Tuesday, February 26, 2008

ಜಯಂತ್ AVARA MANASSINDA...

ಸೂರ್ಯನ ಸೋಲು
ಬೆಳ್ಳಿಯ ಚುಕ್ಕಿ
ಕತ್ತಲ ಹೆಕ್ಕಿ
ತಳ್ಳಿತಾಚೆ ನಭದಿಕಳ್ಳ ಹೆಜ್ಜೆ ಇಡುತ

ಪರಸ್ಪರ ದೂರಾಗುತ
ಹೊನ್ನ ಕಿರಣಗಳ ಅವರೋಹಣ
ಕಣ್ಣಮರೆಸಿ,ಬೆಳಕ ಹರಿಸುವಾ
ಇಂದಾದರು ನಮ್ಮದೇ ಜಯವು
ಮನದಿ ನೆನೆವವುಯಾವ ಶಾಪವೋ,
ಇನ್ನಾವ ಪುರುಷಾರ್ಥವೋ?
ಕತ್ತ ಮೀಟಿ,ತಲೆಯ ಕುಣಿಸಿ
ಕ್ಕೊಕ್ಕೊಕ್ಕೊ.....ಕ್ಕೋ!!!!

ಈ ಕವನದ ಮೂಲ ಕರ್ತೃ - ಕುಕ್ಕುಟೇಶ.ಹಕ್ಕುಗಳನ್ನು ಹೆಕ್ಕಲಾಗಿದೆ.

2}ಹೊಸ-ಊರು,ರೋಡು
ನೀವು ಬೆಂಗಳೂರಿನವರೇ..?ಬೆಂಗಳೂರಿಗೆ ಹೋಗಿ ಬಂದಿರೇ?ಹೊಸೂರು ರೋಡ್ ಗೊತ್ತಲ್ಲವೇ.?ಐ.ಟಿ,ಬಿ.ಟಿ ಯವರಾದರಂತೂ ಗೊತ್ತೆ ಇರಬೇಕಲ್ಲವೇ..?ಇದು ಹೊಸೂರು ರೋಡು.ಎಲ್ಲಿಂದ ಎಲ್ಲಿ ನೋಡಿದರೂನಿಂತ ಕಾರು,ಬಸ್ಸು,ಲಾರಿ ಲೋಡು.ಹೀಗಿರಲಿಲ್ಲವಂತೆ...!ವರುಷಗಳ ಹಿಂದೆ,ಇಲ್ಲಿ..ಈ ದಟ್ಟಣೆ,ಸಂಘರ್ಷಣೆ.ವೇಗವಾಗಿ ಓಡುತ್ತಿದ್ದವಂತೆಹಲ-ಕೆಲಬಸ್ಸು ಲಾರಿಗಳು.ಹೌದೌದು,,,ಎಲ್ಲ ಹೇಳುವುದದೇಐಟಿ.ಬಿಟಿ ಯ ಬೆಳವಣಿಗೆ,ಅಪಾರವಂತೆ..!!ಇಲ್ಲಿ ಹೀಗೆ ಒಮ್ಮೆಕಾರಿನಲ್ಲಿ ಕುಳಿತಾಗಓಹ್..ಮರೆತೆನೇ..?ಇಲ್ಲಿಯ ಡ್ರೈವಿಂಗ್ ಹೆಸರು"ಬಂಪರ್ ಟು ಬಂಪರ್".ಭಾಗ್ಯಲಕ್ಷ್ಮಿಯಲ್ಲ !!ಇರಕೂಡದು..ನನ್ನ,ಹಿಂದಿನ ಮುಂದಿನಅಕ್ಕ,ಪಕ್ಕದ ಗಾಡಿಗೂಸೆಂಟಿಮೀಟರ್ ಜಾಗ."ಸಮಯಸಾಧಕರಿದ್ದಾರೆ"ಎಚ್ಚರ.ಒಂದು ಸಂಜೆ,ಮುಚ್ಚಿದ ಕಿಟಕಿ,ಅರಚುವ ಬಾನುಲಿ,ಬೊಮ್ಮನಹಳ್ಳಿ ಜಂಕ್ಶನ್.ಐದು,ಹತ್ತು..ಇಪ್ಪತ್ತುನಿಮಿಷಗಳೋ?ಬೋಡುತಲೆಗೆ ತೊಟ್ಟಿಕ್ಕುವತಣ್ಣನೆ ನೀರ ಹನಿಗಳು.ಐದೈದು ನಿಮಿಷಕ್ಕೊಮ್ಮೆಒಂದು.ಒಂದೇ~ ಹೆಜ್ಜೆ ಇಡುತ....ನಡೆದಿತ್ತು.ಎಂಜಿನ್ ನಿಲ್ಲಿಸುವಂತಿಲ್ಲ,ಮುಖದ ಗಂಟೂ ಬಿಡಿಸುವಂತಿಲ್ಲ.ಪಕ್ಕದಲ್ಲಿ ನಮ್ಮದೋ,ನೆರೆಯವರದ್ದೋಆಫ಼ೀಸೂ - ಬಸ್ಸು.ಬ..ಳ..ಲಿ...ಬೆಂದು,ನಿದ್ರಿಸುವ,ಎಫ಼್.ಎಮ್ ಗಳ ಅಬ್ಬರದಿ ವಿಹರಿಸುವ,ಸಾಫ಼್ಟ್-ವೇರ್ ಎಂಜಿನಿಯರ್ ಗಳು.ನನ್ನ ಕಾರಿಗೂ,ರಸ್ತೆ ವಿ-ಭಜಕಕ್ಕೂ..ಇದ್ದೂದೊಂದೇ ಅಡಿ.ಯಾವುದೋ....ಹಾಡ ಕೇಳುತಮೈಯ್ಯ ಮರೆತವನಎಚ್ಚರಿಸಿದ್ದು,ಸುಂಯ್ಯನೆ ಬಂದು,ಗಕ್ಕನೆ ನಿಂತಸ್ಚೂಟರು..ಮೇಲೊಬ್ಬ ಜೋಕರು.ನಕ್ಕನೊಮ್ಮೆ ನನ್ನ ನೋಡಿನಾನು ನಕ್ಕೆ,ದೇಶಾವರಿ.ಏನು ಟ್ರಾಫ಼ಿಕ್ಕು ಸಾರ್..!ಸರ್ಕಾರ ಅದೇನು ಮಾಡತೈತೋ..?ಅಲ್ಲವೇ..?ಯೋಜನಾ ಆಯೋಗದಲ್ಲಿನಾನಿಲ್ಲವೇ..?ಮತ್ತೊಮ್ಮೆ ನಕ್ಕೆ.ನೀವೂ ಸಾಫ಼್ಟ್ ವೇರಾ..? ಸಾರ್ಹೌದೆಂದೆ.ಬರಿದಾಗದ ಬತ್ತಳಿಕೆ,"ಇನ್ನ ಎಷ್ಟು ವರುಶ ಸಾರ್ ಹಿಂಗೆ..???"ಜಯಂತಬಾಬು

2 comments: