Tuesday, January 8, 2008

Kelavu geleyaru rachisida cHuTuKuGaLu

ಇವಳ ತ೦ಗಿ
ಅವಳ ಪ್ರೀತಿಸಿದವನಿಗೆ
ತಿಳಿಯಿತು ಅ೦ದು
ಇವಳ ತ೦ಗಿ ಇನ್ನೂ
ಚೆನ್ನಗಿದ್ದಾಳಲ್ಲಾ ಎ೦ದು ... ..... ಬುದ್ದಿಯೇ ಬರಲಿಲ್ಲ
ಹೀಗೆ ಒಂದು ಹುಡುಗ ಹುಡುಗಿ;
ಅವಳೆಂದಳು,
'ನನ್ನ ಅಪ್ಪಿಕೊಬೇಡ'ಆತ ಅಪ್ಪಿಕೊಳಲಿಲ್ಲ,
ಆಕೆ ಅಂದಳು,
'ನನಗೆ ಮುತ್ತು ಕೊಡಬೇಡ'ಆತ ಮುತ್ತು ಕೊಡಲಿಲ್ಲ,
ಆಕೆ ಎದ್ದು ಹೋದಳು,,ಪಾಪ ಅವನಿಗೆ ಬುದ್ದಿಯೇ ಬರಲಿಲ್ಲ...........
ಸೈಡಿಗ್ ಬನ್ರಿ
ಬಾ ಎಂದು ಹಂಬಲಿಸಿದವಳು,
ಬಾಗಿಲಲ್ಲಿ ನಿಂತಿಹಳು,
ಓಡಿ ಬಂದ ಪತಿಯ ಕಂಡು,
ಗುಡುಗಿದಳು ಸತಿ ದೇವಿ
,"ಸೈಡಿಗ್ ಬನ್ರಿ"
ಹಾಲಿನವನು ಬರುವನೆಂದು.............

ನೀ....ಬರುವವರೆಗೆ.......
ನನ್ನ ನೀನು ಬಿಟ್ಟು
ಹೋಗುವ ಮುನ್ನ
ಒಮ್ಮೆ ತಿರುಗಿ ನೋಡಿ
ಬಿಡು ಚಂದ್ರನ ಮುಗುಳು
ನಗೆಯನ್ನೊಮ್ಮೆ ಕವಟುಗ
ಲೊಳಗೆ ಭದ್ರವಾಗಿ ಇಟ್ಟು ಕೊಳ್ತೇನೆ
ಎಲ್ಲ ಕಳೆದು ಮತ್ತೆ ನೀ....ಬರುವವರೆಗೆ....... ...

ಪ್ರೀತಿಯ ಸಾವು,,,
ಜಗತ್ತಿನಲ್ಲಿ ಅತಿ ಭೀಕರವಾದ ಸಾವು
ನಮ್ಮ ಸಾವಲ್ಲ..
ನಮ್ಮ ಆಪ್ತರದ್ದು ಅಲ್ಲ..
ಮನಸ್ಸುಗಳ ನಡುವಿನ ಪ್ರೀತಿಯ ಸಾವು,,,
ನಂಬಿಕೆಯ ಸಾವು...
ಕೊನೆವರೆಗೂ ಭೂತವಾಗಿ
ಕಾಡುತ್ತಲೇ ಇರುತ್ತದೆ....
ಕೊಲ್ಲುವ ಮುನ್ನ ಒಮ್ಮೆ ಯೋಚಿಸಿ,,, ....

ಅರ್ಥವಾಗುತ್ತಿಲ್ಲ
ಕಂಡೆ ಅವಳನ್ನು ಅದೊಂದು ದಿನ..
ಬೆಳೆಸಿದೆ ಅವಳೊಡನೆ ಗಾಢವಾದ ಸ್ನೇಹನ..
ಅನಿಸುತಿದೆ ನನಗೆ ತುಂಬಾ ಹತ್ತಿರ ಅವಳ ಮನ...
ಅರ್ಥವಾಗುತ್ತಿಲ್ಲ ನನಗೆ ಇದು ಸ್ನೇಹನ ಪ್ರೀತಿನಾ?.......

ಕವಿತೆ
ಎಸ್ಟು ಬರೆದರೂ
ಮೂಡಲಿಲ್ಲ ಕವಿತೆ
ಏಕೆ೦ದು ಕೇಳಿದರೆ
ಕಲ್ಪನೆಯ ಕೊರತೆ .......

ಹೃದಯಕ್ಕೆ ಮೋಸ
ಮುಖದಲ್ಲಿ ಸಾವಿರ ಭಾವನೆಗಳನ್ನ
ವ್ಯಕ್ತಪಡಿಸಬಹುದು,,
ಆದರೆ ಅದರಲ್ಲಿ ಹೃದಯದ ನೋವುಗಳನ್ನ
ತೋರಿಸದೇ ಮುಚ್ಚಿಹಾಕಬಹುದು..
ಜಗತ್ತಿಗೆಲ್ಲ ನೀವು ನೋವು
ಮುಚ್ಚಿಟ್ಟು ನಗು ಮುಖ ತೋರಿಸಬಹುದು....
ಆದರೆ...
ನಿಮಗೆ ನೆನಪಿರಲಿ...
ನಿಮ್ಮ ಮುಖದಿಂದ ನಿಮ್ಮ
ಹೃದಯಕ್ಕೆ ಮೋಸ ಮಾಡ್ತಾ ಇದ್ದೀರಾ ಅನ್ನೋದು........


ನೆನಪಾಗಿ ಉಳಿದವರು ...
ನೆನಪಾಗಿ ಉಳಿದವರು
ನೆನಪಲ್ಲಿ ನೆನಪಾಗಿ
ನೆನೆದಾಗ ಬ೦ದವರು
ನೆನೆಯದೆಯೂ ನೆನಪಾಗಿ
ನೆನಪಿಗೇ ಬರುವವರು
ನಿಜ ಅವರು ನೆನಪಾಗಿ ಉಳಿದವರು ......

ನಲ್ಲ
ಬೇಡ ಬೇಡವೆ೦ದರೂ
ಬಿಡದೇ ಬರೆದು ಒ೦ದು
ಪ್ರೇಮ ಪತ್ರ ತಿಳಿದೋ
ತಿಳಿಯದೇಯೋ ಕೊಟ್ಟು
ಕಳುಹಿಸಿದ್ದ ನನ್ನ ಗ೦ಡನ ಹತ್ರ ........

ಸ್ವಾರ್ಥ
ಕಳೆದು ಹೋಗುತಿದೆ ಮನವು
ಕಾಣದ ಕೈಗಳ ಸ್ವಾರ್ಥದಲಿ
ಕಳೆದುಕೊಳ್ಳದಿರು ನಿನ್ನ
ತನವಪರರ ಆಸೆಗಳ ಸಾರ್ಥಕತೆಯಲಿ....

ಅರುಣ ಸಿರಿಗೆರೆ
ನಾ ನಿನ್ನ ತಡೆಯುವುದರೊಳಗಾಗಿ
ನನ್ನೆದೆಯಲ್ಲಿ ಹೆಜ್ಜೆಯೂರಿದೆ
ಏಕೆಂದು ನಾ ಕೇಳುವುದರೊಳಗೆ
ಕಾಣದೆ ನೀ ಮಾಯವಾದೆ
ಗುರುತುಗಳ ಅಳಿಸಲಾಗದೆ
ನಾ ನಿನ್ನ ಹುಡುಕುತ್ತಿದ್ದೆ
ಆದರೆ ನೀ ಕಣ್ತಪ್ಪಿಸಿ
ನನ್ನ ಭಾವಗಳಲ್ಲಿ ಬೆರೆತಿದ್ದೆ......

ಗುರುಜೀ.....
ಗುರುವೇ ಗುರುವೇ ಹೇಗೆ ಬಣ್ಣಿಸಲಿ
ಈ ಗುರುಜಿಯ ಚಟ
ತಿಳಿಯಲಿಲ್ಲ ಈ ಸ್ವಾಮಿಯದು
ಯಾವ ಮಠ
ಜೊತೆಗೆ ಈ ಗುರುವಿಗ್ಯಾಕೆ
ನನ್ನ ಮೇಲೆ ಚುಟುಕ ಬರೆಯುವ ಹಠ .... ..........

ಮುಕ್ತಿ - ಭಕ್ತಿ
ಮಲಗುವಾಗ ನೆನೆ ನೆನೆದು
ಕೈ ಮುಗಿದರೆ ಗುರುವಿಗೆ
ಅದು ಭಕುತಿ ಶಾಶ್ವತವಾಗಿ ಕ
ಣ್ಮುಚ್ಹುವಾಗ ದೇವನೊಲಿದರೇ
ಅದೇ ಮುಕುತಿ ತಿಳಿಯೋ
ಮ೦ಕು ತಿಮ್ಮ ಎ೦ದ ಸರ್ವಜ್ಞ....

ಅವಾ೦ತರ
ಮುತ್ತು ಕೊಟ್ಟ ನಲ್ಲ
ಮಾತೇ ಆಡಲಿಲ್ಲ
ಕೇಳದೇ ಮುತ್ತಿಕ್ಕಿದ್ದಕ್ಕೆ
ಉದುರಿಸಿದ್ದೆ ಅವನ ಹಲ್ಲ ...!

ಒಮ್ಮೊಮ್ಮೆ ಹೀಗೇ .........
ಹೀಗೊಮ್ಮೆ ನೆನಪಾಯಿತು
ನೋವು ನಲಿವಿನ
ಹಿ೦ದಿನ ದಿನಗಳು
ಅಸ್ಟರಲ್ಲೇ ಕ೦ಬನಿಯಿ೦ದ
ಮ೦ಜಾಗಿದ್ದವು
ಈ ನನ್ನ ಕಣ್ಗಳು .......

" ಮರೆಗುಳಿ "
ಮೊನ್ನೆ ಮೊನ್ನೆ
ನೋಡಿದ ಹಾಗಿದೆ ನಿಮ್ಮನ್ನಾ
ಏಲ್ಲೋ ಕೇಳಿದ ಹಾಗಿದೆ
ಈ ನಗುವನ್ನಾ
ನೀವು ಅವರೇ ..ss
ಇಲ್ಲಾ ಇವರೇ ...sss**
ಓ ನೆನಪಾಯಿತು
ಬಿಡಿನೀವು ನಮ್ಮ ಮನೆಯವರೇ...

ಪ್ರತಿ--ಕ್ರಿಯೆ
ಯಾವಾಗಾ
ನಾ ನಿನ್ನ
ಪ್ರೀತಿ ಮಾಡಿದೆನೋ
ಪ್ರಿಯೆ ಅ೦ದಿನಿ೦ದ ಯಾವುದಕ್ಕೂ
ಇಲ್ಲ ನನ್ನ ಪ್ರತಿಕ್ರಿಯೆ ..........

ಹೆಚ್. ಡು೦ಡಿರಾಜ್
ನಮ್ಮ ನಾಡು
ಸುಕದ ಬೀಡು
ನಿಸ್ಟೆಯಿ೦ದ ದುಡಿದರೆ .........
ಎ೦ದ ನಮ್ಮ ಮುಖ್ಯಮ೦ತ್ರಿ
ನಿಸ್ಟೆಯಿ೦ದ ದುಡಿದರೇ ???

2 comments:

Srinivas said...

Tumba Chennagide

http://skigroups.blogspot.com
http://thegooglesearchtoolbar.toolbar.fm

Desi Boy said...

You can also post your Hanigavana/Jokes/Chutuka in Kannadatube.blogspot.com.
Nimma Kavanagalu nijakku chennagide, mathasthu prachara padeyalu Kannadatube.blogspot.com Athava
Nagunaguthanali.blogspot.com ge
beti needi nimma hanigavana sallisi.
Shubavaagali