida cHuTuKuGaLu

ಇವಳ ತ೦ಗಿ
ಅವಳ ಪ್ರೀತಿಸಿದವನಿಗೆ
ತಿಳಿಯಿತು ಅ೦ದು
ಇವಳ ತ೦ಗಿ ಇನ್ನೂ
ಚೆನ್ನಗಿದ್ದಾಳಲ್ಲಾ ಎ೦ದು ... ..... ಬುದ್ದಿಯೇ ಬರಲಿಲ್ಲ
ಹೀಗೆ ಒಂದು ಹುಡುಗ ಹುಡುಗಿ;
ಅವಳೆಂದಳು,
'ನನ್ನ ಅಪ್ಪಿಕೊಬೇಡ'ಆತ ಅಪ್ಪಿಕೊಳಲಿಲ್ಲ,
ಆಕೆ ಅಂದಳು,
'ನನಗೆ ಮುತ್ತು ಕೊಡಬೇಡ'ಆತ ಮುತ್ತು ಕೊಡಲಿಲ್ಲ,
ಆಕೆ ಎದ್ದು ಹೋದಳು,,ಪಾಪ ಅವನಿಗೆ ಬುದ್ದಿಯೇ ಬರಲಿಲ್ಲ...........
ಸೈಡಿಗ್ ಬನ್ರಿ
ಬಾ ಎಂದು ಹಂಬಲಿಸಿದವಳು,
ಬಾಗಿಲಲ್ಲಿ ನಿಂತಿಹಳು,
ಓಡಿ ಬಂದ ಪತಿಯ ಕಂಡು,
ಗುಡುಗಿದಳು ಸತಿ ದೇವಿ
,"ಸೈಡಿಗ್ ಬನ್ರಿ"
ಹಾಲಿನವನು ಬರುವನೆಂದು.............

ನೀ....ಬರುವವರೆಗೆ.......
ನನ್ನ ನೀನು ಬಿಟ್ಟು
ಹೋಗುವ ಮುನ್ನ
ಒಮ್ಮೆ ತಿರುಗಿ ನೋಡಿ
ಬಿಡು ಚಂದ್ರನ ಮುಗುಳು
ನಗೆಯನ್ನೊಮ್ಮೆ ಕವಟುಗ
ಲೊಳಗೆ ಭದ್ರವಾಗಿ ಇಟ್ಟು ಕೊಳ್ತೇನೆ
ಎಲ್ಲ ಕಳೆದು ಮತ್ತೆ ನೀ....ಬರುವವರೆಗೆ....... ...

ಪ್ರೀತಿಯ ಸಾವು,,,
ಜಗತ್ತಿನಲ್ಲಿ ಅತಿ ಭೀಕರವಾದ ಸಾವು
ನಮ್ಮ ಸಾವಲ್ಲ..
ನಮ್ಮ ಆಪ್ತರದ್ದು ಅಲ್ಲ..
ಮನಸ್ಸುಗಳ ನಡುವಿನ ಪ್ರೀತಿಯ ಸಾವು,,,
ನಂಬಿಕೆಯ ಸಾವು...
ಕೊನೆವರೆಗೂ ಭೂತವಾಗಿ
ಕಾಡುತ್ತಲೇ ಇರುತ್ತದೆ....
ಕೊಲ್ಲುವ ಮುನ್ನ ಒಮ್ಮೆ ಯೋಚಿಸಿ,,, ....

ಅರ್ಥವಾಗುತ್ತಿಲ್ಲ
ಕಂಡೆ ಅವಳನ್ನು ಅದೊಂದು ದಿನ..
ಬೆಳೆಸಿದೆ ಅವಳೊಡನೆ ಗಾಢವಾದ ಸ್ನೇಹನ..
ಅನಿಸುತಿದೆ ನನಗೆ ತುಂಬಾ ಹತ್ತಿರ ಅವಳ ಮನ...
ಅರ್ಥವಾಗುತ್ತಿಲ್ಲ ನನಗೆ ಇದು ಸ್ನೇಹನ ಪ್ರೀತಿನಾ?.......

ಕವಿತೆ
ಎಸ್ಟು ಬರೆದರೂ
ಮೂಡಲಿಲ್ಲ ಕವಿತೆ
ಏಕೆ೦ದು ಕೇಳಿದರೆ
ಕಲ್ಪನೆಯ ಕೊರತೆ .......

ಹೃದಯಕ್ಕೆ ಮೋಸ
ಮುಖದಲ್ಲಿ ಸಾವಿರ ಭಾವನೆಗಳನ್ನ
ವ್ಯಕ್ತಪಡಿಸಬಹುದು,,
ಆದರೆ ಅದರಲ್ಲಿ ಹೃದಯದ ನೋವುಗಳನ್ನ
ತೋರಿಸದೇ ಮುಚ್ಚಿಹಾಕಬಹುದು..
ಜಗತ್ತಿಗೆಲ್ಲ ನೀವು ನೋವು
ಮುಚ್ಚಿಟ್ಟು ನಗು ಮುಖ ತೋರಿಸಬಹುದು....
ಆದರೆ...
ನಿಮಗೆ ನೆನಪಿರಲಿ...
ನಿಮ್ಮ ಮುಖದಿಂದ ನಿಮ್ಮ
ಹೃದಯಕ್ಕೆ ಮೋಸ ಮಾಡ್ತಾ ಇದ್ದೀರಾ ಅನ್ನೋದು........


ನೆನಪಾಗಿ ಉಳಿದವರು ...
ನೆನಪಾಗಿ ಉಳಿದವರು
ನೆನಪಲ್ಲಿ ನೆನಪಾಗಿ
ನೆನೆದಾಗ ಬ೦ದವರು
ನೆನೆಯದೆಯೂ ನೆನಪಾಗಿ
ನೆನಪಿಗೇ ಬರುವವರು
ನಿಜ ಅವರು ನೆನಪಾಗಿ ಉಳಿದವರು ......

ನಲ್ಲ
ಬೇಡ ಬೇಡವೆ೦ದರೂ
ಬಿಡದೇ ಬರೆದು ಒ೦ದು
ಪ್ರೇಮ ಪತ್ರ ತಿಳಿದೋ
ತಿಳಿಯದೇಯೋ ಕೊಟ್ಟು
ಕಳುಹಿಸಿದ್ದ ನನ್ನ ಗ೦ಡನ ಹತ್ರ ........

ಸ್ವಾರ್ಥ
ಕಳೆದು ಹೋಗುತಿದೆ ಮನವು
ಕಾಣದ ಕೈಗಳ ಸ್ವಾರ್ಥದಲಿ
ಕಳೆದುಕೊಳ್ಳದಿರು ನಿನ್ನ
ತನವಪರರ ಆಸೆಗಳ ಸಾರ್ಥಕತೆಯಲಿ....

ಅರುಣ ಸಿರಿಗೆರೆ
ನಾ ನಿನ್ನ ತಡೆಯುವುದರೊಳಗಾಗಿ
ನನ್ನೆದೆಯಲ್ಲಿ ಹೆಜ್ಜೆಯೂರಿದೆ
ಏಕೆಂದು ನಾ ಕೇಳುವುದರೊಳಗೆ
ಕಾಣದೆ ನೀ ಮಾಯವಾದೆ
ಗುರುತುಗಳ ಅಳಿಸಲಾಗದೆ
ನಾ ನಿನ್ನ ಹುಡುಕುತ್ತಿದ್ದೆ
ಆದರೆ ನೀ ಕಣ್ತಪ್ಪಿಸಿ
ನನ್ನ ಭಾವಗಳಲ್ಲಿ ಬೆರೆತಿದ್ದೆ......

ಗುರುಜೀ.....
ಗುರುವೇ ಗುರುವೇ ಹೇಗೆ ಬಣ್ಣಿಸಲಿ
ಈ ಗುರುಜಿಯ ಚಟ
ತಿಳಿಯಲಿಲ್ಲ ಈ ಸ್ವಾಮಿಯದು
ಯಾವ ಮಠ
ಜೊತೆಗೆ ಈ ಗುರುವಿಗ್ಯಾಕೆ
ನನ್ನ ಮೇಲೆ ಚುಟುಕ ಬರೆಯುವ ಹಠ .... ..........

ಮುಕ್ತಿ - ಭಕ್ತಿ
ಮಲಗುವಾಗ ನೆನೆ ನೆನೆದು
ಕೈ ಮುಗಿದರೆ ಗುರುವಿಗೆ
ಅದು ಭಕುತಿ ಶಾಶ್ವತವಾಗಿ ಕ
ಣ್ಮುಚ್ಹುವಾಗ ದೇವನೊಲಿದರೇ
ಅದೇ ಮುಕುತಿ ತಿಳಿಯೋ
ಮ೦ಕು ತಿಮ್ಮ ಎ೦ದ ಸರ್ವಜ್ಞ....

ಅವಾ೦ತರ
ಮುತ್ತು ಕೊಟ್ಟ ನಲ್ಲ
ಮಾತೇ ಆಡಲಿಲ್ಲ
ಕೇಳದೇ ಮುತ್ತಿಕ್ಕಿದ್ದಕ್ಕೆ
ಉದುರಿಸಿದ್ದೆ ಅವನ ಹಲ್ಲ ...!

ಒಮ್ಮೊಮ್ಮೆ ಹೀಗೇ .........
ಹೀಗೊಮ್ಮೆ ನೆನಪಾಯಿತು
ನೋವು ನಲಿವಿನ
ಹಿ೦ದಿನ ದಿನಗಳು
ಅಸ್ಟರಲ್ಲೇ ಕ೦ಬನಿಯಿ೦ದ
ಮ೦ಜಾಗಿದ್ದವು
ಈ ನನ್ನ ಕಣ್ಗಳು .......

" ಮರೆಗುಳಿ "
ಮೊನ್ನೆ ಮೊನ್ನೆ
ನೋಡಿದ ಹಾಗಿದೆ ನಿಮ್ಮನ್ನಾ
ಏಲ್ಲೋ ಕೇಳಿದ ಹಾಗಿದೆ
ಈ ನಗುವನ್ನಾ
ನೀವು ಅವರೇ ..ss
ಇಲ್ಲಾ ಇವರೇ ...sss**
ಓ ನೆನಪಾಯಿತು
ಬಿಡಿನೀವು ನಮ್ಮ ಮನೆಯವರೇ...

ಪ್ರತಿ--ಕ್ರಿಯೆ
ಯಾವಾಗಾ
ನಾ ನಿನ್ನ
ಪ್ರೀತಿ ಮಾಡಿದೆನೋ
ಪ್ರಿಯೆ ಅ೦ದಿನಿ೦ದ ಯಾವುದಕ್ಕೂ
ಇಲ್ಲ ನನ್ನ ಪ್ರತಿಕ್ರಿಯೆ ..........

ಹೆಚ್. ಡು೦ಡಿರಾಜ್
ನಮ್ಮ ನಾಡು
ಸುಕದ ಬೀಡು
ನಿಸ್ಟೆಯಿ೦ದ ದುಡಿದರೆ .........
ಎ೦ದ ನಮ್ಮ ಮುಖ್ಯಮ೦ತ್ರಿ
ನಿಸ್ಟೆಯಿ೦ದ ದುಡಿದರೇ ???

Tuesday, January 1, 2008

SNEHADA KURUHU....

ಒದ್ದೆಯಾದ ಕಣ್ಣು ಮತ್ತೆ ಕದ್ದು ಅಳುತ್ತಲೇ ಇದೆ
ಹ್ರದಯದಾಳದಲ್ಲೆಲ್ಲೋ ಅಳಲ ಬಚ್ಚಿಟ್ಟುಕೊಂಡು
ಮಂದ ಬೆಳಕಿನ ಆ ಸಂಜೆ ಕಣ್ಮುಚ್ಚಿ ಕುಳಿತೇ ಇದ್ದೆ
ಮರುದಿನ ಇಬ್ಬನಿ ಚುಂಬಿಸುವವರೆಗೂ..
ಮುಚ್ಚಿದ್ದ ಕಣ್ಣು ತೆರೆದು ಸುತ್ತಲೂ ದಿಟ್ಟಿಸಿದೆ
ಕಂಡಿತು ಆ ಹಳೆ ನೆನಪು ಸಾಲು ಸಾಲಾಗಿ
ಅಂದು ನೀನಿರೆ ಆ ಮಧುರ ಉದ್ಯಾನದಿ
ಅದೆಷ್ಟೋ ಹೊತ್ತು ತಿಳಿಯದೆ ಸರಿದವು
ಆ ಉದ್ಯಾನದ ಮೊಗ್ಗು, ಹೂವುಗಳ ನಡುವೆ
ನಮ್ಮ ಸ್ನೇಹದ, ಮೌನ ಭಾಷೆಯ,
ಆತ್ಮೀಯತೆಯ ಸವಿನೆನಪಿನ ಹಸಿರು
ಹೂವಾಗಿ ನನ್ನಲ್ಲಿದೆ ಇಂದು
ಮರೆಯದೆ ಜೊತೆಗೊಯ್ಯುವೆ
ಯಾವಾಗಲೂಇದೇ ತಾನೆ ನನ್ನ ನಿನ್ನ ಸ್ನೇಹದ ಕುರುಹುಗಳು. .....ANAMIKA...

ಪ್ರೀತಿ ಪ್ರೇಮದ ಬಗ್ಗೆ ಕೆಲ ಸ್ನೇಹಿತರು ರಚಿಸಿದ ಕವನಗಳು.....

ಪ್ರೇಮಕ್ಕೆ ನಿಮ್ಮ ಪರಿಭಾಷೆ ಏನು... ?
ಗದ್ದಲ ಗಳಲ್ಲಿ
ಕಳೆದು ಹೋದ ಸದ್ದಲ್ಲವೀ
ಪ್ರೇಮ ಹೃದಯದ
ಪಿಸುಮಾತುಗಳ ಕಣ್ಣಲೆ
ಹೇಳುವ ಮಧುರ ಕಲೆ ಪ್ರೇಮ.......
ಒಂದೇ ನೋಟದಲ್ಲಿ
ಅಡಗಿ ಕುಳಿತ ಕಾಮಾನೆಯೋ
ತಿಳಿಯದು ಜೀವನ
ನೌಕೆಯ ಮಧುರ ಪಯಣಕೆ
ನಾವಿಕನೆ ಪ್ರೇಮ ...........

ಹೃದಯದ ಹಿಮ
ಬಂಡೆಯ ಕರಗಿಸುವ
ಬಿಸಿ ಕಾವೇ ಪ್ರೇಮ......
ಸುಪ್ತ ಮನ-ಭಾವದ
ಅಭಿವಕ್ತಿಯೇ ಪ್ರೇಮ

ಮೌನ ತಾಲ್ಮೆಗಳ
ಮಿಲನ ತ್ಯಾಗದ ಇ
ಟ್ಟಿಗೆಯ ಸೌಧ ಸಂವತ್ಸ್ಸ
ರ ಗಳಿಗೆ ಚೈತ್ರ ಕಾಲವೀ ಪ್ರೇಮ........MALINI


ಅದರ ಪ್ರೀತಿಯ ಚಿಂತನೆ ಬಹು ಸುಮದುರ..!
ಬಾನಲಿ ಬೆಳ್ಳಕ್ಕಿ ಮುಗಿಲ ಚುಂಬಿಸೆ ಪ್ರೇಮ..
ಅಂಗೈಯಲಿ ಅಸುಗೊಸು ಅಳುತ ಮುಸುನಕ್ಕೊಡೆ ಪ್ರೇಮ..
ಹೊವಿನೊಳು ಮಕರಂದವ ಹೀರುವ ಧುಂಬಿಯಲಿ ಪ್ರೇಮ..
ಪ್ರಕ್ರುತಿಯ ಸೌಂದರ್ಯವ ಸವೆವ ಕಂಗಳಲಿಹಿದು ಪ್ರೇಮ..
ಪರಿ ಪರಿಯ ಪರಿಚಯ ಪ್ರೇಮಕ್ಕೆ..!

ಪ್ರಾಂತ್ಯವದು ಇರದು ಈ
ಅನುಭವಕೆನೊಂದ ಮೊಗದಲು
ಮಲ್ಲಿಗೆಯ ಮೊಗ್ಗರಳಿದಣಿದ ಉಸಿರಿನಲಿ
ಅಕ್ಕರೆಯು ನಲಿಯುತಲಿನಾಚುವ
ತುಟಿಗಳಲಿ ತಂಪಾದ ಮುತ್ತಿಡುತ..
ಅಮ್ರುತದ ಸವಿಯ ಸದಾಸೊಸುವುದರಲ್ಲೆ ಪ್ರೇಮ..!! -ಯುವಪ್ರೇಮಿ

Padagalige nilukada "Kaavya" Prema...
ಮುಸೂಕಿದ ಮಬ್ಬನು ಸೀಳಿ
ಭೂಮಿಗಿಲಿದ ಮೊದಲ
ಬೆಳ್ಳಿಕಿರಣ
ಅರಳಿನಿಂಥ ಹೂವಿಗಿತ್ಟಾ
ಇಬ್ಬನಿಯ ಮುತ್ತುಪ್ರೇಮ.....

ಬಿಸಿಲಿನಿಂದ ಬೆಂಡು
ಕೆಂಪಾದ ಧಾರೆಗೆ
ತಂಪೆರೇದ ಮಳೆ
ಹನಿ ಇಂದಹೊಮ್ಮಿಡ
ಮಣ್ಣಿನ ಘಮಪ್ರೇಮ......

ಕೇಕ್ಚಲಲ್ಲಿ ಕಾರು
ಹಾಲುನ್ಣುತಿರಲು
ತೀರು ತಿರುಗಿ ನೊಾಡುವ
ಆಕಲ ಕಣ್ಣಲ್ಲಿಚಿಮ್ಮುವ
ಮಮತೆಪ್ರೇಮ.....

ಹಾಳುಗಲ್ಳ ಹಸುಳೆ,
ಕಿಲಕಿಲನ ನಗುತ
ತೋಡಳ ಮಾತಲಿ ಕರೆದ
"ಅಮ್ಮ" ಎಂಬ ಕೂಗುಪ್ರೇಮ.....

ನೋಾಟಗಳು
ಬೆರೆತಾಗ ತುಟಿಯಂಚಲಿ
ಮಿಂಚಿ, ವಿನಿಮಯ
ವಾದಒಲವಿನ ಮುಗುಳ್ನಾಗೆಪ್ರೇಮ....

ಪದಗಳಿಗೆ ನಿಲುಕಡೆ
ಎದೆಯಲ್ಲೇ ಉಳಿದ
ನೂರು ಮಾತುಗಳ
ಬೆಚ್ಚಾಗಿನ ಭಾವ ಲಹರಿಪ್ರೇಮ......ANAMIKA

*ಪ್ರೀತಿಯೆಂದರೆ* ...
ಅವರ ಪ್ರಕಾರ
ಪ್ರೀತಿಯೆಂದರೆ
ಒಂದು ನದಿ,ಹತ್ತಾರು
ಮುಗ್ಧಜೊಂಡುಗಳನ್ನು
ಮುಳುಗಿಸುತ್ತಾಸಾಗುವ ತೊರೆ!

ಮತ್ತೆ ಕೆಲವರಿಗೆ,
ಇಡಿ ಎದೆಯನ್ನೇ
ರಕ್ತದಲ್ಲಿ ಅದ್ದುವ
ಕತ್ತಿಯ ಅಲುಗು!
ಮಿಕ್ಕವರ ಪಾಲಿಗೆ
ಅದು ಎಲ್ಲವನ್ನೂ
ನುಂಗುವ ಒಂದು
ಅನಿವಾರ್ಯ ಹಸಿವು!

ಆದರೆ, ಹುಡುಗಿ!
ನನ್ನ ಪಾಲಿಗೆ
ಪ್ರೀತಿಯೊಂದು ಸ್ನಿಗ್ಧ
ಹೂವು ಹಾಗು
ನೀನೆಅದರ ತಾಯಿ ಬೇರು! .....SHANKAR


ಹೃದಯ ಗೀತೆ..!
ನೀ ಅಲ್ಲೆ ನಿಂತು
ಹಾಡೆ ಒಮ್ಮೆ ನಾ
ಇಲ್ಲೆ ಕೇಳಿ ನಲಿಯುವೆ..!
ನೀ ಹಾಡೊ ರಾಗ
ಕೇಳದಿರೇನ್..!
ನಿನ ಬಾವ ಈ
ಹೃದಯ ಮುಟ್ಟದೆ..!!

ಸಾಗರ ನಮ್ಮಿಬ್ಬರ
ಸರಿಸಿದರೇನ್ಭುವಿಯ
ಮೇಲೆ ಇರುವೆವು ನಾವು..!
ನಿನ ನೆನೆಪೆ ನಿತ್ಯ
ದೈವ ಧೊಪನಾ ದಿನವು
ನೆನೆದು ಹಚ್ಚಿಹೆ...!

ಪ್ರೀತಿ ನೀನು,
ಕ್ರಾಂತಿ ನೀನು
ಈ ಬದುಕ ರೊಪಗಾರ್ತಿ
ನೀನುಶಕ್ತಿ ನೀನು,
ಯುಕ್ತಿ ನೀನುಈ ದೇಹಕೆ
ಉಸಿರಾದೆ ನೀನು
ನೀ ಹಾಡಲು ಪದ
ಸಿಗದಿರ್ದೊಡೆನಮ್ಮ
ಪ್ರೇಮ ಮಾತನೊಮ್ಮೆ ನೆನೆ..!

ನಿನ ಬಡಿವ ಕಣ್ಣ
ರೆಪ್ಪೆಯೆ ರಾಗನಾ ನೀಡಿದ
ಚುಂಬನವದುವೆ ತಾಳ..!
ಅಲ್ಲೆ ನಿಂತು ಹಾಡೆ ಒಮ್ಮೆ
ನಾ ಇಲ್ಲೆ ಸವಿದು ತಣಿವೆನು-,........ಯುವಪ್ರೇಮಿ


ಶಾಪ..!
ನಿನ್ನ ಚಂದಕೆ ಇಲ್ಲ ಮಾತು
ಆಡುತಿರುವೆ ಇದ ನಾ
ಸೋತುಕನಸ ಕಣೊ
ಪರಿಯ ರೊಪನನ್ನ
ಮನಕೆ ಅದುವೆ ಕೊಪಾ.. ಅ..ಅ.

.ಅಬೆಟ್ಟ ಸುತ್ತಿ, ಗಿರಿಯ ಬಳಸಿ
ಬಂದೆ ನಾ ಸೇರಲೊ.......!
ಸೆರಲೊಲ್ಲ ಮನಸು ನಿನದು
ಮರೆತೆಯ ನನ ಸರಿಯುತಾ...
ಭೊಮಿ ಭಾನು ಒಂದೆ ಎನಿಸಿ
ನಿನ್ನ ನಾ ಬಯಸಿದೆ...
ಬಯಸಲೊಲ್ಲ ಬವಣೆ ನಿನದು
ಬಂದೆ ಎಕೆ ನನ್ನ ಬದುಕಲೀ...ಇ..ಇಇ.

ಹಗಲು ಅರಸಿ, ಇರುಳು ನೆನೆಸಿ
ನಿನ ಹೃದಯ ನಾ ಮುಟ್ಟಲು...
ಬಿಸಿಲಿನಲ್ಲಿ ಬಿರುಗಾಳಿ ನೀನು
ಯಾಕೇ ಪ್ರಾಣ ಕಸಿದು ಹೋದೇ..ಎ..ಎ..ಎ.

ಅಂದವೆಲ್ಲ ಈ ಅಂಗಾಂಗ
ಕಲ್ಲಇಂದು ಎನಗೆ ಶಪಿಸಿತು...!
ಮನಸಿನ ಆ ಕುರೊಪವೆ
ನೇನಾ ನೋಡದೆ ನಡೆದೆ ಎಕೇ...ಎ..ಎ..ಎ.

ಜೀವ ಭಾರ, ಹೃದಯದ
ಗುರಇಂದು ನಾ ತ್ಯಜಿಸುವೆ...!
ನಿನ್ನ ಪ್ರೀತಿಗೆ ಈ ಪ್ರೀತಿಯುಡುಗೊರೆ
ನಿನ ಮಡಿಲಲಿಡುವೆ ಸಾಕೇ...ಎ..ಎ..ಎ
.ನಿನ್ನ ಚಂದಕೆ ಇಲ್ಲವೆ ಮಾತು
ಆಡುತಿರುವೆ ಇದ ನಾ ಸೋತು
ಕನಸ ಕಣೊ ಪರಿಯ ರೊಪ
ಅರಿಯೆ ಬರಿಸಿದೆನೆ ಶಾಪಾ..ಅ.ಅ..ಅ..-....ಯುವಪ್ರೇಮಿ


ನನ್ನ-ನಿನ್ನ ನಡುವೆ..!

ನನ್ನ ನಿನ್ನ ನಡುವಿನಲಿ..!
ಪ್ರೀತಿ ಬಳ್ಳಿ ನಲಿದಿಹುದು,!
ವರುಷಗಳೆ ಉರುಳಿದರೊ
ಹರುಷವದು ದಿನೆ ಬೆಳೆದಿಹುದು..!

ನೀ ಮುಡಿದ ಹೊವದು..!
ಕೊಗಿ ನನ್ನ ಕರೆದಿಹುದು
ಓರೆ ನೋಟದ ಆ ನಯನ
ನನ್ನಲ್ಲೇನೊ ಗೊಣಗಿಹುದು..!
ನನ್ನ ನಿನ್ನ ನಡುವಿನಲಿ..!
ಪ್ರೀತಿ ಉಕ್ಕಿ ಹರಿದಿಯುದು
ಯುಗಗಳೆ ಉರುಳಿ ಒರಳಿದರೊ
ಹರುಷವು ಚಿಮ್ಮಿ ಬೆಳೆದಿಹುದು..!
ನಿನ್ನ ನುಡಿಯೊ ಬಲುಚಂದ..!

ಸವಿದಂತೆಲ್ಲ ಸವಿ ಸಿರಿಗಂಧ.!
ಮಾತು ಮಾತೆ ಮತ್ತೆ ಮೊಡಿ
ಹುದುನಿನ್ನ ಕೊಡಿದ ಆ ಕ್ಷಣದಿಂದ..!
ನಿನ್ನ ನಗು ಎಂತ ಮಾಯೆಯೊ
ಆ ಮಾಟದಾಟ ನನ್ನ ಕಾಡಿಹುದು
ಹಾಗೆ ನಕ್ಕು ನೀ ತಿರುಗಿದೊಡೆ
ಲೊಕವನ್ನೆ ಮರೆ ಮಾಚಿಹುದು
ನನ್ನ ನಿನ್ನ ನಡುವಿನಲಿ..!
ಪ್ರೀತಿ ಬಂಧ ಬಾಡದಂತಹದು
ಇತಿಹಾಸವೆ ಅಳಿಸಿ ಹೋದರೊ
ಈ ಪ್ರೀತಿಯಂದು ಶಾಶ್ವತವೊ..!
ನಿನ್ನ ಆ ನುಲಿವ ನಡೆ..!
ನನ್ನ ಸದಾ ಕುಣಿಸಿಹುದು
ನಿನ್ನ ಗೆಜ್ಜೆಯ ದನಿಯದೊ
ಹೆಜ್ಜೆ ಹೆಜ್ಜೆಗು ಎನ್ನ ತಣಿಸಿಹುದೊ..!
ನನ್ನ ನಿನ್ನ ಮನವದೊ...!
ಸರಿಸಲಾಗದಂತೆ ಬೆರೆತಿಹುದು
ಬೆರೆತು ನುಡಿವ ಪ್ರೇಮ ಮಾತದೊ
ಜೀವ ಭಾವದ ಪ್ರಣಯದಾಟವೊ..!-.......ಯುವಪ್ರೇಮಿ


ಕನಸುಗಳು
ಕನಸುಗಳು
ನಿನ್ನ ಪಾದಗಳ ಅಡಿ
ನನ್ನ ಕನಸುಗಳ ಚೆಲ್ಲಿರುವೆ
ಮೃದುವಾಗಿ ನಡೆ
ಎಚ್ಚರವಾದೀತು.

ಹಗಲುಗನಸಲ್ಲವಿದು
ಗೆಳತಿಮೃದುವಾದ
ಮನಸ್ಸುನನ್ನ ಮನಕೆ
ನೀನೇ ಒಡತಿ ಇದು ಆಗಲಿ
ನನಸು ಭಾರದ ಹೆಜ್ಜೆ ಇಡಬೇಡ

ನೋವು ಆದೀತು
ನೀನು ಎಷ್ಟೇ ದೂರವಿದ್ದರು
ಆಗಸದಿಂದ ನೋಡುವೆನೇ
ಸಂತಸದಿ ಇರು ನೀನು
ಎಂದು ದೇವರ ಬೇಡುವೆನೇ
ಕನಸಿನ ಮೇಲೆ ಓಡಬೇಡ
ನಿಂತು ಹೋದೀತು .....ANaMIKA


ಕ್ಲಾಸ್ ರೂಮ್ ಎಂಬ ನಾಲ್ಕು.....
ಕ್ಲಾಸ್ ರೂಮ್ ಎಂಬ ನಾಲ್ಕು ಗೋಡೆಯ ಮಧ್ಯೆ
ತುಂಬಿದ್ದ ಮೌನ ಮತ್ತೆ ಮುರಿಯುತ್ತಿದೆ.
ಚಿಲಿಪಿಲಿಗುಡುವ ಗೂಡಿನ ಗುಬ್ಬಚ್ಚಿಗಳಂತೆ
ಚಿಣ್ಣರ ಕಲರವ ಸುತ್ತಲೂ ಧ್ವನಿಸುತ್ತಿದೆ.
ರಜೆಯಲ್ಲಿ ಗರಿಗೆದರಿ ಹಾರಿದ್ದ ಮಕ್ಕಳೆಂಬ ಹಕ್ಕಿಗಳು
ಮತ್ತೆ ಮಳೆಗಾಲಕ್ಕೆ ಬೆಚ್ಚಗಿನ ಗೂಡು ಸೇರಿವೆ.
ಕ್ಲಾಸ್ ರೂಮ್ ಎಂಬ ಮಾಯಾಲೋಕದಲ್ಲಿ ಎಷ್ಟೋ
ಮನಸುಗಳು ಅರಳುತ್ತವೆ ಮತ್ತೆಷ್ಟೋ ಮುದುಡುತ್ತವೆ.
ಒಮ್ಮೊಮ್ಮೆ ಈ ಭಯಂಕರ ಲೋಕ ಎಷ್ಟೋ
ಬಾಲ್ಯಗಳ ಕೊಂದು ಹಾಕುತ್ತದೆ.
ಅದೆಷ್ಟೋ ಬಣ್ಣದ ಕನಸುಗಳು ಜೀವ ತಳೆಯುತ್ತವೆ
ಮತ್ತೆ ಹಲವರ ಭವಿಷ್ಯಕ್ಕೆ ಭಾಷ್ಯ ಬರೆಯುತ್ತದೆ.
ಅರಿವೇ ಮೂಡದ ಕುರಿಗಳನ್ನು ಕಟ್ಟಿ ಹಾಕಿ
ಕೆಲ ಕಂಠಗಳು ಏನೋ ಗಿಳಿಪಾಠ ಹೇಳಿಸುತ್ತಿವೆ.
ಕ್ಲಾಸ್ ರೂಮ್ ಎಂಬ ನಾಲ್ಕು ಗೋಡೆಯ ಮಧ್ಯೆ
ತುಂಬಿದ್ದ ಮೌನ ಮತ್ತೆ ಮುರಿಯುತ್ತಿದೆ.- ...........Reshma narayan


gelathi..
ಬೇಡ ಗೆಳೆಯಾ ಇಷ್ಟು ದೊಡ್ಡ ತ್ಯಾಗ
ಕ್ರುರ್ ಹೃದಯದ ಹುಡುಗಿ,
ಘಶಿಯಾದನೋವು ,
ತ್ಯಾಗದ ದುಖ , ಸಾಕು
ಒಂದೇ ಯಾರದೇ avalu ಕೊಟ್ಟ ಸುಖ .....

ಆರಿಯಲಿಲ್ಲ ಏಕೆ ನೀನು ,
ನೆನಪು ಹೋಯಿತೇ avalu
ಹೇಳ್ಳುತಿದ್ದಳು ನೀನು ಪ್ರಾನಸಖ
ಅಂತ ನಿನ್ನ ಪ್ರಾಣ ಹಿರುವರೆಗೂ
ನೀನೆ ಸಖ ಆದದ್
ಮೇಲೆ ನಿನ್ನ ಸಹವಾಸ್ ಅವಲ್ಲಿಗೆ ಬೇಕ .......

-ಧೀರೇಂದ್ರ ನಾಗರಹಳ್ಳಿ mattu anekara sangraha....

ದ್ರೋಹ...!-----------
ದ್ರೋಹವೆಂದರೆನೆಂದು
ನಿನ್ನಿಂದಲೇ ಕಲಿಯಬೇಕು!
ದಶಕಗಳ ದ್ವೇಷವೆಂಬಂತೆ
ಒಂದುಸಣ್ಣ ಸುಳ್ಳು ಹೇಳಿಬಿಟ್ಟೆ!
ಪ್ರೀತಿಸಿಯೂ "ಪ್ರೀತಿಸಿಲ್ಲ" ವೆಂದು ಬಿಟ್ಟೆ.
ನನ್ನದೊಂದು ಮಾತಿತ್ತು ಅದ
ಮುಗಿಸುವ ಮೊದಲೇ,
ಅಲ್ಲಿಂದ ಹೊರಟು ಬಿಟ್ಟೆ! -ಧೀರೇಂದ್ರ ನಾಗರಹಳ್ಳಿ


ಮುಗಿಯದ ಮಾತು...!
ಮುಗಿಯದ ಮಾತು ನೋರಿಹವು,
ನಮ್ಮಿಬ್ಬರ ನಡುವೆ.
ಬತ್ತಿ ಹೋಗಿಹುದು ಒಲವು,
ಹಮ್ಮು-ಬಿಮ್ಮು ಗಳ ನಡುವೆ.
ನೂರೊಂದು ಕೂಣಿಯುತಿಹವು,
ಉತ್ತರವಿಲ್ಲದ ಪ್ರೆಶ್ನೆಗಳು.
ಕೂಗಿ ಕೆಳಲು ದನಿ ಇರಲಿಲ್ಲ,
ಸೂರೆ ಮಾಡಿದ್ದವು ಭಗ್ನ ಕನಸುಗಳು.
ತಿರುಗಿಯೂ ನೋಡದೆ ಹೊರಟು ಹೋದೆ,
ನಾನಲ್ಲೆ ನಿಂತಿದ್ದೆ ನೀಬರುವೆ ಎಂದು!
ದಿನಗಳೇ ಉರುಳಿದರು ಬಾರದೆ ಹೋದೆ.
ನೀ ಸುಖವ ಕಂಡಿದ್ದೆ
ಮತ್ತೊಬ್ಬರ ತೆಕ್ಕೆಯಲಿ ಮಿಂದು. - ಧೀರೇಂದ್ರ ನಾಗರಹಳ್ಳಿ


ಓ! ಗೆಳತಿ!---------
ಓ! ಗೆಳತಿಯೇ,
ನನ್ನೆದೆಯನ್ನು ಒದ್ದೋಡುವ
,ಇರಾದೆ ಇದ್ದಿದ್ದೇ ಆಗಿದ್ದರೆ,
ಒಂದು ಕಣ್ಸನ್ನೆ ಸಾಕಿತ್ತು!
ಈ ಹೃದಯವನ್ನೆ ಹಾಸಿರುತಿದ್ದೆ,
ನಿನ್ನ ಪಾದದಡಿಗೆ! -ಧೀರೇಂದ್ರ ನಾಗರಹಳ್ಳಿ


ಇನ್ನೇನು ಬೇಕು?
ನಿನ್ನ ಆ ಬಟ್ಟಲು ಕಂಗಳಲಿ,
ನನ್ನದೆ ಬಿಂಬ.
ನನ್ನ ಕನಸುಗಳ ಆ ಪಸೆಯಲಿ,
ನೀನೇ ನೀನು.
ನಮ್ಮಿಬ್ಬರ ಈ 'ಪ್ರೀತಿ'ಗೆಆ
'ಚಡಪಡಿಕೆ'ಗೆ ಇನ್ನೇನು ಬೇಕು? -ಧೀರೇಂದ್ರ ನಾಗರಹಳ್ಳಿ


ಎನ್ನ ಮನದನ್ನೆ
ಎನ ನಲ್ಲೆಯ ಬಗ್ಗೆ
ಏನೆಂದು ವಿವರಿಸಲಿಸರಳ
ಸುಂದರತೆಯ ಸಾಕಾರ ಇವಳು

ಒಲ್ಲದಿಹ ಮಾತಿಗೆ
ಸನ್ನೆಯಲೇ ನಕಾರಪ್ರೀತಿ
ಬಯಸುತಿಹ ಜೀವಕೆ
ಒಲವಿನಲಿ ಸಹಕಾರ
ತುಂಟ ಕುಡಿ ನೋಟದಲೇ
ಸೆರೆ ಹಿಡಿವ ರತಿ ಇವಳು
ಬಳುಕು ನಡೆ ನೀಳ
ಜಡೆಯ ಮನ ಕದ್ದ ಒಡತಿ

ಜತೆಗೂಡಿ ನನ್ನೊಡನೆ
ಎಲೆಯಡಿಕೆ ಮೆಲ್ಲು
ತಲಿಸುದ್ದಿ ಕಂತೆಯ
ಮಹಾಪೂರವನೇ ಕರೆಯುವಳು
ಅವರಿವರ ಸುದ್ದಿ ನಮಗೇತಕೆ
ಬಿಡಿಕೊನೆಯಲ್ಲಿ ನನ್ನ
ಬಾಯ್ಮುಚ್ಚಿಸುವಳೇ ಇವಳು!



ಎನ್ನ ಮನದನ್ನೆ,
ಸೊನ್ನೆಯ ಮೊಗದವಳು
ಕಪಟ,ಅಸೂಯೆಗಳು
ಸೋನ್ನೆ ಇರುವ ಗುಣಡವಳು
ಹೊಗಳಿದರೆ ಕೆನ್ನೆಯಲಿಗು
ಳಿಗಳ ನರ್ತನತೆಗಳಿದರೆ ಮೊಗ,'?'
ಸನ್ನೆಯಲಿ ಪರಿವರ್ತನ
ಹೇಗೆ ಇರಲಿ
ಅವಳು ಎನ್ನ ಮನದನ್ನೆ
ರಾತ್ರಿ ಕನಸಲಿ ಬರುವ
ಕನಸಿನ ಕನ್ಯೆ


ಮರಳಿ ಕನಸಿನೂರಿಗೆ
ದಿನಗಳು ಅದೆಷ್ಟೋ
ಉರುಳಿವೆ ಅಕ್ಷರಗಳ
ಪೋಣಿಸದೆಪದಗಳ ಜೋಡಣೆಗೆ
ಪರದಾಡುವ ಪರಿಸ್ಥಿತಿಯೆ?

ವಿನಾ ಕಾರಣ
ಕೊಡಲೇಕೆ ಹಲವು
ನೆಪಗಳ ಕಂತೆಮತ್ತೆ ನ
ಡೆಯುದಿಲ್ಲಿ ಕನಸುಗಳ ಕಂತೆಹೊತ್ತು
ಆಸೆಗಳ ಸಾಗಿಹೆನು ಕನಸಿ
ನೂರಿನ ಕಡೆಗೆತೇಲಿ
ಸಾಗಲು ಜತೆಗೆ ಬರುವೆಯಾ
ನನ್ನೊಡನೆ?

ಪದಗಳ ಪರದಾಟವಲ್ಲ,
ಕೋಟಿ ಪದಗಳಲಿ,
ಕೋಟಿ ಬಾಳುವ
ಪದಗಳ ಹೆಕ್ಕುವ ಪೀಕಲಾಟ!
ಕಂತೆ ಕನಸುಗಳಿರುವಾಗ
ಕಾರಣಗಳ ಬೊಂತೆ ಏಕೆ?
ಆಸೆಗಳ ಮೂಟೆ ಹಂಚುವೆಯಾದರೆ,
ಜತೆಗೆ ಬರುವೆ ನಿನ್ನ ಕನಸಿನ ಊರಿಗೆ....


ವಾಹ್.. ವಾಹ್.. ಅದ್ಬುತ..!!

ವಾಹ್.. ವಾಹ್.. ಅದ್ಬುತ..!!
ಶೈಲಜರವರ ಕಾವ್ಯ
ಸುಧೆಗೆ ಅಡೆತಡೆ ಇಲ್ಲ..!
ದೀಪಕರ ಚುಂಬಕ
ಉತ್ತರಕ್ಕೆ ಸರಿಸಾಟಿಇಲ್ಲ..!!

ಮಾಲಿನಿಯವರ ಅಕ್ಷರ
ನೈವಿಕೆಗೆ ಮನಸೋಲ
ದವರಿಲ್ಲವೇ ಇಲ್ಲ..!!
ಕನಸಿನೊರ ಪಯಣದಲ್ಲಿ
ಪಯಣಿಗನು ನಾನುಕೈಯೊಳಾಸೆ
ಮೊಟೆ ಹೊತ್ತಿ ಪಯಣಿಸುತಿಹೆನು..!
ಕನಸಿನೊರ ದಾರಿ ಕಾಣಲು
ಬೆಟ್ಟಗುಟ್ಟವ ಸುತ್ತಿ..!

ಕಂಡ ಕನಸ ಕೈಯಲಿಡಿಯುವ
ಹೆಬ್ಬಯಕೆಯನೊತ್ತಿ
ಕನಸುಗಾರ ನಾನು,
ಕನಸಕಾಣ್ವುದೆ ನನ್ನ ಕಾರ್ಯ
ಕನಸಿಲ್ಲದ ಅರೆಕ್ಷಣವು ಏನ್ನಲಿಲ್ಲ,
ಇದುವೆ ಆಸ್ಚರ್ಯಕನಸಿನಲ್ಲಿ
ಏನ್ನಮನವು ಸಧಾ ಮಗ್ನವಾಗಿಹುದು...!

ಮಗ್ನತೆಯ ಮಾದುರ್ಯದಿ
ಇಹವನೆ ಮರೆತಿಹುದು..!
ಕನಸಿನೊಲುಮೆ ಏನ್ನಮೇಲೆ
ಇಹುದು ಸಪ್ತಕಡಲಿನಸ್ಟು
ಕಂಡದೆಲ್ಲ ನನಸಮಾಡಿ
ಹೊಸಗನಸ ಸಿಹಿ ಸವಿಯಬಿಟ್ಟು
ಕನಸಕಾಣ್ವ ಆ ಸಮಯವೆ
ಮಕರಂದದ ಸಿಹಿಯಂತೆ..!
ಕನಸು ಮಿಡಿವ ಮದುರ
ಮಾತೆ ಜೇಂಕಾರದ ಸುದೆಯಂತೆ..!

ಕನಸಿನೊರ ನಾಸೇರ್ವೆನು
ಬೇದಿಸೆಲ್ಲ ಆತಂಕದಡೆ
ತಡೆಕನಸ ಕಾಣ್ವ ಗಳಯರನೆಲ್ಲ
ಕೊಡಿಸುವೆನು ಏನ್ನೊಡೆ
ಕಣ ಕಣದ ಏನ್ನುಸಿರಿದು
ರಚಿಸಿದೆ ಕನಸಿನೊರಿನೆಸರ..!
ಕಂಡೆಲ್ಲ ಕನಸ ನನಸಾಗಿಸಿ
ತ್ಯಜಿಸೆ ಸಿದ್ಧ ಈ ಉಸಿರ..!!
ಕನಸಿನೊರ ಪಯಣದಲ್ಲಿ
ಪಯಣಿಗನು ನಾನು..!
ಕನಸಿನಲ್ಲು ಕನಸಿನೊರ
ಕ್ಷಣದಿ ಸವಿಯ ಬಯಸಿಹೆನು..!! -ಯುವಪ್ರೇಮಿ



ಹೀಗಿತ್ತು ನನ್ನ ಪಯಣ

ಮರಳ ಕಣಗಳುರಿಳಿದಂತೆ ..
ಇರುಳು ಸಣಿಹ ಬಂದಿತು ..
ದಿನದ ದನಿವ ನಲಿವ ಕಂಡ
ಕಣ್ಣನು ರೆಪ್ಪೆ ತಾನು ಮುಚ್ಚಿತು
ಕನಸುಗಳ ಗುಡ್ಡೆ ಹಾಕಿ
ಒಂದೊಂದೇ ಹಂಚಿಹನು
ಚಂದ್ರಾಮನು ತಾರೆ ಸಖೀಯರೆಲ್ಲ
ಕೂಡಿ ಆಲ್ಲಿ ನಗುವ ಔತಣ ನಿ
ದ್ರೆ ಊರಿನಲ್ಲಿ ಸುಗ್ಗಿಯ ಸಂಭ್ರಮ
ನೀಡಿರೇ ಊರ ರಾಣಿ ಬಂದು
ನನ್ನ ನಲ್ಲಿ ಕಂಡಳೂ ಪ್ರೀತಿಯಿಂದ
ಆಪ್ಪಿ ನನ್ನ ನೂರಮುತ್ತಾ
ಕೊಟ್ಟಳು ಕನಸುಗಳು ಹೊತ್ತ
ನಾನು ಸಾಗಿದೆ ಉದಯ ರವಿಯ
ಮೊದಲ ಕಿರಣ ಬಂದು ನನ್ನ
ಮುತ್ತಲು ಬೆಳಕು ಹರಿದು
ಸಾರಿದ ರಾತ್ರಿ ಕತ್ತಲು ಹೊಸ
ದಿನದ ಹೊಸ ಬದುಕ ಜೀವಕಲೆಯ ಬಿತ್ತಲೂ




ನನ್ನ ಒಂದು ಪುಟ್ಟಗವನ ಹನಿಗೆ ನೀವೆಲ್ಲ ಸೇರಿಸಿದಿರಿ ನೂರೆಂಟು ಹನಿಗಳನುಪ್ರತ್ಯುತ್ತರದ ಝರಿ ನಿಲ್ಲದಿರಲಿ ಎಂದೂಕವಿಗನಸು ಅದೇ ತಾನೆ " DAM" ತುಂಬಲಿಯೆಂದು .....