Tuesday, February 5, 2008

ರಶ್ಮಿ ಪೈ and ಡಾ| ಶ್ರೀಕೃಷ್ಣ ಭಟ್ ಅರ್ತಿಕಜೆ

ವಿಚಿತ್ರ
- ಡಾ ಶ್ರೀಕೃಷ್ಣ ಭಟ್ ಅರ್ತಿಕಜೆ

ಇಂದು ಈ ಲೋಕದಲಿ ಎಲ್ಲವೂ ವಿಚಿತ್ರ
ಕಾಣದಾಗಿದೆ ಯಾವುದರ ಬಗೆಗೂ ಸ್ಪಷ್ಟ ಚಿತ್ರ
ತಲೆಕೆಳಗು ಕಾಲು ಮೇಲೆ ಬಲು ವಿಪರೀತ
ದೊರೆಯದಾಗಿದೆ ಬದುಕಿನ ವಿವರ ಸಚಿತ್ರ
ನೋಡಿದರೆ ಇಲ್ಲಿ ಎಲ್ಲವೂ ಹಿಂದು ಮುಂದು
ಕಂಡ ಕಂಡಲ್ಲಿ ಕಾಣುತಿದೆ ಬಹಳ ಕುಂದು
ಸರಿಯಾಗಲಾರದಿದು ಎಂದೆಂದು
ದೇವರೇ ಯತ್ನಿಸಿದರು ಧರೆಗಿಳಿದು ಬಂದು
ವಿಚಾರಿಸಿದರೆ ಇಲ್ಲಿ ಎಲ್ಲವೂ ತಿರುಗು ಮುರುಗು
ಪ್ರತಿಯೊಬ್ಬರಿಗು ಅವರವರದೇ ಕೊರಗು
ಯೋಚಿಸಿ ನೋಡಿದರರೆ ಎಲ್ಲಡೆಯು ಅತಿ ಬೆರಗು
ತಿಳಿಯಲಾರದು ಕೆಲವರ ಒಳಗು ಹೊರಗು
ಯಾವುದು ನಾವು ನೆನೆದಂತೆ ಇಲ್ಲ
ಕ್ಷಣ ಮಾತ್ರದಲ್ಲಿ ಭಗ್ನ ನಮ್ಮ ಹೊಂಗನಸೆಲ್ಲ
ವರುಷಗಟ್ಟಲೆ ಶ್ರಮಿಸಿ ಮಾಡಿದ ಯೋಜನೆಗಳೆಲ್ಲ
ನೀರ ಮೇಲಿನ ಹೋಮ ಯಾವುದೇ ಫಲವಿಲ್ಲ
ಸರಿತಪ್ಪು ನ್ಯಾಯಾನ್ಯಾಯ ನಿರ್ಧರಿಪರಾರು?
ಅರ್ಹತೆ ಅನರ್ಹತೆಯ ತಿಳಿಸುವವರಾರು?
ಯೋಗ್ಯತೆ ಅಯೋಗ್ಯತೆಗೆ ಬೆಲೆ ಕಟ್ಟುವವರಾರು?
ಅಯೋಗ್ಯ ಅನರ್ಹ ಜನರಿಂದ ತುಂಬಿರಲು ಊರು
ಎಲ್ಲಿ ಹೋದರು ಅಲ್ಲಿ ನಡೆದಿದೆ ಲಂಚಾವತಾರ
ಯಾವುದೇ ಕ್ಷೇತ್ರವನು ಬಿಟ್ಟಿಲ್ಲ ರಾಜಕೀಯ ಜಾತಿ
ಮತ ವರ್ಗಕ್ಕೆ ಮೇಲ್ಮಣೆ ನೀತಿಗಭಾವ ಸುಶಿಕ್ಷಿತ
ಜನರೆ ತೋರುವರು ಭೇದಭಾವ ಎಲ್ಲಿ ನೋಡಿದರಲ್ಲಿ
ಮೆರೆದಿದೆ ಭ್ರಷ್ಟಾಚಾರ ಇಲ್ಲ ಯಾರಲೂ ಸತ್ಯ
ನ್ಯಾಯ ಶಿಷ್ಚಾಚಾರ ಶ್ರದ್ಧೆ ಪ್ರಾಮಾಣಿಕತೆ
ಸಾಗಿಹುದು ಬಲು ದೂರಇದುವೆ ಆಧುನಿಕ ಜನ
ಜೀವನದ ಸಾರಬರಬಹುದು ಬೇಗದಲೆ ಮುಂದೊಂದು ಸುದಿನ
ಎಲ್ಲವೂ ಸರಿಯಾಗಿ ನಡೆವ ಆ ಶುಭದಿನ ಬುದ್ಧ
ಗಾಂಧಿಯ ತೆರದಿ ಬರಲಿ ಯುಗಪುರುಷ
ತುಂಬಲೆಲ್ಲರ ಮನಕೆ ಶಾಂತಿ ನೆಮ್ಮದಿ ಹರುಷ..........................
.,.,.,..,.,.,.,.,.,.,.,.,.,.,.,..,.,..,.,.,.,.,.,..,.,.,.,.,.,..,.,.,.,.,.,.,..,.,.,.,..,.,.,.,.,.,..,..

ಕಿಂಡಿಗಳು ಮುಚ್ಚಿವೆ !
- ರಶ್ಮಿ ಪೈ
ನಾವು,
ಬಳಲಿ ಬೆಂಡಾದವರು ಬೆವರು ನೀರ
ಸುರಿಸಿ ಎದೆಗೂಡನುಬ್ಬಿಸಿ
ಮೂಳೆ ಮುರಿತದ ಹೊತ್ತಲೂ
ಸತ್ತು ಬೇಸತ್ತನಾವು ಕೂಲಿಯವರು 1

ಚಿತ್ರ
ವಿಚಿತ್ರ ಛಾಯೆಗಳು ಅಸ್ಪಷ್ಟ
ಬದುಕ ಚಿತ್ರದ ಮೇಲೆ
ಚಿತ್ತಾರ ಬರೆದಿರಲು
ಮಬ್ಬು ಕತ್ತಲೆಯಲಿ ಕಣ್ಣು
ಮಿಟುಕಿಸುವ ನಾವು ಕೂಲಿಯವರು 2

ಬದುಕು-ಬವಣೆಯ
ನಡುವೆ ಹರಿದ-ಕರಿದ
ಬೆಂದ ರೊಟ್ಟಿಗಳ
ಒಳಗೆ ರಕ್ತ ಮಡುಗಟ್ಟಿ
ಎದೆಗುಂದದೆ ಈಸಿ ಜೈಸುವ
ನಾವು ಕೂಲಿಯವರು 3

ಬಂದು ಕೊಂದು
ತಿಂದ ಜನರೆಡೆಯಲಿ
ರಕ್ತದೋಕುಳಿಯ ಮಾಸದಾ
ಹೆಜ್ಜೆಯದುನಾತ ಬೀರುವ
ಕೊಳೆತ ಅಸ್ಥಿಮಜ್ಜೆಯೆಡೆಯಲ್ಲಿ
ಹಗಲಿರುಳೆನ್ನದೆ ದುಡಿವ
ನಾವು ಕೂಲಿಯವರು 4

ಹಬ್ಬ ದಿಬ್ಬಣದಿ
ಹಿಟ್ಟಿರದ ಬರಿ ಹೊಟ್ಟೆ
ಮುರುಕಲು ಗುಡಿಸಲ
ಹಳೆ ಮಂಚದಲಿ
ಗೆದ್ದಲು ಕೆಡವಿ ಬಣ್ಣ ತೊಯ್ದ ಉಡು
ಬಟ್ಟೆಆದರೂ ಗಟ್ಟಿಯಿದೆ
ನಮ್ಮ ರಟ್ಟೆನಾವು ಕೂಲಿಯವರು 5

ಕನಸುಗಳ ಹೆಣೆಯುವೆವು ಆ
ಒಣದೇಹದ ಬತ್ತಿದಾ ಹೃದಯದಲಿನ
ಭವ ಚುಂಬಿಸಿ, ತಾರೆಗೀಳಲು ಸದಾ
ಬಯಸುವೆವು ಮೇಲೆ ಬರಲೆಂದೂ
ನಾವು ಕೂಲಿಯವರು 6

ಏಳ ಬಯಸುವೆವು
ಶಿರವೆತ್ತಿ ದೊಡ್ಡ ಪಾದಗಳ
ದಮನ ತುಳಿತಗಳಡಿಯಿಂದ
ರವಿ ರಶ್ಮಿಯ ಮುಂದೆ
ದೀವಟಿಗೆ ಹಿಡಿದು
ಚಂದಿರನ ಮಡಿಲಲ್ಲಿ ಜೋ
ಹಾಡಲಿರುವ ನಾವು ಕೂಲಿಯವರು 7

ನಾವು ಅಳುವುದಿಲ್ಲ ಅತ್ತಿಲ್ಲ
ದಿನಾ ಅಳುವವರಿಗೆ ಎಲ್ಲಿಂದ
ಕಣ್ಣೀರು?ರಕ್ತ ಹಿಂಡಿದರೆ
ರಕ್ತವೂ ಖಾಲಿಜೀವನದ ಗೋಳೇ
ನಮ್ಮ ಈದ್, ಹೋಳಿ !
ನಾವು ಕೂಲಿಯವರು 8

ಎಂದೆನಿತು ಬಾಯ್ತೆರೆದರೆ,
ಪ್ರತಿದನಿ ಇಲ್ಲಹಣತೆ ಬೆಳಕ
ಹೊರ ಸೂಸುವುದೂ ಇಲ್ಲ
ಕಣ್ತೆರೆದ ಜನರಾವರಿಸಿದೆ
ದರ್ಪದಾ ಪೊರೆಭೋರ್ಗರೆವ
ದುಃಖದಲ್ಲಡಗಿದೆ ನಮ್ಮ ಕರೆಇದೇನು ಮಹಾ?
ಕಿಂಡಿಗಳು ಮುಚ್ಚಿವೆಯಲ್ಲಾ!!!! 9
,.,.,.,.,.,..,.,.,..,.,.,.,.,.,.,.,.,.,.,.,.,.,.,.,.,.,.,..,.,..,.,.,..,..,.,.,.,.,.,.,.,..,.,.,.,.

ನಿರೀಕ್ಷೆ....
- ರಶ್ಮಿ.ಪೈ
ಕಾದು ಕುಳಿತಿರುವೆ ಕವಿತೆಗಾಗಿ
ಮುಂಜಾನೆಯ ಇಬ್ಬನಿಯಲಿ
ಮೈನೆನೆವ ಹಸಿರು ಹುಲ್ಲುಗಳ ನೋಡಿ...
ಕವಿತೆ ಬರೆಯ ಬೇಕೆಂದೆನಿಸಿತು
ಆದರೆ ಅವು, ನನಗೆ ಕಂಬನಿಗಳಂತೆ ಕಂಡವು
ಮನಸ್ಸಿನಲ್ಲಿ ದುಗುಡ, ಕೈ ನಡುಗಿತು
ಬರೆಯಲಾಗದು ನನ್ನಿಂದ ಕವಿತೆ....

ಎಳ ಬಿಸಿಲ ಹೊಂಗಿರಣ
ದಿನಗುವ ಸೂರ್ಯಕಾಂತಿಯ ನೋಡಿ
ಬರೆಯ ಬೇಕೆನಿಸಿತು ಕವಿತೆ..ಮತ್ತೊಮ್ಮೆ,
ಅದೇ ಯೋಚನೆಮುಸ್ಸಂಜೆಗೆ ಮುದುಡಿ
ಹೋಗುವ ಈ ಸುಮದ ಬದುಕು, ಅದೇ
ನಡುಕಎಂದೆನಿತು ಕವಿತೆ ಬರೆಯಲೇನು?

ಉರಿಯುವ ಮಧ್ಯಾಹ್ನದ ಬೇಗೆಯಂತೆ
ಮನದಾಳದ ಯಾತನೆ...ಮುಸ್ಸಂಜೆಯಲಿ
ಬಿರಿಯುವ ಬಯ್ಯ ಮಲ್ಲಿಗೆ, ಗೂಡು ಸೇರುವ
ಹಕ್ಕಿಚುಕ್ಕಿಯಂತೆ ನಭದಲ್ಲಿ ತೋರುತಿರಲು
ಕವಿತೆಗಾಗಿ ಹುಡುಕಿದರೆ ಪದ ಪುಂಜಗಳು
ಸಿಗಲೇ ಇಲ್ಲ....ಏನ ಬರೆಯಲಿ ನಾ?

ಬಿರಿದ ಬಾನಂಗಳದಿ
ನಸುನಗುವ ಚಂದಿರ, ಇ
ಕ್ಕೆಲಗಳಲ್ಲಿ ಕಣ್ಣು ಮಿಟುಕಿಸುವ
ತಾರೆಗಳತ್ತ ದೃಷ್ಟಿ ಹಾಯಿಸಿರೆ...
ಆಗೊಮ್ಮೆ ಈಗೊಮ್ಮೆ ಬೀಳುವ ಉಲ್ಕೆಗಳಂತೆ
ಜೀವನದಿ ಕಷ್ಟ ಸುಖಗಳ ದ್ವಂದ್ವ..
ಒಂದೆರಡು ಸಾಲು ಬರೆಯಲು ತಡಕಾಡಿದರೆ
ಮುನಿಸೇತಕೆ ನಿಮಗೆ? ಕವಿತೆಗಳೇ ನೀವು ಬರುವಿರೆಂದು?
,.,.,..,.,.,.,..,.,..,.,...,..,,..,.,..,.,.,.,..,.,..,.,.,.,,..,.,..,.,..,.,..,.,..,.,..,...,.,.,.

No comments: