Tuesday, January 1, 2008

-ಧೀರೇಂದ್ರ ನಾಗರಹಳ್ಳಿ mattu anekara sangraha....

ದ್ರೋಹ...!-----------
ದ್ರೋಹವೆಂದರೆನೆಂದು
ನಿನ್ನಿಂದಲೇ ಕಲಿಯಬೇಕು!
ದಶಕಗಳ ದ್ವೇಷವೆಂಬಂತೆ
ಒಂದುಸಣ್ಣ ಸುಳ್ಳು ಹೇಳಿಬಿಟ್ಟೆ!
ಪ್ರೀತಿಸಿಯೂ "ಪ್ರೀತಿಸಿಲ್ಲ" ವೆಂದು ಬಿಟ್ಟೆ.
ನನ್ನದೊಂದು ಮಾತಿತ್ತು ಅದ
ಮುಗಿಸುವ ಮೊದಲೇ,
ಅಲ್ಲಿಂದ ಹೊರಟು ಬಿಟ್ಟೆ! -ಧೀರೇಂದ್ರ ನಾಗರಹಳ್ಳಿ


ಮುಗಿಯದ ಮಾತು...!
ಮುಗಿಯದ ಮಾತು ನೋರಿಹವು,
ನಮ್ಮಿಬ್ಬರ ನಡುವೆ.
ಬತ್ತಿ ಹೋಗಿಹುದು ಒಲವು,
ಹಮ್ಮು-ಬಿಮ್ಮು ಗಳ ನಡುವೆ.
ನೂರೊಂದು ಕೂಣಿಯುತಿಹವು,
ಉತ್ತರವಿಲ್ಲದ ಪ್ರೆಶ್ನೆಗಳು.
ಕೂಗಿ ಕೆಳಲು ದನಿ ಇರಲಿಲ್ಲ,
ಸೂರೆ ಮಾಡಿದ್ದವು ಭಗ್ನ ಕನಸುಗಳು.
ತಿರುಗಿಯೂ ನೋಡದೆ ಹೊರಟು ಹೋದೆ,
ನಾನಲ್ಲೆ ನಿಂತಿದ್ದೆ ನೀಬರುವೆ ಎಂದು!
ದಿನಗಳೇ ಉರುಳಿದರು ಬಾರದೆ ಹೋದೆ.
ನೀ ಸುಖವ ಕಂಡಿದ್ದೆ
ಮತ್ತೊಬ್ಬರ ತೆಕ್ಕೆಯಲಿ ಮಿಂದು. - ಧೀರೇಂದ್ರ ನಾಗರಹಳ್ಳಿ


ಓ! ಗೆಳತಿ!---------
ಓ! ಗೆಳತಿಯೇ,
ನನ್ನೆದೆಯನ್ನು ಒದ್ದೋಡುವ
,ಇರಾದೆ ಇದ್ದಿದ್ದೇ ಆಗಿದ್ದರೆ,
ಒಂದು ಕಣ್ಸನ್ನೆ ಸಾಕಿತ್ತು!
ಈ ಹೃದಯವನ್ನೆ ಹಾಸಿರುತಿದ್ದೆ,
ನಿನ್ನ ಪಾದದಡಿಗೆ! -ಧೀರೇಂದ್ರ ನಾಗರಹಳ್ಳಿ


ಇನ್ನೇನು ಬೇಕು?
ನಿನ್ನ ಆ ಬಟ್ಟಲು ಕಂಗಳಲಿ,
ನನ್ನದೆ ಬಿಂಬ.
ನನ್ನ ಕನಸುಗಳ ಆ ಪಸೆಯಲಿ,
ನೀನೇ ನೀನು.
ನಮ್ಮಿಬ್ಬರ ಈ 'ಪ್ರೀತಿ'ಗೆಆ
'ಚಡಪಡಿಕೆ'ಗೆ ಇನ್ನೇನು ಬೇಕು? -ಧೀರೇಂದ್ರ ನಾಗರಹಳ್ಳಿ


