ಸೂರ್ಯನ ಸೋಲು
ಬೆಳ್ಳಿಯ ಚುಕ್ಕಿ
ಕತ್ತಲ ಹೆಕ್ಕಿ
ತಳ್ಳಿತಾಚೆ ನಭದಿಕಳ್ಳ ಹೆಜ್ಜೆ ಇಡುತ
ಪರಸ್ಪರ ದೂರಾಗುತ
ಹೊನ್ನ ಕಿರಣಗಳ ಅವರೋಹಣ
ಕಣ್ಣಮರೆಸಿ,ಬೆಳಕ ಹರಿಸುವಾ
ಇಂದಾದರು ನಮ್ಮದೇ ಜಯವು
ಮನದಿ ನೆನೆವವುಯಾವ ಶಾಪವೋ,
ಇನ್ನಾವ ಪುರುಷಾರ್ಥವೋ?
ಕತ್ತ ಮೀಟಿ,ತಲೆಯ ಕುಣಿಸಿ
ಕ್ಕೊಕ್ಕೊಕ್ಕೊ.....ಕ್ಕೋ!!!!
ಈ ಕವನದ ಮೂಲ ಕರ್ತೃ - ಕುಕ್ಕುಟೇಶ.ಹಕ್ಕುಗಳನ್ನು ಹೆಕ್ಕಲಾಗಿದೆ.
2}ಹೊಸ-ಊರು,ರೋಡು
ನೀವು ಬೆಂಗಳೂರಿನವರೇ..?ಬೆಂಗಳೂರಿಗೆ ಹೋಗಿ ಬಂದಿರೇ?ಹೊಸೂರು ರೋಡ್ ಗೊತ್ತಲ್ಲವೇ.?ಐ.ಟಿ,ಬಿ.ಟಿ ಯವರಾದರಂತೂ ಗೊತ್ತೆ ಇರಬೇಕಲ್ಲವೇ..?ಇದು ಹೊಸೂರು ರೋಡು.ಎಲ್ಲಿಂದ ಎಲ್ಲಿ ನೋಡಿದರೂನಿಂತ ಕಾರು,ಬಸ್ಸು,ಲಾರಿ ಲೋಡು.ಹೀಗಿರಲಿಲ್ಲವಂತೆ...!ವರುಷಗಳ ಹಿಂದೆ,ಇಲ್ಲಿ..ಈ ದಟ್ಟಣೆ,ಸಂಘರ್ಷಣೆ.ವೇಗವಾಗಿ ಓಡುತ್ತಿದ್ದವಂತೆಹಲ-ಕೆಲಬಸ್ಸು ಲಾರಿಗಳು.ಹೌದೌದು,,,ಎಲ್ಲ ಹೇಳುವುದದೇಐಟಿ.ಬಿಟಿ ಯ ಬೆಳವಣಿಗೆ,ಅಪಾರವಂತೆ..!!ಇಲ್ಲಿ ಹೀಗೆ ಒಮ್ಮೆಕಾರಿನಲ್ಲಿ ಕುಳಿತಾಗಓಹ್..ಮರೆತೆನೇ..?ಇಲ್ಲಿಯ ಡ್ರೈವಿಂಗ್ ಹೆಸರು"ಬಂಪರ್ ಟು ಬಂಪರ್".ಭಾಗ್ಯಲಕ್ಷ್ಮಿಯಲ್ಲ !!ಇರಕೂಡದು..ನನ್ನ,ಹಿಂದಿನ ಮುಂದಿನಅಕ್ಕ,ಪಕ್ಕದ ಗಾಡಿಗೂಸೆಂಟಿಮೀಟರ್ ಜಾಗ."ಸಮಯಸಾಧಕರಿದ್ದಾರೆ"ಎಚ್ಚರ.ಒಂದು ಸಂಜೆ,ಮುಚ್ಚಿದ ಕಿಟಕಿ,ಅರಚುವ ಬಾನುಲಿ,ಬೊಮ್ಮನಹಳ್ಳಿ ಜಂಕ್ಶನ್.ಐದು,ಹತ್ತು..ಇಪ್ಪತ್ತುನಿಮಿಷಗಳೋ?ಬೋಡುತಲೆಗೆ ತೊಟ್ಟಿಕ್ಕುವತಣ್ಣನೆ ನೀರ ಹನಿಗಳು.ಐದೈದು ನಿಮಿಷಕ್ಕೊಮ್ಮೆಒಂದು.ಒಂದೇ~ ಹೆಜ್ಜೆ ಇಡುತ....ನಡೆದಿತ್ತು.ಎಂಜಿನ್ ನಿಲ್ಲಿಸುವಂತಿಲ್ಲ,ಮುಖದ ಗಂಟೂ ಬಿಡಿಸುವಂತಿಲ್ಲ.ಪಕ್ಕದಲ್ಲಿ ನಮ್ಮದೋ,ನೆರೆಯವರದ್ದೋಆಫ಼ೀಸೂ - ಬಸ್ಸು.ಬ..ಳ..ಲಿ...ಬೆಂದು,ನಿದ್ರಿಸುವ,ಎಫ಼್.ಎಮ್ ಗಳ ಅಬ್ಬರದಿ ವಿಹರಿಸುವ,ಸಾಫ಼್ಟ್-ವೇರ್ ಎಂಜಿನಿಯರ್ ಗಳು.ನನ್ನ ಕಾರಿಗೂ,ರಸ್ತೆ ವಿ-ಭಜಕಕ್ಕೂ..ಇದ್ದೂದೊಂದೇ ಅಡಿ.ಯಾವುದೋ....ಹಾಡ ಕೇಳುತಮೈಯ್ಯ ಮರೆತವನಎಚ್ಚರಿಸಿದ್ದು,ಸುಂಯ್ಯನೆ ಬಂದು,ಗಕ್ಕನೆ ನಿಂತಸ್ಚೂಟರು..ಮೇಲೊಬ್ಬ ಜೋಕರು.ನಕ್ಕನೊಮ್ಮೆ ನನ್ನ ನೋಡಿನಾನು ನಕ್ಕೆ,ದೇಶಾವರಿ.ಏನು ಟ್ರಾಫ಼ಿಕ್ಕು ಸಾರ್..!ಸರ್ಕಾರ ಅದೇನು ಮಾಡತೈತೋ..?ಅಲ್ಲವೇ..?ಯೋಜನಾ ಆಯೋಗದಲ್ಲಿನಾನಿಲ್ಲವೇ..?ಮತ್ತೊಮ್ಮೆ ನಕ್ಕೆ.ನೀವೂ ಸಾಫ಼್ಟ್ ವೇರಾ..? ಸಾರ್ಹೌದೆಂದೆ.ಬರಿದಾಗದ ಬತ್ತಳಿಕೆ,"ಇನ್ನ ಎಷ್ಟು ವರುಶ ಸಾರ್ ಹಿಂಗೆ..???"ಜಯಂತಬಾಬು
Subscribe to:
Post Comments (Atom)
2 comments:
ªÀĺÁgÁeï ¥ÉæêÀÄ ¥Àæ¸ÀAUÀ
ujioyorj
Post a Comment