ಎನ್ನ ಮನದನ್ನೆ
ಎನ ನಲ್ಲೆಯ ಬಗ್ಗೆ
ಏನೆಂದು ವಿವರಿಸಲಿಸರಳ
ಸುಂದರತೆಯ ಸಾಕಾರ ಇವಳು

ಒಲ್ಲದಿಹ ಮಾತಿಗೆ
ಸನ್ನೆಯಲೇ ನಕಾರಪ್ರೀತಿ
ಬಯಸುತಿಹ ಜೀವಕೆ
ಒಲವಿನಲಿ ಸಹಕಾರ
ತುಂಟ ಕುಡಿ ನೋಟದಲೇ
ಸೆರೆ ಹಿಡಿವ ರತಿ ಇವಳು
ಬಳುಕು ನಡೆ ನೀಳ
ಜಡೆಯ ಮನ ಕದ್ದ ಒಡತಿ

ಜತೆಗೂಡಿ ನನ್ನೊಡನೆ
ಎಲೆಯಡಿಕೆ ಮೆಲ್ಲು
ತಲಿಸುದ್ದಿ ಕಂತೆಯ
ಮಹಾಪೂರವನೇ ಕರೆಯುವಳು
ಅವರಿವರ ಸುದ್ದಿ ನಮಗೇತಕೆ
ಬಿಡಿಕೊನೆಯಲ್ಲಿ ನನ್ನ
ಬಾಯ್ಮುಚ್ಚಿಸುವಳೇ ಇವಳು!



ಎನ್ನ ಮನದನ್ನೆ,
ಸೊನ್ನೆಯ ಮೊಗದವಳು
ಕಪಟ,ಅಸೂಯೆಗಳು
ಸೋನ್ನೆ ಇರುವ ಗುಣಡವಳು
ಹೊಗಳಿದರೆ ಕೆನ್ನೆಯಲಿಗು
ಳಿಗಳ ನರ್ತನತೆಗಳಿದರೆ ಮೊಗ,'?'
ಸನ್ನೆಯಲಿ ಪರಿವರ್ತನ
ಹೇಗೆ ಇರಲಿ
ಅವಳು ಎನ್ನ ಮನದನ್ನೆ
ರಾತ್ರಿ ಕನಸಲಿ ಬರುವ
ಕನಸಿನ ಕನ್ಯೆ


ಮರಳಿ ಕನಸಿನೂರಿಗೆ
ದಿನಗಳು ಅದೆಷ್ಟೋ
ಉರುಳಿವೆ ಅಕ್ಷರಗಳ
ಪೋಣಿಸದೆಪದಗಳ ಜೋಡಣೆಗೆ
ಪರದಾಡುವ ಪರಿಸ್ಥಿತಿಯೆ?

ವಿನಾ ಕಾರಣ
ಕೊಡಲೇಕೆ ಹಲವು
ನೆಪಗಳ ಕಂತೆಮತ್ತೆ ನ
ಡೆಯುದಿಲ್ಲಿ ಕನಸುಗಳ ಕಂತೆಹೊತ್ತು
ಆಸೆಗಳ ಸಾಗಿಹೆನು ಕನಸಿ
ನೂರಿನ ಕಡೆಗೆತೇಲಿ
ಸಾಗಲು ಜತೆಗೆ ಬರುವೆಯಾ
ನನ್ನೊಡನೆ?

ಪದಗಳ ಪರದಾಟವಲ್ಲ,
ಕೋಟಿ ಪದಗಳಲಿ,
ಕೋಟಿ ಬಾಳುವ
ಪದಗಳ ಹೆಕ್ಕುವ ಪೀಕಲಾಟ!
ಕಂತೆ ಕನಸುಗಳಿರುವಾಗ
ಕಾರಣಗಳ ಬೊಂತೆ ಏಕೆ?
ಆಸೆಗಳ ಮೂಟೆ ಹಂಚುವೆಯಾದರೆ,
ಜತೆಗೆ ಬರುವೆ ನಿನ್ನ ಕನಸಿನ ಊರಿಗೆ....


ವಾಹ್.. ವಾಹ್.. ಅದ್ಬುತ..!!

ವಾಹ್.. ವಾಹ್.. ಅದ್ಬುತ..!!
ಶೈಲಜರವರ ಕಾವ್ಯ
ಸುಧೆಗೆ ಅಡೆತಡೆ ಇಲ್ಲ..!
ದೀಪಕರ ಚುಂಬಕ
ಉತ್ತರಕ್ಕೆ ಸರಿಸಾಟಿಇಲ್ಲ..!!

ಮಾಲಿನಿಯವರ ಅಕ್ಷರ
ನೈವಿಕೆಗೆ ಮನಸೋಲ
ದವರಿಲ್ಲವೇ ಇಲ್ಲ..!!
ಕನಸಿನೊರ ಪಯಣದಲ್ಲಿ
ಪಯಣಿಗನು ನಾನುಕೈಯೊಳಾಸೆ
ಮೊಟೆ ಹೊತ್ತಿ ಪಯಣಿಸುತಿಹೆನು..!
ಕನಸಿನೊರ ದಾರಿ ಕಾಣಲು
ಬೆಟ್ಟಗುಟ್ಟವ ಸುತ್ತಿ..!

ಕಂಡ ಕನಸ ಕೈಯಲಿಡಿಯುವ
ಹೆಬ್ಬಯಕೆಯನೊತ್ತಿ
ಕನಸುಗಾರ ನಾನು,
ಕನಸಕಾಣ್ವುದೆ ನನ್ನ ಕಾರ್ಯ
ಕನಸಿಲ್ಲದ ಅರೆಕ್ಷಣವು ಏನ್ನಲಿಲ್ಲ,
ಇದುವೆ ಆಸ್ಚರ್ಯಕನಸಿನಲ್ಲಿ
ಏನ್ನಮನವು ಸಧಾ ಮಗ್ನವಾಗಿಹುದು...!

ಮಗ್ನತೆಯ ಮಾದುರ್ಯದಿ
ಇಹವನೆ ಮರೆತಿಹುದು..!
ಕನಸಿನೊಲುಮೆ ಏನ್ನಮೇಲೆ
ಇಹುದು ಸಪ್ತಕಡಲಿನಸ್ಟು
ಕಂಡದೆಲ್ಲ ನನಸಮಾಡಿ
ಹೊಸಗನಸ ಸಿಹಿ ಸವಿಯಬಿಟ್ಟು
ಕನಸಕಾಣ್ವ ಆ ಸಮಯವೆ
ಮಕರಂದದ ಸಿಹಿಯಂತೆ..!
ಕನಸು ಮಿಡಿವ ಮದುರ
ಮಾತೆ ಜೇಂಕಾರದ ಸುದೆಯಂತೆ..!

ಕನಸಿನೊರ ನಾಸೇರ್ವೆನು
ಬೇದಿಸೆಲ್ಲ ಆತಂಕದಡೆ
ತಡೆಕನಸ ಕಾಣ್ವ ಗಳಯರನೆಲ್ಲ
ಕೊಡಿಸುವೆನು ಏನ್ನೊಡೆ
ಕಣ ಕಣದ ಏನ್ನುಸಿರಿದು
ರಚಿಸಿದೆ ಕನಸಿನೊರಿನೆಸರ..!
ಕಂಡೆಲ್ಲ ಕನಸ ನನಸಾಗಿಸಿ
ತ್ಯಜಿಸೆ ಸಿದ್ಧ ಈ ಉಸಿರ..!!
ಕನಸಿನೊರ ಪಯಣದಲ್ಲಿ
ಪಯಣಿಗನು ನಾನು..!
ಕನಸಿನಲ್ಲು ಕನಸಿನೊರ
ಕ್ಷಣದಿ ಸವಿಯ ಬಯಸಿಹೆನು..!! -ಯುವಪ್ರೇಮಿ



ಹೀಗಿತ್ತು ನನ್ನ ಪಯಣ

ಮರಳ ಕಣಗಳುರಿಳಿದಂತೆ ..
ಇರುಳು ಸಣಿಹ ಬಂದಿತು ..
ದಿನದ ದನಿವ ನಲಿವ ಕಂಡ
ಕಣ್ಣನು ರೆಪ್ಪೆ ತಾನು ಮುಚ್ಚಿತು
ಕನಸುಗಳ ಗುಡ್ಡೆ ಹಾಕಿ
ಒಂದೊಂದೇ ಹಂಚಿಹನು
ಚಂದ್ರಾಮನು ತಾರೆ ಸಖೀಯರೆಲ್ಲ
ಕೂಡಿ ಆಲ್ಲಿ ನಗುವ ಔತಣ ನಿ
ದ್ರೆ ಊರಿನಲ್ಲಿ ಸುಗ್ಗಿಯ ಸಂಭ್ರಮ
ನೀಡಿರೇ ಊರ ರಾಣಿ ಬಂದು
ನನ್ನ ನಲ್ಲಿ ಕಂಡಳೂ ಪ್ರೀತಿಯಿಂದ
ಆಪ್ಪಿ ನನ್ನ ನೂರಮುತ್ತಾ
ಕೊಟ್ಟಳು ಕನಸುಗಳು ಹೊತ್ತ
ನಾನು ಸಾಗಿದೆ ಉದಯ ರವಿಯ
ಮೊದಲ ಕಿರಣ ಬಂದು ನನ್ನ
ಮುತ್ತಲು ಬೆಳಕು ಹರಿದು
ಸಾರಿದ ರಾತ್ರಿ ಕತ್ತಲು ಹೊಸ
ದಿನದ ಹೊಸ ಬದುಕ ಜೀವಕಲೆಯ ಬಿತ್ತಲೂ




ನನ್ನ ಒಂದು ಪುಟ್ಟಗವನ ಹನಿಗೆ ನೀವೆಲ್ಲ ಸೇರಿಸಿದಿರಿ ನೂರೆಂಟು ಹನಿಗಳನುಪ್ರತ್ಯುತ್ತರದ ಝರಿ ನಿಲ್ಲದಿರಲಿ ಎಂದೂಕವಿಗನಸು ಅದೇ ತಾನೆ " DAM" ತುಂಬಲಿಯೆಂದು .....

4 comments:

Unknown said...

VERY NICE
ಮಾತಾಡದೆ ಮೌನದಲ್ಲೇ ಎಲ್ಲ ಹೇಳುತ್ತಿದ್ದವ ನೀನು
ಮಾತಾಡಿ ಮನವೊಲಿಸುವ ಹಠವಾದರೂ ಏಕೆ ನಿನಗೆ ?
ನಿನ್ನ ಮೌನದ ಆಳದಲ್ಲಿಳಿದು ನಿನ್ನ ಮನವನರಿಯಲು ಹೋಗಿ
ಮಾತುಗಳೇ ಮರೆತು ಹೋಗಿದವು ನನಗೆ !

Unknown said...

ಮೌನವೆಂಬ ಅಂಗಳದಲಿ.....
ಮನಸ್ಸೆಂಬ ಧೋಣಿಯಲಿ..
ನೀನಾಡಿ.....ಮರೇತ....ಮಾತು.....ಕಡಲಾಲದಲಿ.......!

Unknown said...
This comment has been removed by the author.
Unknown said...

ನಾ ಬಿಸಿದ್ದೆ ಬಲೆ
ಸಿಕ್ಕಿದ್ದು ಮೀನಲ್ಲ
ನೀನು....